ಶೋಷಿತರಲ್ಲಿ ಮೂಢನಂಬಿಕೆ ಜೀವಂತ
ಶೋಷಣೆಗೆ ಒಳಗಾದವರಿಗೆ ನ್ಯಾಯ ಕೊಡಿಸಲು ಹೋರಾಡಿ: ಸಿದ್ದಪ್ಪ
Team Udayavani, May 1, 2019, 1:23 PM IST
ಚನ್ನಗಿರಿ: ಡಾ| ಬಿ.ಆರ್. ಅಂಬೇಡ್ಕರ್ ಹಾಗೂ ಡಾ| ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಗಣ್ಯರು ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಚನ್ನಗಿರಿ: ಚಂದ್ರಗುತ್ತಿ ಬೆತ್ತಲೆ ಸೇವೆ ನಿಂತಿದೆಯಾದರೂ ದಲಿತ ಹಾಗೂ ಶೋಷಿತ ಸಮುದಾಯಗಳಲ್ಲಿ ಮೂಢನಂಬಿಕೆ, ಕಂದಚಾರ ಜೀವಂತವಾಗಿದೆ ಎಂದು ತಾಲೂಕು ದಸಂಸ ಸಂಘಟನೆ ಹಿರಿಯ ಮುಖಂಡ ಸಿ. ಸಿದ್ದಪ್ಪ ಹೇಳಿದರು.
ರಾಮ ಮನೋಹರ ಲೋಹಿಯ ಭವನದಲ್ಲಿ ಮಂಗಳವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿಯಿಂದ ಹಮ್ಮಿಕೊಂಡಿದ್ದ ಡಾ| ಬಿ.ಆರ್. ಅಂಬೇಡ್ಕರ್ ಜನ್ಮದಿನ ಹಾಗೂ ಡಾ| ಬಾಬು ಜಗಜೀವನ್ ರಾಮ್ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಚಂದ್ರಗುತ್ತಿ ಬೆತ್ತಲೆ ಸೇವೆ ಹೆಸರಿನಲ್ಲಿ ದಲಿತ ಸಮುದಾಯಗಳ ಹೆಣ್ಣುಮಕ್ಕಳನ್ನು ಬೆತ್ತಲೆಗೊಳಿಸಿ ಅವರನ್ನು ಶೋಷಣೆಗೆ ಬಲಿಯಾಗಿಸಿ ಮೂಢನಂಬಿಕೆ ಬಿತ್ತಲಾಗುತ್ತಿದ್ದ ಪಟ್ಟಭದ್ರ ಶಕ್ತಿಗಳ ವಿರುದ್ಧ ಹೋರಾಟ ಮಾಡಿ ಜಾಗೃತಿ ಮೂಡಿಸಲಾಗಿದೆ ಎಂದರು.
ದಸಂಸ ಎಲ್ಲ ವರ್ಗಗಳ ಶೋಷಿತರ ಪರವಾದ ಸಂಘಟನೆಯಾಗಿದೆ. ಇಂತಹ ಸಂಘಟನೆಯನ್ನು ಯಾರೊಬ್ಬರು ಜಾತಿಗೆ ಸೀಮಿತಗೊಳಿಸಬಾರದು. ಪ್ರಸ್ತುತ ಎಲ್ಲ ಸಮುದಾಯಗಳಲ್ಲಿ ಶೋಷಣೆಗೆ ಒಳಪಟ್ಟವರು ನೋವನ್ನು ಅನುಭವಿಸುತ್ತಿದ್ದಾರೆ ಅವರಿಗೆ ನ್ಯಾಯವನ್ನು ಕೊಡಿಸುವ ಸಿದ್ಧಾಂತವನ್ನು ಮಾತ್ರ ನಾವುಗಳು ರೂಢಿಸಿಕೊಳ್ಳಬೇಕು ಎಂದು ಹೇಳಿದರು.
ಕದಸಂಸ ರಾಜ್ಯಸಂಚಾಲಕ ಹೆಣ್ಣೂರು ಶ್ರೀನಿವಾಸ್ ಮಾತನಾಡಿ, ದಾವಣಗೆರೆ ಇತಿಹಾಸದಲ್ಲಿ ಕುರುಬರಿಗೆ ರಾಜಕೀಯ ಶಕ್ತಿ ದೊರೆತಿದೆ ಎಂದು ಪ್ರೊ| ಬಿ. ಕೃಷ್ಣಪ್ಪ ಹಾಗೂ ದಲಿತ ಸಮುದಾಯದಿಂದ. ಅಂಬೇಡ್ಕರ್ ರಚಿಸಿದ ಸಂವಿಧಾನದ ಫಲವಾಗಿಯೇ ಶ್ರೂದರು, ಲಿಂಗಾಯತರು, ಬಣಜಿಗರು ಸೇರಿದಂತೆ ವಿವಿಧ ಸಮುದಾಯಗಳಿಗೆ ಮತದಾನದ ಹಕ್ಕು ದೊರೆತಿದೆ. ಇದನ್ನು ಯಾರು ಮರೆಯಬಾರದು ಎಂದರು.
