ಕಿಟ್ ಜತೆಗೆ ವಾಲ್ಮೀಕಿ ಚರಿತೆ ವಿತರಣೆ
Team Udayavani, May 21, 2020, 5:03 AM IST
ಕೊಳ್ಳೇಗಾಲ: ಪಟ್ಟಣದ ಟೈಲರ್, ಗಾರೆ ಕೆಲಸ ಮಾಡುವ ಕಾರ್ಮಿಕರು ಹಾಗೂ ಬಡವರಿಗೆ ಚಿತ್ರಕಲಾ ಶಿಕ್ಷಕರು ಹಾಗೂ ಕರ್ನಾಟಕ ಇತಿಹಾಸ ಆಕಾಡೆಮಿ ಸದಸ್ಯ ಆರ್.ರಘು ಆಹಾರ ಕಿಟ್ಗಳನ್ನು ವಿತರಿಸಿದರು.
ಈ ವೇಳೆ ಮಾತನಾಡಿದ ಆರ್. ರಘು, ಲಾಕ್ಡೌನ್ ಬಳಿಕ ಸತತ ಮೂರು ಹಂತದಲ್ಲಿ ಬಡವರಿಗೆ 450 ಆಹಾರ ಕಿಟ್ ಗಳನ್ನು ವಿತರಣೆ ಮಾಡಲಾಗುವುದು. ಆಹಾರ ಕಿಟ್ಗಳೊಂದಿಗೆ ಭಗವಾನ್ ವಾಲ್ಮೀಕಿ ಚರಿತೆ ಪುಸ್ತಕವನ್ನು ವಿತರಿಸುತ್ತಿದ್ದೇವೆ. ಏಕೆಂದರೆ, ಲಾಕ್ಡೌನ್ ವೇಳೆ ಈ ಪುಸ್ತಕ ಓದಿ, ರಾಮಾಯಣದ ಬಗ್ಗೆ ಅರಿತುಕೊಳ್ಳಬೇಕೆಂದು ಶ್ರಮಿಕರಲ್ಲಿಮ ನವಿ ಮಾಡಿದರು.
ಇದೇ ಸಂದರ್ಭದಲ್ಲಿ ನಾಯಕ ಸಮಾಜದ ಮುಖಂಡರು, ಶ್ರೀನಿವಾಸ್ ಕಾಂಪ್ಲೇಕ್ಸ್ನ ಜವಳಿ ಅಂಗಡಿ ಮಾಲೀಕರು, ಕಾರ್ಮಿಕರು ಇತರರಿದ್ದರು.