ಕೆ. ಹೊಸಹಳ್ಳಿ ಕೆರೆಗೆ ಗ್ರಾಮಸ್ಥರೇ ನೀರು ಹರಿಸಿದ್ರು!
Team Udayavani, Nov 7, 2019, 11:26 AM IST
ಶಶೀಂದ್ರ ಸಿ.ಎಸ್.
ಚನ್ನಗಿರಿ: ಗ್ರಾಮೀಣ ಕೆರೆಗಳು ರೈತರ ಜೀವನಾಡಿಯಾಗಿವೆ. ಅಂತಹ ಕೆರೆಗಳು ನೀರಿಲ್ಲದೆ ಒಣಗಿದ ಮೇಲೆ ನಿರ್ಲಕ್ಷ್ಯಕ್ಕೆ ಒಳಗಾಗುವುದು ಸಾಮಾನ್ಯ. ಆದರೆ ಇಲ್ಲೊಂದು ಗ್ರಾಮದಲ್ಲಿ ಸರಕಾರದ ಯಾವುದೇ ಅನುದಾನ-ಯೋಜನೆ ಇಲ್ಲದೇ ದಶಕಗಳ ಹಿಂದೆ ಒಣಗಿದ್ದ ಕೆರೆಯನ್ನು ಗ್ರಾಮಸ್ಥರು ತುಂಬಿಸಿದ್ದಾರೆ.
ಹೌದು, ಇಂತದೊಂದು ವಿನೂತ ಪ್ರಯತ್ನವನ್ನು ತಾಲೂಕಿನ ಕೆ. ಹೊಸಹಳ್ಳಿ ಗ್ರಾಮಸ್ಥರು ಮಾಡಿದ್ದು, ತಾಲೂಕಿನ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಕೆ. ಹೊಸಹಳ್ಳಿ ಗ್ರಾಮದಲ್ಲಿ ಕೇವಲ 250ರಿಂದ 300 ಜನ ವಾಸವಾಗಿದ್ದಾರೆ. ಗ್ರಾಮದಲ್ಲಿನ ಕೆರೆ ಒಣಗಿ ಜನ-ಜಾನುವಾರಗಳಿಗೆ ಕುಡಿಯುವ ನೀರು ಸಿಗದೇ ಪರದಾಡುವ ಸ್ಥಿತಿ ಇವರದು. ಈ ಸಮಸ್ಯೆ ಪರಿಹಾರಕ್ಕೆ ಸರಕಾರ, ಜನಪ್ರತಿನಿಧಿ ಗಳ ಮೊರೆ ಹೋದರೂ ಪ್ರಯೋಜನವಾಗಿರಲಿಲ್ಲ.
ಮತ್ತಿಹಳ್ಳದಿಂದ ಕೆರೆಗೆ ನೀರು: ಗ್ರಾಮದ ಕೆರೆ ಸುಮಾರು 6 ಎಕರೆ ವಿಸ್ತೀರ್ಣ ಹೊಂದಿದ್ದು 15ಅಡಿಯಷ್ಟು ನೀರು ಸಂಗ್ರಹ ಸಾಮರ್ಥ್ಯ ಹೊಂದಿದೆ. ಕೆರೆಯ ಸಮೀಪದಲ್ಲಿಯೇ ಮಳೆಗಾಲದಲ್ಲಿ ಮತ್ತಿಹಳ್ಳ ಹರಿಯುತ್ತದೆ. ಗ್ರಾಮಸ್ಥರೆಲ್ಲರೂ ಸ್ವಲ್ಪ ಹಣ ಒಗ್ಗೂಡಿಸಿ ಮತ್ತಿಹಳ್ಳಕ್ಕೆ ಮೋಟಾರ್ ಅಳವಡಿಸಿ ಪೈಪ್ ಜೋಡಣೆ ಮಾಡಿ ಕೆರೆಗೆ ನೀರು ಹರಿಸಿದ್ದಾರೆ. ಸತತ 20ದಿನ ನೀರು ಹರಿಸಿದ ನಂತರ ಕೆರೆ ತುಂಬಿ ಕೊಡಿ ಬಿದ್ದಿದೆ. ಗ್ರಾಮಸ್ಥರೇ ಕೆರೆಯನ್ನು ತುಂಬಿಸಿರುವ ವಿಷಯ ತಿಳಿದ ತಹಶೀಲ್ದಾರ್ ನಾಗರಾಜ್ ಕೆರೆಗೆ ಭೇಟಿ ನೀಡಿ ಬಾಗಿನ ಅರ್ಪಿಸುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ
Lok Sabha Election: ‘ಬಿವೈಆರ್ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’
ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ
Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು