ಬೆಳೆಗಳ ದರ ನಿಗದಿಗೆ ವಿಧಾನ ಸಭೆಯಲ್ಲಿ ಧ್ವನಿ ಎತ್ತುವೆ
Team Udayavani, Jul 10, 2021, 7:11 PM IST
ಯಳಂದೂರು: ಬೆಳೆಗಳಿಗೆ ಶಾಸನ ಬದ್ಧ ದರವನ್ನುನಿಗದಿಪಡಿಸುವಂತೆ ವಿಧಾನಸಭೆಯಲ್ಲಿ ಧ್ವನಿ ಎತ್ತಲಿದ್ದೇನೆ ಎಂದು ಶಾಸಕ ಎನ್. ಮಹೇಶ್ ತಿಳಿಸಿದರು.
ತಾಲೂಕಿನ ಡಿ. ಕಂದಹಳ್ಳಿಯಲ್ಲಿ ಶುಕ್ರವಾರ ಸಮಗ್ರ ಕೃಷಿಅಭಿಯಾನ ಹಾಗೂ ಕಸಬಾ ಕೃಷಿ ಯಂತ್ರಧಾರೆ ಕೇಂದ್ರವನ್ನುಉದ್ಘಾಟಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ತಂದಿರುವಕೃಷಿ ಕಾಯ್ದೆಯಲ್ಲಿ ಕೆಲವು ಉತ್ತಮ ಅಂಶಗಳೂ ಇವೆ.ಇದರಿಂದ ರೈತರು ತಾವು ಬೆಳೆದ ಬೆಳೆಗಳನ್ನು ಎಲ್ಲಾದರೂಮಾರಾಟ ಮಾಡಬಹುದು. ಉತ್ಪಾದಕ ಹಾಗೂಮಾರಾಟಗಾರ ರೈತನೇ ಆದಾಗ ಹೆಚ್ಚಿನ ಆದಾಯಕಾಣಬಹುದು ಎಂದರು.ರೈತ ಸಂಘದಜಿಲ್ಲಾಧ್ಯಕ್ಷಹೊನ್ನೂರುಪ್ರಕಾಶ್ಮಾತನಾಡಿ,ಜಿಲ್ಲೆಯಲ್ಲಿ ರೈತರೇ ರಚಿಸಿಕೊಂಡಿರುವ “ನಮುª’ಬ್ರಾಂಡ್ನಲ್ಲಿಸಾವಯವ ಕೃಷಿ ಉತ್ಪನ್ನ ಮಾರಾಟವಾಗುತ್ತಿದ್ದು ಇದರಮಾರಾಟ ಮಳಿಗೆಗಳನ್ನು ಎಲ್ಲ ತಾಲೂಕುಗಳಿಗೂ ವಿಸ್ತರಿಸುವಯೋಜನೆ ಇದೆ. ರೈತರು ಹೆಚ್ಚು ಸಾವಯವ ಬೆಳೆಗಳನ್ನುಬೆಳೆಯಬೇಕು ಎಂದು ಮನವಿ ಮಾಡಿದರು.
ಜಂಟಿಕೃಷಿನಿರ್ದೇಶಕಎಚ್.ಟಿ.ಚಂದ್ರಕಲಾಮಾತನಾಡಿ,ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 23 ಬೆಳೆಗಳಿಗೆ ವಿಮಾಮೊತ್ತವನ್ನು ರೈತರು ಪಾವತಿಸಲು ಅವಕಾಶವಿದೆ ಎಂದರು.ಈ ವೇಳೆ ತಹಶೀಲ್ದಾರ್ ಜಯಪ್ರಕಾಶ್, ದುಗ್ಗಹಟ್ಟಿ ಗ್ರಾಪಂಅಧ್ಯಕ್ಷೆ ವಿಶಾಲಾಕ್ಷಿ, ಸದಸ್ಯ ಜವರಶೆಟ್ಟಿ, ಸಹಾಯಕ ನಿರ್ದೇಶಕಎನ್.ಜಿ. ಅಮೃತೇಶ್ವರ, ಕೃಷಿ ಅಧಿಕಾರಿ ವೆಂಕಟರಂಗಶೆಟ್ಟಿ, ಪಿ.ಮಾದೇಶ್, ನಾರಾಯಣಸ್ವಾಮಿ ಮತ್ತಿರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