ಗುಲ್ಮೊಹರ್‌ ಸೊಬಗಿಗೆ ದಾರಿಹೋಕರು ಫಿದಾ


Team Udayavani, Apr 26, 2019, 3:01 PM IST

cham

ಗುಂಡ್ಲುಪೇಟೆ: ಬೇಸಿಗೆಯ ಬಿಸಿಲ ತಾಪ ತಾಳಲಾರದ ಈ ದಿನಗಳಲ್ಲೂ ಗುಲ್ ಮೊಹರ್‌ ಹೂವಿನ ಸೊಬಗಿಗೆ ದಾರಿಹೋಕರು, ವಾಹನ ಸಂಚಾರರು ಮಾರು ಹೋಗುತ್ತಿರುವುದು ಕಂಡು ಬರುತ್ತಿದೆ.

ಮೈಸೂರಿನಿಂದ ಪ್ರಯಾಣ ಕೈಗೊಳ್ಳುವ ವಾಹನ ಸವಾರರಿಗೆ, ಪ್ರಯಾಣಿಕರಿಗೆ, ದಾರಿ ಹೋಕರಿಗೆ ನಂಜ ನಗೂಡು, ಬೇಗೂರು, ಗುಂಡ್ಲುಪೇಟೆ ಯಿಂದ ಬಂಡೀ ಪುರ ರಾಷ್ಟ್ರೀಯ ಉದ್ಯಾನದವರೆಗೂ ಅರಳಿ ನಿಂತ ಗುಲ್ಮೊಹರ್‌ ಹೂವಿನ ಅಂದ ಕಣ್‌ ಸೆಳೆಯುತ್ತದೆ.

ಕಣ್ಣನ್ನೇ ಬಿಡಲಾಗುತ್ತಿಲ್ಲ, ಕಣ್ಣರಳಿಸಲು ಕರೆ: ಬೇಸಿಗೆ ಯ ಬಿಸಿಲ ತಾಪದಿಂದ ಉರಿಯುವ ಕಣ್ಣುಗಳನ್ನು ಬಿಡಲಾರದೇ ಕೆಲಕಾಲ ಮನಸ್ಸಿನ ಆಹ್ಲಾದಕ್ಕಾಗಿ ಕಣ್‌ ಮುಚ್ಚುವ ಜನರನ್ನು ಮತ್ತೆ ಕಣ್‌ ತೆರೆಯುವಂತೆ ಪ್ರೇರೇಪಿಸುವ ರೀತಿಯಲ್ಲಿ ಈ ಗುಲ್ ಮೊಹರ್‌ ಹೂಗಳು ಅರಳಿ ನಿಂತಿರುವುದು ಕಣ್‌ ಮನಸೂರೆ ಗೊಳ್ಳುತ್ತದೆ. ಬೇಗೂರು ಹೋಬಳಿಯ ಸುತ್ತ ಮುತ್ತಲ ರಸ್ತೆಯ ಎರಡೂ ಬದಿಗಳಲ್ಲಿ ಗುಲ್ಮೊಹರ್‌ ಮರ ಗಳು ಕೆಂಬಣ್ಣದ ರಂಗುರಂಗಾದ ಹೂಗಳನ್ನು ಬಿಟ್ಟು ನೋಡುಗರನ್ನು ಸೆಳೆಯುತ್ತಿವೆ.

ಶುಭಕ್ಕೂ ಬೇಕು: ಮನೆಗಳಲ್ಲಿ ನಡೆಯುವ ಶುಭ ಸಮಾರಂಭಗಳಿಗೆ ಕಲ್ಯಾಣ ಮಂಟಪ ಹಾಗೂ ಮನೆ ಯ ಆವರಣದಲ್ಲಿ ನಿರ್ಮಿಸಲಾಗುವ ಚಪ್ಪರವನ್ನು ಈ ಮರದ ಹೂಗಳನ್ನು ಬಳಸಿ ಸಿಂಗರಿಸುವುದು ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಯಾವುದೇ ಖರ್ಚಿಲ್ಲದೇ, ದಾರಿ ಮಧ್ಯೆ ಅರಳಿ ನಿಂತ ಸುಂದರ ಹೂವನ್ನು ಶುಭ ಸಮಾರಂಭಗಳಲ್ಲಿ ಬಳಸುವುದು ಒಂದು ಕಡೆಯಾದರೆ, ಶುಭ ಸಮಾರಂಭಗಳಲ್ಲಿ ಅಶುಭವೆಂದು ಕಂಡು ಬರುವ ಕೆಂಪು ಬಣ್ಣದ ಗುಲ್ ಮೊಹರ್‌ ಹೂ ಬಳಸುವುದು ಆಶ್ಚರ್ಯವಾದರೂ ಸತ್ಯ.

