ಪರಿಸರ ಪ್ರೇಮಿಗಳನ್ನು ಆಕರ್ಷಿಸುತ್ತಿದೆ ವನ್ಯಧಾಮ


Team Udayavani, Jun 5, 2019, 3:00 AM IST

parisara

ಸಂತೆಮರಹಳ್ಳಿ: ಹಸಿರು ಹೊದ್ದು ಮಲಗಿರುವ ಗಿರಿಸಾಲುಗಳು, ಮೈಚಳಿಯನ್ನು ಬಿಟ್ಟು ನೀರಿನಲ್ಲಿ ಆಟವಾಡುವ ಆನೆಗಳ ಹಿಂಡು, ಭೂ ಮೇಲೆ ಹಾಸಿರುವ ಹಸಿರಿನ ಭೋಜನವನ್ನು ಮೆಲ್ಲುತ್ತಿರುವ ಕಾಡೆಮ್ಮೆಗಳ ಹಿಂಡು, ಎಲ್ಲಕ್ಕಿಂತ ಮಿಗಿಲಾಗಿ ತೊರೆ, ಕೆರೆಗಳ ಅಕ್ಕಪಕ್ಕ ಪಟಪಟ ರೆಕ್ಕೆ ಬಡಿಯುತ ಹಾರುವ ಬಣ್ಣಬಣ್ಣದ ಪಾತರಗಿತ್ತಿಗಳ ಗುಂಪು..

ಇವು ಎಲ್ಲೋ ಸಿನಿಮಾದಲ್ಲಿ ತೋರುವ ಗ್ರಾಫಿಕ್‌ ಅಥವಾ ಪುಸಕ್ತದಲ್ಲಿ ವರ್ಣನೆಯಾಗುವ ಚಿತ್ರಣವಲ್ಲ. ಬದಲಿಗಿ ಚಾಮರಾಜನಗರ ಜಿಲ್ಲೆಯ ಪ್ರಸಿದ್ಧ ವನ್ಯಧಾಮವಾಗಿರುವ ಬಿಳಿಗಿರಿರಂಗನಾಥಸ್ವಾಮಿ ವನ್ಯಧಾಮ (ಬಿಆರ್‌ಟಿ) ಮಳೆ ಬಂದ ಮೇಲೆ ವನಸಿರಿ ಪರಿಸರ ಪ್ರಿಯರಿಗೆ ಉಣಬಡಿಸುತ್ತಿರುವ ಪ್ರಾಕೃತಿಕ ಸೊಬಗು. ಜೂನ್‌ 5 ವಿಶ್ವ ಪರಿಸರ ದಿನ ನಮ್ಮ ಪರಿಸರ ಹೇಗಿದೆ ಎಂಬ ಸೊಬಗನ್ನು ನೋಡಬೇಕಾದರೆ ಬಿಆರ್‌ಟಿಗೆ ಬನ್ನಿ.

ಪ್ರಾಕೃತಿಕ ವೈಭವ: ಯಳಂದೂರು ತಾಲೂಕಿನ ಬಿಆರ್‌ಟಿ ಹುಲಿಧಾಮದ ಈಗ ಪ್ರಕೃತಿಗೆ ಸೀರೆ ಉಟ್ಟ ಸಂಭ್ರಮವನ್ನು ಅನುಭವಿಸುತ್ತಿದೆ. ಹಸಿರು ಹೊದ್ದ ಬೆಟ್ಟ ಸಾಲಿನಲ್ಲಿ ಸಾಗುವುದೇ ಒಂದು ಚೆಂದದ ಅನುಭವ. ಪೂರ್ವ, ಪಶ್ಚಿಮ ಘಟ್ಟಗಳನ್ನು ಸಂಧಿಸುವ ಬಿಳಿಗಿರಿ ವನ್ಯಧಾಮ ಅಪರೂಪದ ವೃಕ್ಷ ಹಾಗೂ ಪ್ರಾಣಿ ಸಂಪತ್ತನ್ನು ತನ್ನ ತೆಕ್ಕೆಯಲ್ಲಿಟ್ಟುಕೊಂಡಿದೆ. ನಿತ್ಯಹರಿದ್ವರ್ಣ, ಅರೆನಿತ್ಯ ಹರಿದ್ವರ್ಣ, ಶೋಲಾ, ಎಲೆಉದುರುವ, ಕುರುಚಲು ಕಾಡು ಹೀಗೆ ಹೆಜ್ಜೆ ಹೆಜ್ಜೆಗೂ ಇಲ್ಲಿನ ವಿಭಿನ್ನತೆ ಭಾಸವಾಗುತ್ತದೆ. ಪೂರ್ವ ಮುಂಗಾರು ಮಳೆಯಿಂದ ಕಾಡಿಗೆ ಜೀವಕಳೆ ಬಂದಿದೆ. ಕೆರೆ ಕಟ್ಟೆಗಳು, ತೊರೆಗಳು ತುಂಬಿವೆ.

