ಅರಣ್ಯ ಸುಡುವ ಬೆಂಕಿಗೆ ಹೆಲಿಕಾಪ್ಟರ್‌ನಿಂದ ನೀರು


Team Udayavani, Feb 26, 2019, 7:37 AM IST

aranya.jpg

ಗುಂಡ್ಲುಪೇಟೆ/ಚಾಮರಾಜನಗರ: ಬಂಡೀಪುರದಲ್ಲಿ ಇದೇ ಮೊದಲ ಬಾರಿ ಸುಮಾರು 9 ಸಾವಿರ ಎಕರೆ ಅರಣ್ಯವನ್ನು ಆಹುತಿ ತೆಗೆದುಕೊಂಡಿರುವ ಕಾಡ್ಗಿಚ್ಚು ನಂದಿಸಲು ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಸೇನೆಯ ಹೆಲಿಕಾಪ್ಟರ್‌ಗಳನ್ನು ಬಳಸಿಕೊಳ್ಳಲಾಗಿದೆ. ಎರಡು ಹೆಲಿಕಾಪ್ಟರ್‌ಗಳು ಬೆಂಕಿ ನಂದಿಸುವ ಕಾರ್ಯಾ ಚರಣೆಯಲ್ಲಿ ತೊಡಗಿವೆ. ಬಂಡೀಪುರ ಬಳಿಯ ಬೇರಂಬಾಡಿಯ ಕೆಂಪುಸಾಗರಕೆರೆಯಿಂದ ನೀರನ್ನು ಹೆಲಿಕಾಪ್ಟರ್‌ ಮೂಲಕ ಎತ್ತಿ ಕಾಡ್ಗಿಚ್ಚು ಹಬ್ಬಿರುವ ಪ್ರದೇಶಗಳಲ್ಲಿ ಆ ನೀರನ್ನು ಸುರಿಸಲಾಗುತ್ತಿದೆ.

ಬಂಡೀಪುರ ಹುಲಿ ಸಂರಕ್ಷಿತ ಅರಣ್ಯದಲ್ಲಿ ಕಳೆದ ಐದು ದಿನಗಳ ಹಿಂದೆ ಆರಂಭವಾದ ಕಾಡ್ಗಿಚ್ಚಿನ ಪ್ರತಾಪ ಸೋಮವಾರವೂ ಮುಂದುವರಿದಿದೆ. ಬಂಡೀಪುರ ಅಭಯಾರಣ್ಯ ವ್ಯಾಪ್ತಿಯಲ್ಲಿ ಬರುವ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದಿಂದ ಕೆಳಗಿಳಿದ ಬೆಂಕಿಯು ಪಶ್ಚಿಮದ ಮುಖಾಂತರ ಮದ್ದೂರು ಅರಣ್ಯವಲಯಕ್ಕೆ ಧಾವಿಸಿದ್ದು ಮೂಲೆಹೊಳೆ ಅರಣ್ಯ ಪ್ರದೇಶಕ್ಕೆ ವ್ಯಾಪಿಸಿದೆ.

ಈ ಹಿನ್ನೆಲೆಯಲ್ಲಿ ಬೆಂಕಿಯನ್ನು ನಂದಿಸಲು ಮಾನವನ ಪ್ರಯತ್ನ ಕಷ್ಟಸಾಧ್ಯವೆಂದು ತಿಳಿದ ರಾಜ್ಯ ಸರ್ಕಾರ ವಾಯುಪಡೆಯ ಹೆಲಿಕಾಪ್ಟರ್‌ ಸಹಾಯ ದಿಂದ ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ. ಶನಿವಾರ ರಾಷ್ಟ್ರೀಯ ಹೆದ್ದಾರಿಯ ಮೂಲಕ ಹಿಮವದ್‌ ಗೋಪಾಲಸ್ವಾಮಿ ಬೆಟ್ಟದ ದೇವಾಲಯದ ವರೆಗೂ ವ್ಯಾಪಿಸಿದ್ದ ಬೆಂಕಿ, ನಿಯಂತ್ರಣಕ್ಕೆ ಸಿಕ್ಕದೇ ಬಂಡೀಪುರ ವ್ಯಾಪ್ತಿಯ ಮದ್ದೂರು ವಲಯದ ಕಣಿವೆ ಮಲ್ಲೇಶ್ವರ ಕ್ಯಾಂಪ್‌ನತ್ತ ದಾಂಗುಡಿಯಿಟ್ಟಿತ್ತು.