ಕಣ್ಮನ ಸೆಳೆಯುವ ಹೂ: ಕಳೆದ ವಾರದಿಂದೀಚೆಗೆ ಸುರಿದ ಮಳೆಯಿಂದ ಬೇಗೂರು ಹೋಬಳಿಯ ರಸ್ತೆ ಬದಿಗಳಲ್ಲಿ ಹೆಚ್ಚಾಗಿ ಕಾಣ ಸಿಗುವ ಗುಲ್ಮೊಹರ್‌ ಮರವು ಬೇಗೂರು ಮತ್ತು ಎಚ್.ಡಿ.ಕೋಟೆ ತಾಲೂಕಿನ ಹೆಡಿಯಾಲ, ಬೇಗೂರು ಹಾಗೂ ಚಾಮರಾಜ ನಗರ ತಾಲೂಕಿನ ಪ್ರವಾಸಿ ಸ್ಥಳ ಕನಕಗಿರಿ ಅಲ್ಲದೇ ರಾಷ್ಟ್ರೀಯ ಹೆದ್ದಾರಿ 766 ಸೇರಿದಂತೆ ರಸ್ತೆಯ ಇಕ್ಕೆಲಗಳಲ್ಲಿ ಕೆಂಬಣ್ಣದ ಹೂ ಬಿಟ್ಟು ನೋಡಿದರೆ ಮತ್ತೂ ಮ್ಮೆ ನೋಡಬೇಕೆನ್ನಿಸುವಂತೆ ಕಣ್ಮನ ಸೆಳೆಯುತ್ತಿದೆ.

ಕೈಬೀಸಿ ಕರೆಯುವ ಪ್ರವಾಸಿ ತಾಣಗಳು: ಪ್ರಖ್ಯಾತ ಪ್ರವಾಸಿ ತಾಣಗಳಾದ ಊಟಿ (ಉದಕಮಂಡಲ), ಹಿಮವದ್‌ ಗೋಪಾಲಸ್ವಾಮಿ ಬೆಟ್ಟ, ಪ್ರಖ್ಯಾತ ಬಂಡೀ ಪುರ ರಾಷ್ಟ್ರೀಯ ಉದ್ಯಾನಕ್ಕೆ ತೆರಳುವ ಪ್ರವಾಸಿಗರನ್ನು ಇದು ಮತ್ತೂಮ್ಮೆ ಬನ್ನಿ ಎಂಬಂತೆ ಪ್ರವಾಸಿ ಸ್ಥಳಗಳಿಗೆ ಕೈಬೀಸಿ ಕರೆಯುವಂತಿದೆ. ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ಗುಲ್ ಮೊಹರ್‌ ಕೆಂಬಣ್ಣದಿಂದ ಕೂಡಿ ದ್ದರೂ ಯಾವುದೇ ಅಪಾಯವಿಲ್ಲ ಎಂದು ಹೆಡಿಯಾಲ ರಸ್ತೆಯ ನಾಗಲಿಂಗೇಶ್ವರ ಗವಿ ಮತ್ತು ಕನಕಗಿರಿ ರಸ್ತೆಯ ಜೈನರ ದೇವಾಲಯಗಳು ಪ್ರವಾಸಿಗರನ್ನು ಅಪ್ಯಾಯಮಾನವಾಗಿ ಬರಮಾಡಿಕೊಳ್ಳುತ್ತವೆ.

ಗುಲ್ಮೊಹರ್‌ ಅಂಗಸೌಷ್ಟವ: ಸುಮಾರು 15 ರಿಂದ 18 ಮೀ ಎತ್ತರ ಬೆಳೆಯುವ ನಿಲುವುಳ್ಳ ಮರವು ಫ‌ಲವತ್ತಾದ ನೆಲ ಮತ್ತು ನೀರಿದ್ದರೆ ಜಿರಾಫೆಗಿಂತಲೂ ಎತ್ತರ ಬೆಳೆಯುತ್ತದೆ. ಆಕಾರದಲ್ಲಿ ಛತ್ರಿಯಂತಿರುವ ಈ ಮರದ ತೊಗಟೆ ಮಾತ್ರ ಒರಟಾಗಿ ಅಲ್ಲಲ್ಲಿ ಗಂಟುಗಳನ್ನು ಹೊಂದಿದೆ. ಬಣ್ಣ ಮಾಸಲಾಗಿರುವ ಕಂದು ಬಣ್ಣ. ಹೂಗಳು ರೇಸಿಮ್‌ ಮಾದರಿಯ ಹೂಗೊಂಚಲಂತಿದ್ದರೆ, 15 ರಿಂದ 20 ಜೋಡಿ ಪರ್ಣಿಕೆಗಳನ್ನು ಹೊಂದಿವೆ.

ಐದು ಪುಷ್ಪಪತ್ರ: ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಹೂ ಬಿಡುವ ಮುನ್ನ ಸಂಯುಕ್ತ ಮಾದರಿಯಲ್ಲಿರುವ ಎಲೆಗಳು ಉದುರುತ್ತವೆ. ಸಾಕಷ್ಟು ದೊಡ್ಡದಾಗಿ ಕಿತ್ತಳೆಮಿಶ್ರಿತ ಕೆಂಪುಬಣ್ಣ, ಕಗ್ಗೆಂಪು ಬಣ್ಣ ಹೊಂದಿರುವ ಸುಂದರ ಹೂಗಳು. ಐದು ಪುಷ್ಪಪತ್ರಗಳನ್ನು ಹೊಂದಿದ್ದು, ಹಸಿರನ್ನು ಹೊರಭಾಗದಲ್ಲಿ, ಕೆಂಪನ್ನು ಒಳಭಾಗದಲ್ಲಿ ಹೊಂದಿವೆ. ಹೊಂದಿರುವ ಐದು ದಳಗಳಲ್ಲಿ ನಾಲ್ಕು ಒಂದೇ ರೀತಿಯಿದ್ದರೆ, ಉಳಿದೊ ಂದು ಕೊಂಚ ದೊಡ್ಡದಾಗಿ ಬಿಳಿ ಅಥವಾ ಹಳದಿ ಬಣ್ಣ ಹೊಂದಿದ್ದು, ಮೈ ಮೇಲೆ ಕೆಂಪು ಮಚ್ಚೆಗಳನ್ನು ಹೊಂದಿ ರುತ್ತದೆ. ಎಲ್ಲ ದಳಗಳ ಅಂಚು ಮಡಿಸಿ ದಂತಿದ್ದು, ಕೇಸರಗಳು ಬಿಡಿಯಾಗಿವೆ. 6096 ಮೀ. ಉದ್ದವಾದ ಕತ್ತಿಕಾಯಿಗಳು ಮರದ ಮೇಲೆ ನೇತಾಡುತ್ತಿರುತ್ತವೆ.

ಕುಲಕುಲವೆಂದು ಕೇಳದಿರಿ ಎಂದು: ಫ‌ಬಿಯೋಸೆ ಕುಟುಂಬಕ್ಕೆ ಸೇರಿದ ಗುಲ್ಮೊಹರ್‌ ಡೆಲೋನಿಕ್ಸ್‌ ರೆಜಿಯಾ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿದೆ. ರಾಯಲ್ ಪೊಯಿನ್ಸಿಯೆನಾ ಎಂದು ಕರೆಯುತ್ತಾರೆ. ಹಿಂದಿಯಲ್ಲಿ ಗುಲ್ಮೊಹರ್‌ ಎಂದರೆ ಸ್ಥಳೀಯರು ಕೆಂಪುತುರಾಯಿ, ದೊಡ್ಡರತ್ನಗಂಧಿ, ಸೀಮೆಸಂಕೇಶ್ವರ ಎಂದೂ ಕರೆಯುತ್ತಾರೆ. ಪ್ಲಾಂಟೀ ಸಾಮ್ರಾಜ್ಯದ ಹೂ ಬಿಡುವ ಸಸ್ಯಗಳ ವಿಭಾಗಕ್ಕೆ ಸೇರಿದ್ದು, ಮ್ಯಾಗ್ನೋಲಿಪ್ಸಿಡಾ ವರ್ಗದ್ದಾಗಿರುವ ಗುಲ್ಮೊಹರ್‌ ಫಾಬಲ್ಸ್ ಗಣಕ್ಕೆ ಸೇರಿದೆ. ಕ್ಯಾಸಾಲ್ಪಿನಿಯಾ ಬುಡಕಟ್ಟಿನ ಫ‌ಬಾಸಿಯೇ ಕುಟುಂಬಕ್ಕೆ ಸೇರಿದ್ದು ವೈಜ್ಞಾನಿಕವಾಗಿ ಡೆಲೋನಿಕ್ಸ್‌ ದ್ವೀದ ಹೆಸರಿನಿಂದ ಡೆಲೋನಿಕ್ಸ್‌ ರೆಜಿಯ ಎಂದು ಕರೆಸಿಕೊಳ್ಳುತ್ತದೆ.

ಮನು ಶ್ಯಾನುಭೋಗ್‌. ಎಂ

ಟಾಪ್ ನ್ಯೂಸ್

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-wr3

Record; ಮಲೆ ಮಹದೇಶ್ವರ ಬೆಟ್ಟ ಹುಂಡಿ ಎಣಿಕೆ: 25 ದಿನಗಳಲ್ಲಿ 3.13 ಕೋಟಿ!

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Chamarajanagar; ಆನೆ ದಾಳಿಗೆ ಬಲಿಯಾದ ಯುವಕ

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Election Boycott: ಮತದಾನ ಬಹಿಷ್ಕಾರದಿಂದ ಹಿಂದೆ ಸರಿಯಲ್ಲ; ಗ್ರಾಮಸ್ಥರು

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

Lok Sabha Election: ಯಾರಿಗೆ ದೊರಕಲಿದೆ ಚಾ.ನಗರ ಲೋಕಸಭೆ ಕಾಂಗ್ರೆಸ್‌ ಟಿಕೆಟ್‌?

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Ashwin Vaishnav

Bullet train ಮೊದಲ ಬಾರಿಗೆ ಬ್ಯಾಲೆಸ್ಟ್‌ಲೆಸ್‌ ಟ್ರ್ಯಾಕ್‌: ರೈಲ್ವೇ ಸಚಿವ ವೈಷ್ಣವ್‌

1-addasd

Mumbai Indians: ಸೂರ್ಯಕುಮಾರ್‌ ಶೀಘ್ರ ಚೇತರಿಕೆ ಸಾಧ್ಯತೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.