ಚಿಟ್ಟೆಗಳ ಚೈತ್ರಯಾತ್ರೆ: ಜೂನ್‌ ತಿಂಗಳು ಚಿಟ್ಟೆಗಳಿಗೆ ಚೈತ್ರಕಾಲ. ಆದರೆ, ಬಿಳಿಗಿರಿ ಬನದಲ್ಲಿ ಹಿಂಡು ಹಿಂಡಾಗಿ ಕಾಣಿಸಿಕೊಳ್ಳುವ ಚಿಟ್ಟೆಗಳ ವರ್ಣನೆ ಅವಾರ್ಣಾತೀತ. ಗುಂಪು ಗುಂಪಾಗಿ ಕಾಣಿಸಿಕೊಳ್ಳುವ ಪಾತರಗಿತ್ತಿಗಳು ಹಸಿರೆಲೆಗಳಂತೆ ಗೋಚರಿಸಿ, ಕ್ಷಣಕಾಲ ಬೆರಗು ಮೂಡಿಸುತ್ತದೆ. ಇದರ ನಡುವೆ, ಕಡುನೀಲಿ, ತಿಳಿಬಿಳಿ ಬಣ್ಣದ ಚಿಟ್ಟೆಗಳು ಹಾರಾಡುವುದನ್ನು ಕಣ್ತುಂಬಿಕೊಳ್ಳುವ ಸೊಬಗೇ ಬೇರೆ.

ನೀರಾಟವಾಡುವ ಆನೆಗಳು: ಮಳೆಯಿಂದ ಬೆಟ್ಟದಲ್ಲಿನ ಬಹುತೇಕ ಕೆರೆಗಳಲ್ಲಿ ನೀರು ಸಮೃದ್ಧವಾಗಿದೆ. ನೀರಿನಲ್ಲಿ ಮಿಂದೇಳುವ ಆನೆಗಳು, ಇಲ್ಲೇ ಹಲವು ಗಂಟೆಗಳು ಬೀಡು ಬಿಟ್ಟು ತನ್ನ ಬಳಗದೊಡನೆ ಚಿಣ್ಣಾಟವಾಡುವ ದೃಶ್ಯ ಪ್ರಕೃತಿ ಪ್ರಿಯರನ್ನು ತುದಿಗಾಲಲ್ಲಿ ನಿಲ್ಲಿಸುತ್ತದೆ. ಆದರೆ, ಇಂತಹ ದೃಶ್ಯಗಳನ್ನು ರಸ್ತೆ ಬದಿಯಲ್ಲಿ ಕಂಡುಕೊಳ್ಳಲು ಅದೃಷ್ಟವೂ ಬೇಕು. ಇದರೊಂದಿಗೆ ಅರಣ್ಯ ಇಲಾಖೆಯ ನಿಯಮಗಳನ್ನು ಮೀರಬಾರದೆಂಬ ಷರತ್ತನ್ನು ಪ್ರವಾಸಿಗ ಹೊತ್ತಯ್ಯಯಬೇಕು.

ಹಸಿರು ಮೆಲ್ಲುವ ವನ್ಯ ಪರಿವಾರ: ಮಳೆಯಿಂದ ಕಾಡೆಲ್ಲಾ ಹಸಿರುಮಯವಾಗಿದೆ. ರಸ್ತೆ ಬದಿಯಲ್ಲೇ ಕಾಡುಕೋಣ, ಎಮ್ಮೆ, ಚಿಗರೆಗಳ ಹಿಂಡು, ಕಾಡುಕುರಿ, ಆನೆಗಳು ತಮಗೆ ಭೂರಮೆ ಬಡಿಸಿರುವ ಹಸಿರನ್ನು ಮೆಲ್ಲುವ ದೃಶ್ಯ. ಇದರ ನಡುವೆಯೇ, ಕೀಟ ಅರಸಿ ಬರುವ ನವಿಲುಗಳ ಹಿಂಡು, ಕಾಡು ಕೋಳಿಗಳು, ವಿವಿಧ ಜಾತಿಯ ಹಕ್ಕಿ ಪಕ್ಷಿಗಳು ಹೊರಡಿಸುವ ನಿನಾದ ಇಡೀ ಕಾಡನ್ನೇ ಆವರಿಸಿ ಸಂಗೀತದ ರಸದೌತಣ ಉಣಬಿಡುಸುತ್ತಿದೆ.

