ಜಿಲ್ಲೆಯಲ್ಲಿ 323 ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗ
ವರ್ಗಾವಣೆಗೆ ತೆರೆ • 44 ಶಿಕ್ಷಕರಿಗೆ ಕಡ್ಡಾಯ ವರ್ಗ | ಪರಸ್ಪರ ವರ್ಗಾವಣೆಯಲ್ಲಿ 60 ಮಂದಿಗೆ ಅನುಕೂಲ
Team Udayavani, Sep 13, 2019, 12:13 PM IST
ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ಪ್ರಾಥಮಿಕ ಶಾಲಾ ಶಿಕ್ಷಕರ ವಲಯದಲ್ಲಿ ಸಾಕಷ್ಟು ಗೊಂದಲ ಹಾಗೂ ಕುತೂಹಲ ಕೆರಳಿಸಿದ್ದ 2018-19ನೇ ಸಾಲಿನ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಜಿಲ್ಲೆಯಲ್ಲಿ ತೆರೆ ಬಿದ್ದಿದ್ದು, ಜಿಲ್ಲಾದ್ಯಂತ ಒಟ್ಟು 323 ಪ್ರಾಥಮಿಕ ಶಾಲಾ ಶಿಕ್ಷಕರು ಒಂದು ಕಡೆಯಿಂದ ಮತ್ತೂಂದು ಕಡೆಗೆ ವರ್ಗಾವಣೆಗೊಂಡಿದ್ದಾರೆ.
ಎ ಪಟ್ಟಿ: ಶಿಕ್ಷಕರ ವರ್ಗಾವಣೆಗೆ ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಎ ಪಟ್ಟಿಯಲ್ಲಿದ್ದ ಸಹ ಶಿಕ್ಷಕರ ಪೈಕಿ 29 ಮಂದಿ ಕನ್ನಡ ಸಾಮಾನ್ಯ ಶಿಕ್ಷಕರು ಇದ್ದು, ಆ ಪೈಕಿ 28 ಮಂದಿ ಸ್ಥಳ ಆಯ್ಕೆಗೊಂಡು ವರ್ಗಾವಣೆಗೊಂಡಿ ದ್ದಾರೆ.
ಕನ್ನಡ ವಿಜ್ಞಾನದಲ್ಲಿ 1, ಕನ್ನಡ ಆಂಗ್ಲದಲ್ಲಿ 3, ಹಿಂದಿಗೆ 2ಕ್ಕೆ 1, ಉರ್ದು ಸಾಮಾನ್ಯ ಒಬ್ಬ ಶಿಕ್ಷಕರು ಸೇರಿ ಒಟ್ಟು 34 ಮಂದಿ ವರ್ಗಾವಣೆಗೊಂಡರೆ ಮುಖ್ಯ ಶಿಕ್ಷಕರ ಪೈಕಿ ಉರ್ದು ಹಾಗೂ ದೈಹಿಕ ಶಿಕ್ಷಕ ರೊಬ್ಬರು ಸೇರಿ ಒಟ್ಟು 36 ಮಂದಿ ವರ್ಗಾವಣೆ ಗೊಂಡಿದ್ದಾರೆ.
ಬಿ ಪಟ್ಟಿ: ಇನ್ನೂ ಶಿಕ್ಷಕರ ವರ್ಗಾವಣೆಯ ಬಿ.ಪಟ್ಟಿ ಯಲ್ಲಿದ್ದ 33 ಮಂದಿ ಸಹ ಶಿಕ್ಷಕರ ಪೈಕಿ ಉರ್ದು ಸಾಮಾನ್ಯ 31 ಶಿಕ್ಷಕರ ಪೈಕಿ ಕೇವಲ 6 ಮಂದಿ ವರ್ಗಾವಣೆಗೊಂಡಿದ್ದಾರೆ. ಉರ್ದು ವಿಜ್ಞಾನದಲ್ಲಿ 1, ದೈಹಿಕ ಶಿಕ್ಷಣ ಶಿಕ್ಷಕರು 1 ಸೇರಿ ಒಟ್ಟು 8 ಮಂದಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಸ್ಥಳ ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಸ್.ಜಿ.ನಾಗೇಶ್ ತಿಳಿಸಿದರು.
