Deputy Speaker ಹುದ್ದೆ ಒಪ್ಪಿಕೊಳ್ಳಲ್ಲ: ಸಿ. ಪುಟ್ಟರಂಗಶೆಟ್ಟಿ
ನಾನು ಗೆದ್ದಿರುವುದೇ ವಿಶೇಷ, ಮತದಾರರು ಈ ಹುದ್ದೆ ಬೇಡ ಎಂದಿದ್ದಾರೆ...
Team Udayavani, May 28, 2023, 9:28 PM IST
ಚಾಮರಾಜನಗರ: ವಿಧಾನಸಭೆ ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳಲಾರೆ. ಸಚಿವ ಸ್ಥಾನ ದೊರಕದಿದ್ದರೆ ಶಾಸಕನಾಗೇ ಇರುತ್ತೇನೆ ಎಂದು ಕ್ಷೇತ್ರದ ಶಾಸಕ ಸಿ. ಪುಟ್ಟರಂಗಶೆಟ್ಟಿ ಹೇಳಿದ್ದಾರೆ.
ಅವರ ಸ್ವಗ್ರಾಮ ಯಳಂದೂರಿನ ಉಪ್ಪಿನಮೋಳೆಯಲ್ಲಿ ಭಾನುವಾರ ಬೆಳಿಗ್ಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಉಪಸಭಾಪತಿ ಹುದ್ದೆ ಒಪ್ಪಿಕೊಳ್ಳಲಾರೆ. ಕ್ಷೇತ್ರದ ಮತದಾರರು ನನ್ನ ಬೆಂಬಲಿಗರು ಈ ಹುದ್ದೆ ಬೇಡ, ಇದನ್ನು ವಹಿಸಿಕೊಂಡರೆ ನೀವು ನಮ್ಮ ಕೈಗೆಟುಕಲ್ಲ ಎಂದಿದ್ದಾರೆ. ಅವರ ಮಾತಿನಂತೆ ನಡೆದುಕೊಳ್ಳುತ್ತೇನೆ ಎಂದರು.
ನಾನು ಗೆದ್ದಿರುವುದೇ ವಿಶೇಷ. ಹಿಂದುಳಿದ ಉಪ್ಪಾರ ಸಮಾಜದ ಏಕೈಕ ಶಾಸಕ. ಉಪಸಭಾಪತಿಯಾದರೆ, ಜನರನ್ನು ಸಂಪರ್ಕ ಮಾಡಲು ಸಾಧ್ಯವಾಗಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಹೇಳಿದೆ. ಅವರು ಒಪ್ಪಿಕೋ ನಾವೆಲ್ಲ ಬೇಡ್ವಾ ಎಂದರು. ನಾನು ಜನರನ್ನು ಕೇಳುತ್ತೇನೆ. ಕ್ಷಮಿಸಿ, ಕಷ್ಟವಾಗುತ್ತದೆ ಎಂದೆ. ನಾನು ಕ್ಷೇತ್ರದಲ್ಲಿರಬೇಕು. ಉಪಸಭಾಪತಿ ಆದರೆ ಕ್ಷೇತ್ರದ ಸಂಪರ್ಕ ಕಡಿಮೆ ಆಗುತ್ತದೆ. ಬೆಂಗಳೂರಿನಲ್ಲೇ ಮೂರು ನಾಲ್ಕು ದಿನ ಇರಬೇಕಾಗುತ್ತದೆ. ನಾನೊಬ್ಬ ಶಾಸಕನಾಗಿ ಸದನ ನಡೆಯುವ ಸಂದರ್ಭ ಬಿಟ್ಟರೆ ಯಾವಾಗಲೂ ಕ್ಷೇತ್ರದಲ್ಲೇ ಇರುತ್ತೇನೆ. ಇಂಥವನಿಗೆ ಬೆಂಗಳೂರಿನಲ್ಲಿರಲು ಆಗಲ್ಲ ಎಂದರು.
ಈ ಮುಂಚೆ ನನಗೆ ಸಚಿವ ಸ್ಥಾನ ದೊರಕುವ ಭರವಸೆ ನೀಡಿದ್ದರು. ಅದಕ್ಕೇ ದೆಹಲಿಗೆ ಹೋಗಿದ್ದೆ. ದೆಹಲಿಯಿಂದ ವಾಪಸ್ ವಿಮಾನದಲ್ಲಿ ಬೆಂಗಳೂರಿಗೆ ಬಂದಾಗ ಇಳಿದಾಗ ಅಂದು ರಾತ್ರಿ 10.45ಕ್ಕೆ ವಿಷಯ ತಿಳಿಯಿತು. ಸಚಿವ ಸ್ಥಾನ ಕೈತಪ್ಪಿರುವುದು ಗೊತ್ತಾಯಿತು ಎಂದರು. ನನಗೆ ಉಪಸಭಾಪತಿ ಹುದ್ದೆ ಬೇಡ. ಸಚಿವ ಸ್ಥಾನ ನೀಡದಿದ್ದರೆ ಶಾಸಕನಾಗೇ ಇರುತ್ತೇನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
MUST WATCH
ಹೊಸ ಸೇರ್ಪಡೆ
Kannada Cinema; ಚಿತ್ರೀಕರಣ ಮುಗಿಸಿದ ‘ವಿದ್ಯಾರ್ಥಿ ವಿದ್ಯಾರ್ಥಿನಿಯರೇ’
ಲೋಕಸಭಾ ಚುನಾವಣೆ: ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿದ್ದಾರ ಸೂರಜ ನಾಯ್ಕ ಸೋನಿ ?
JDS; ಮೂವರು ಅಭ್ಯರ್ಥಿಗಳ ಪಟ್ಟಿ ಪ್ರಕಟ: ಕೋಲಾರಕ್ಕೆ ಮಲ್ಲೇಶ್ ಬಾಬು
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