ಮಳೆಗೆ ಧರೆಗುರುಳಿದ ಮರ
Team Udayavani, Jun 30, 2020, 5:31 AM IST
ಯಳಂದೂರು: ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಭಾನುವಾರ ಸಂಜೆ ಗಾಳಿ ಮಳೆಗೆ ವಿವಿಧೆಡೆ ಮರಗಳು ಧರೆ ಗುರುಳಿ ಮನೆಗಳು ಜಖಂಗೊಂಡು ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿದ್ದರಿಂದ ತೀವ್ರ ತೊಂದರೆಯಾಯಿತು. ಎರಡೂವರೆ ಗಂಟೆಗಳಿಗೂ ಅಧಿಕ ಸಮಯ ಜೋರಾಗಿ ಗುಡುಗು ಸಹಿತ ಮಳೆಯಾಗಿದೆ.
ಪಟ್ಟಣದ ಕಾರಾಪುರ ವಿರಕ್ತಮಠದ ರಸ್ತೆಯಲ್ಲಿ ಮರವೊಂದು ರಸ್ತೆಗೆ ಅಡ್ಡಲಾಗಿ ಬಿದ್ದಿದ್ದರಿಂದ ಪಕ್ಕದಲ್ಲಿದ್ದ ವಿದ್ಯುತ್ ತಂತಿ ಮೇಲೆ ಬಿದ್ದು ತಂತಿ ಹಾಗೂ ಕಂಬ ತುಂಡಾಗಿದೆ. ತಾಲೂಕಿನ ಕಂದಹಳ್ಳಿ, ಮೆಳ್ಳಹಳ್ಳಿ, ದುಗಹಟ್ಟಿ ಗ್ರಾಮದಲ್ಲಿ ಕೆರೆಕಟ್ಟೆಗಳಿಗೆ ನೀರು ಹರಿದು ಬಂದಿದೆ. ಪಟ್ಟಣದ ಬಳೇಪೇಟೆ¿ ಹಳ್ಳದ ಬೀದಿ, ಜನತಾ ಕಾಲೋನಿನಲ್ಲಿನ ತಗ್ಗು ಪ್ರದೇಶದ ಮನೆಗಳಿಗೆ ಮಳೆ ನೀರು ನುಗ್ಗಿ ವಾಸಿಗಳು ಪರದಾಡು ವಂತಾಯಿತು.
ಪಟ್ಟಣದ ಹಳೇ ಅಂಚೆ ಕಚೇರಿ ರಸ್ತೆಯ ಭೂಲಕ್ಷ್ಮೀ ವರಾಹ ಸ್ವಾಮಿ ದೇಗುಲದ ಮುಂದೆ ಮಳೆ ನೀರು ನಿಂತಿದ್ದರಿಂದ ತಳ್ಳುಗಾಡಿಗಳು, ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಗ್ರಾಮಗಳಲ್ಲಿ ಹಳೆಮನೆ ಗೋಡೆ, ಕೊಟ್ಟಿಗೆಗಳ ಗೋಡೆಗಳು ಮಳೆಗೆ ಕುಸಿದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ
OBC ವರ್ಗಕ್ಕೆ ಕಾಂಗ್ರೆಸ್ನಿಂದ ಅನ್ಯಾಯ: ಸುನಿಲ್ ಕುಮಾರ್
ಸರಕಾರದ ಖಜಾನೆ ಖಾಲಿ, ರೈತರಿಗೆ ಪರಿಹಾರ ನೀಡಲು ಹಣವಿಲ್ಲ: ವಿಜಯೇಂದ್ರ
Bangalore Rural; ಬಿಜೆಪಿಗೆ ಅಭ್ಯರ್ಥಿ ಇರಲಿಲ್ಲ, ಎಚ್ಡಿಕೆಗೆ ಧೈರ್ಯ ಇರಲಿಲ್ಲ: ಡಿಕೆಶಿ