ಕೋರಿಕೆ ವರ್ಗಾವಣೆಯಲ್ಲಿ 175: ಜಿಲ್ಲೆಯ ಪ್ರಾಥ ಮಿಕ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೋರಿಕೆ ಮೇಲೆ ನಡೆದ ವರ್ಗಾವಣೆಯಲ್ಲಿ ಒಟ್ಟು 1,626 ಮಂದಿ ಸಹ ಶಿಕ್ಷಕರು ಅರ್ಜಿ ಸಲ್ಲಿಸಿದ್ದು, ಆ ಪೈಕಿ 160 ಶಿಕ್ಷಕರು ಮಾತ್ರ ವರ್ಗಾವಣೆಗೊಂಡಿದ್ದಾರೆ.
ಮುಖ್ಯ ಶಿಕ್ಷಕರು 32 ಮಂದಿ ಪೈಕಿ ಕೇವಲ 13 ಮಂದಿ ಮಾತ್ರ ವರ್ಗಾವಣೆಗೊಂಡರೆ ಅರ್ಜಿ ಸಲ್ಲಿಸಿದ್ದ 36 ಮಂದಿ ದೈಹಿಕ ಶಿಕ್ಷಕರ ಪೈಕಿ 02 ಮಾತ್ರ ವರ್ಗಾವಣೆಗೊಂಡಿದ್ದಾರೆ. ಈ ಬಾರಿ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಕೌನ್ಸಿಲಿಂಗ್ ನಡೆಯಿತು. ಯಾವುದೇ ಗೊಂದಲಗಳಿಗೆ ಅವಕಾಶ ಇಲ್ಲದೇ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆ ಮುಕ್ತಾಯಗೊಂಡಿದೆ.
ಕೇಂದ್ರ ಕಚೇರಿಯಲ್ಲಿ ಪ್ರೌಢ ಶಿಕ್ಷಕರ ವರ್ಗಾ: ಜಿಲ್ಲಾ ಕೇಂದ್ರದಲ್ಲಿ ಕೇವಲ ಪ್ರಾಥಮಿಕ ಶಾಲಾ ಶಿಕ್ಷಕರ ವರ್ಗಾವಣೆಗೆ ಮಾತ್ರ ಕೌನ್ಸಿಲಿಂಗ್ ನಡೆದ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಳಿದಂತೆ ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ವಿಭಾಗೀಯ ಮಟ್ಟದಲ್ಲಿ ನಡೆಯಲಿದೆ.
ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆಯಲ್ಲಿ ಕಡ್ಡಾಯ ವರ್ಗಾವಣೆ ವಿರೋಧಿಸಿ ಈಗಾಗಲೇ ಶಿಕ್ಷಕರು ಪ್ರತಿ ಭಟನೆ ನಡೆಸಿದ್ದಾರೆ. ಆದರೂ ಜಿಲ್ಲೆಯ ಬಾಗೇಪಲ್ಲಿ ತಾಲೂಕಿಗೆ ಸುಮಾರು 30 ಕ್ಕೂ ಹೆಚ್ಚು ಪ್ರೌಢ ಶಾಲಾ ಶಿಕ್ಷಕರನ್ನು ಕಡಾಯ ವರ್ಗಾವಣೆ ಮೂಲಕ ವರ್ಗಾ ವಣೆ ಮಾಡಲಾಗಿದ್ದು, ಬಾಗೇಪಲ್ಲಿ ತಾಲೂಕಿನಲ್ಲಿ ಸ್ವಲ್ಪ ಮಟ್ಟಿಗೆ ಶಿಕ್ಷಕರ ಕೊರತೆ ನೀಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!