ಅಪಾಯವೂ ಇದೆ: ಬಿಆರ್‌ಟಿ ಹುಲಿಧಾಮವಾದ ಮೇಲೆ ಇಲ್ಲಿ ಅರಣ್ಯ ಇಲಾಖೆಯ ನಿಯಮಗಳು ಕಠಿಣವಾಗಿವೆ. ಇದನ್ನು ಪ್ಲಾಸ್ಟಿಕ್‌ ಮುಕ್ತ ಪ್ರದೇಶ ಎಂದು ಘೋಷಿಸಿದ ಮೇಲೂ ಸಂಪೂರ್ಣವಾಗಿ ನಿಷೇಧಿಸುವಲ್ಲಿ ಇಲಾಖೆ ವಿಫ‌ಲವಾಗಿದೆ. ಬೆಟ್ಟದಲ್ಲಿ ಅವ್ಯಾಹತವಾಗಿ ಪ್ಲಾಸ್ಟಿಕ್‌ ಮಾರಾಟ ನಡೆಯುತ್ತಿದೆ. ಬರುವ ಪ್ರವಾಸಿಗರು ನೀರಿನ ಬಾಟಲಿಗಳು, ಕವರ್‌ಗಳನ್ನು ಇಲ್ಲೇ ಬೀಸಾಡುವುದರಿಂದ ಮಳೆ ಬಂದರೆ ಇದು ಕಾಡು ಪ್ರಾಣಿಗಳ ಹೊಟ್ಟೆಯೊಳಗೆ ಹೊಕ್ಕುವ ಸಾಧ್ಯತೆಗಳೂ ಇವೆ. ಈ ಬಗ್ಗೆ ಇಲಾಖೆ ಹಾಗೂ ಸ್ಥಳೀಯ ಆಡಳಿತ ಕ್ರಮ ವಹಿಸಬೇಕಿದೆ ಎನ್ನುತ್ತಾರೆ ಪರಿಸರ ಪ್ರೇಮಿ ಮನು ಹಾಗೂ ಮಹೇಶ್‌.

* ಪೈರೋಜ್‌ ಖಾನ್‌

ಟಾಪ್ ನ್ಯೂಸ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

voter

Vote ಚಲಾಯಿಸಲು ಭಾರೀ ಸಂಖ್ಯೆಯಲ್ಲಿ ಬರುತ್ತಿರುವ ಕೇರಳ ಎನ್‌ಆರ್‌ಐಗಳು

ತಂಗಿಯ ಸಮಾಧಿ ಸ್ಥಳಕ್ಕೆ  ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ತಂಗಿಯ ಸಮಾಧಿ ಸ್ಥಳಕ್ಕೆ ಭೇಟಿ ನೀಡುವುದನ್ನು ವ್ಲಾಗ್‌ ವಿಡಿಯೋ ಮಾಡಿದ ಯೂಟ್ಯೂಬರ್: ಆಕ್ರೋಶ

ಹಳದಿ ಶಾಸ್ತ್ರದ ವೇಳೆ ವರನಿಗೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿಯಲ್ಲಿ ಕೊನೆಯುಸಿರು

ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Rahul Gandhi 3

U-turn ಹೊಡೆದ ರಾಹುಲ್: ಸಂಪತ್ತು ಹಂಚಿಕೆ ಬಗ್ಗೆ ಹೇಳಿಲ್ಲ,ಅನ್ಯಾಯ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು

1-wewqewq

Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!

death

Kollegala: ಕಾಡಾನೆ ದಾಳಿಗೆ ವ್ಯಕ್ತಿ ಬಲಿ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

Lok Sabha Polls; ಮುಂಟೀಪುರ,ಬರಗಿ ಕಾಲೋನಿ ಗ್ರಾಮಸ್ಥರಿಂದ ಚುನಾವಣೆ ಬಹಿಷ್ಕಾರದ ಎಚ್ಚರಿಕೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

12-uv-fusion

UV Fusion: ಮಕ್ಕಳ ಆಸಕ್ತಿ ಹುಡುಕುವ ಕೆಲಸವಾಗಲಿ

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

ಗದಗ: ಸೈಕ್ಲಿಂಗ್‌ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಪವಿತ್ರಾ ಆಯ್ಕೆ

11-mallige

Bappanadu Durgaparameshwari: ಮಲ್ಲಿಗೆ ಪ್ರಿಯೆ ದೇವಿಗೆ ಲಕ್ಷ ಮಲ್ಲಿಗೆ ಶಯನೋತ್ಸವ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.