ಅಲ್ಲಿಂದ ಮುಂದೆ ಹುಲಿಕಟ್ಟೆ ಗುಡ್ಡದ ಮೂಲಕ ಜಾಲ್ದರೆ ಕಣಿವೆಯತ್ತ ವ್ಯಾಪಿಸಿದ ಬೆಂಕಿಯು, ಮಧ್ಯಾಹ್ನದ ವೇಳೆಗೆ ಆಲಸ್ತ್ರೀ ಕಟ್ಟೆ ಮತ್ತು ಕರಡಿಕಲ್ಲು ಬೆಟ್ಟದಲ್ಲಿ ಅತಿ ತೀಕ್ಷ್ಮವಾಗಿ ಉರಿಯಲಾರಂಭಿಸಿತು. ಸೋಮವಾರ ಸಂಜೆಯ ವೇಳೆಗೆ ಮೂಲೆಹೊಳೆ ಅರಣ್ಯ ಪ್ರವೇಶಿಸಿರುವ ಬೆಂಕಿಯು ಕೇರಳದ ಕಲ್ಲಿಕೋಟೆಯನ್ನು ಸಂಪರ್ಕಿಸುವ ಹೆದ್ದಾರಿ 766 ನ್ನು ಹಾದು ಹೋಗುವ ಸಂಭವವಿದೆ.

ಇನ್ನೆರಡು ವಲಯಗಳಿಗೂ ಹಬ್ಬುವ ಸಾಧ್ಯತೆ: ಬಂಡೀಪುರ ರಾಷ್ಟ್ರೀಯ ಉದ್ಯಾನದಲ್ಲಿ ಬೆಂಕಿಯ ಜ್ವಾಲೆಗೆ ಸಿಲುಕದೇ ಕೊನೆಯದಾಗಿ ಉಳಿದಿರುವ ಮತ್ತೆರಡು ವಲಯಗಳಾದ ಕಲ್ಕೆರೆ ಮತ್ತು ಮೊಳೆಯೂರು ಅರಣ್ಯವನ್ನು ಬೆಂಕಿಯು ನಾಶಗೊಳಿಸುವ ಸಾಧ್ಯತೆಯಿದೆ. ಓಂಕಾರ ಅರಣ್ಯ ವಲಯವೊಂದು ಮಾತ್ರ ಬೆಂಕಿಯ ಕೆನ್ನಾಲಿಗೆಗೆ ಸಿಲುಕುವ ಸಾಧ್ಯತೆ ಕಡಿಮೆ.

ಅಧಿಕಾರಿಗಳ ನಿರ್ಲಕ್ಷ್ಯ ಕಾರಣ: ಕುಂದುಕೆರೆ, ಬಂಡೀಪುರ ಮತ್ತು ಗೋಪಾಲಸ್ವಾಮಿ ಬೆಟ್ಟ ವಲಯದ ವಲಯಾರಣ್ಯಾಧಿಕಾರಿಗಳಿಗೂ ಸ್ಥಳೀಯ ಆದಿವಾಸಿಗಳಿಗೂ ಸಂಬಂಧ ಅಷ್ಟಕಷ್ಟೆ. ಆದಿವಾಸಿಗಳು ಬೆಂಕಿ ಬೀಳದಂತೆ ಅಥವಾ ಬೆಂಕಿ ಬಿದ್ದ ತಕ್ಷಣವೇ ಆರಿಸಲು ಪ್ರಯತ್ನಿಸುತ್ತಾರೆ. ಬೆಂಕಿರೇಖೆಗಳನ್ನು ಮಾಡಿದ್ದರೂ ಕುಂದುಕೆರೆ ವಲಯದಲ್ಲಿ ಬೆಂಕಿ ಬಿದ್ದ ನಂತರ ಬಂಡೀಪುರ ವಲಯಾರಣ್ಯಾಧಿಕಾರಿಯವರ ಕರೆಗೆ ಆದಿವಾಸಿಗಳು ಓಗೊಡಲಿಲ್ಲ.

ಈ ಪರಿಣಾಮ ಇಷ್ಟು ಅನಾಹುತ ಸಂಭವಿಸಿದೆ. ಗೋಪಾಲಸ್ವಾಮಿ ವಲಯದ ಅಧಿಕಾರಿ ಕಳೆದ ಮೂರು ದಿನಗಳಿಂದ ಅರಣ್ಯದಲ್ಲೇ ಮೊಕ್ಕಾಂ ಹೂಡಿದ್ದರೂ ಕೂಡಾ ಆದಿವಾಸಿಗಳನ್ನು ಸಂಭಾಳಿಸುವಲ್ಲಿ ವಿಫ‌ಲರಾದರು ಎಂದು ತಿಳಿದು ಬಂದಿದೆ. ಮದ್ದೂರು ವಲಯದಲ್ಲಿ ಬೆಂಕಿ ರೇಖೆ ಮಾಡದ ಕಾರಣ ಭೂಮಿಗೆ ಬಿದ್ದಿರುವ ಒಣ ಎಲೆಗಳು ಬೆಂಕಿ ಹರಡಲು ಕಾರಣವಾಗಿವೆ.

ಟಾಪ್ ನ್ಯೂಸ್

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

1-qeweqwe

Love Jihad ಹೆಸರಲ್ಲಿ ಒಂದು ಗುಂಪಿಗೆ ತರಬೇತಿ: ಜಗದೀಶ್ ಶೆಟ್ಟರ್ ಗಂಭೀರ ಆರೋಪ

1-qweqewqe

Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್‌ ಟಿಆರ್‌ – ಪ್ರಶಾಂತ್‌ ನೀಲ್‌ ಸಿನಿಮಾ

1-eweqwe

Ballari; ತುಕಾರಾಂ ಅಫಿಡವಿಟ್ ಸಮರ್ಪಕವಾಗಿಲ್ಲ:ಶ್ರೀರಾಮುಲು ಆಕ್ಷೇಪಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

9-

Chamarajanagara: ಪ್ರಮೋದ್ ಆರಾಧ್ಯಗೆ ಯುಪಿಎಸ್‌ಸಿ 671 ರ‍್ಯಾಂಕ್‌  

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-qweqeqw

Kalaburagi; ಭಾರೀ ಮಳೆ: ಆಳಂದದಲ್ಲಿ ಸಿಡಿಲು ಬಡಿದು ಬಾಲಕ‌ ಸಾವು

1-aaaa

Udupi: ನಿಟ್ಟೂರಿನಲ್ಲಿ ಬಸ್ ಢಿಕ್ಕಿಯಾಗಿ ಬೈಕ್ ಸವಾರ ದಾರುಣ ಸಾವು

1-wewqeqwe

Congress ಟ್ಯಾಕ್ಸ್ ಸಿಟಿಯನ್ನು ಟ್ಯಾಂಕರ್ ಸಿಟಿ ಮಾಡಿದೆ: ಬೆಂಗಳೂರಿನಲ್ಲಿ ಮೋದಿ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

Kollywood: 18 ವರ್ಷದ ಬಳಿಕ ಪತಿ ಸೂರ್ಯ ಜೊತೆ ನಟಿಸಲಿದ್ದಾರೆ ಜ್ಯೋತಿಕಾ

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

ಸರ್ವರಿಗೂ ಸಮಪಾಲು ಸಮಬಾಳು ನೀಡಿದ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ: ಗೀತಾ ಶಿವರಾಜ್ ಕುಮಾರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.