ಇಡೀ ದೇಶದಲ್ಲಿ ದಲಿತ ಸಮುದಾಯದವರು ಶೇ. 57ರಷ್ಟು ಇದ್ದಾರೆ. ಆದರೆ, ಕೇಂದ್ರದ ಬಿಜೆಪಿ ಸರ್ಕಾರದಲ್ಲಿ ಶೇ. 70ರಷ್ಟು ಭಾಗ ಬ್ರಾಹ್ಮಣ ಸಮುದಾಯದವರು ಸಚಿವರಾಗಿದ್ದಾರೆ. ದಲಿತ ವರ್ಗವನ್ನು ರಾಜಕೀಯವಾಗಿ ಶೋಷಣೆ ಮಾಡಲಾಗುತ್ತಿದೆ. ಇಂತಹ ವಿಷಯಗಳ ಬಗ್ಗೆ ಹೋರಾಟ, ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಮನುವಾದಿಗಳು ಎಂದರೆ ಮೇಲ್ಜಾತಿಯವರಲ್ಲ. ನಮ್ಮಗಳ ನಡುವೆಯೇ ವಿಷಬೀಜ ಬಿತ್ತಿ ಒಡೆದಾಡುವ ನೀತಿಯನ್ನು ಅನುಸರಿಸುತ್ತಿರುವವರು ಮನುವಾದಿಗಳು ಎಂದು ನಾವುಗಳು ಅರ್ಥೈಸಿಕೊಳ್ಳಬೇಕು. ಇನ್ನೂ ಮುಂದೆ ದಲಿತ ಅನ್ನುವ ಪದವನ್ನು ಸಂಪೂರ್ಣವಾಗಿ ಹೋಗಲಾಡಿಸಲು ಮೊದಲು ಶಿಕ್ಷಣವಂತಾರಗಬೇಕು. ಎಲ್ಲಿ ಶಿಕ್ಷಣ ಇರುತ್ತದೆಯೋ ಅಲ್ಲಿ ದಲಿತ ಅನೋ ಪದ ಇರುವುದಿಲ್ಲ. ಆದ್ದರಿಂದ ದಲಿತರು ಶಿಕ್ಷಣಕ್ಕೆ ಆದ್ಯತೆ ನೀಡಬೇಕು ಎಂದು ಸಲಹೆ ನೀಡಿದರು.
ಕದಸಂಸ ರಾಜ್ಯ ಖಜಾಂಚಿ ಭದ್ರಾವತಿ ಸತ್ಯ ಮಾತನಾಡಿ, ರೋಲ್ಕಾಲ್ ಚಳವಳಿಗಾರರು ಮನುವಾದಿಗಳ ರಕ್ಷಣೆಗೆ ನಿಂತಿರುವುದು ದುರಂತದ ಸಂಗತಿ. ಸಂಘಟನೆ ಹೆಸರಿನಲ್ಲಿ ಜೀವನ ನಿರ್ವಹಣೆ ಮಾಡುವವರು ಸಂಖ್ಯೆ ಹೆಚ್ಚಾಗಿದೆ, ಅಂತಹವರ ಜನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಅದಕ್ಕಾಗಿ ಸಂವಿಧಾನ ಉಳಿಸಿ ಮನುವಾದಿಗಳನ್ನು ತೊಲಗಿಸಿ ಹೆಸರಿನಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.
ಹಿರಿಯೂರಿನ ಕೋಡಿಹಳ್ಳಿ ಶಾಖಾಮಠದ ಶ್ರೀ ಷಡಾಕ್ಷರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮೋಹನ್ ಕುಮಾರ್ ಉಪನ್ಯಾಸ ನೀಡಿದರು. ದಸಂಸ ಜಿಲ್ಲಾ ಸಂಚಾಲಕ ಬಿ. ದುಗ್ಗಪ್ಪ, ಮರೀಶ್ ನಾಗಣ್ಣನವರ್, ಹಿರಿಯ ಮುಖಂಡ ಎಂಕೆ. ನಾಗಪ್ಪ, ದಸಂಸ ತಾಲೂಕು ಸಂಚಾಲಕ ಕೃಷ್ಣಪ್ಪ ನವಿಲೆಹಾಳ್, ಪುರಸಭೆ ಸದಸ್ಯೆ ಲಕ್ಷಿ ್ಮೕದೇವಮ್ಮ, ನರಸಿಂಹಮೂರ್ತಿ, ಎಚ್.ಎನ್. ಮೂರ್ತಿ, ನೀತಿಗೆರೆ ಮಂಜಪ್ಪ, ಪಾಂಡೋಮಟ್ಟಿ ಆರ್. ಪ್ರಭಾಕರ್, ಮತ್ತಿತರರು ಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Kundapura: ಕಳಚಿದ ಕೊಂಡಿ: ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ
Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ
Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ
Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್ಸಿ ಮೀಸಲಾತಿ ಹೇಳಿಕೆಗೆ ವಿರೋಧ
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