ಕಬ್ಬಿನ ಆಸೆಗೆ ಪ್ರಾಣ ಕಳೆದುಕೊಂಡ ಬಾಲಕ
Team Udayavani, Jan 30, 2021, 1:37 PM IST
ಕೊಳ್ಳೇಗಾಲ: ಕಬ್ಬಿನ ಆಸೆಗಾಗಿ ಬಾಲಕ ಪ್ರಾಣವನ್ನೇ ಕಳೆದುಕೊಂಡಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಕುಣಗಳ್ಳಿ ಗ್ರಾಮದಲ್ಲಿ ಜರುಗಿದೆ. ಗ್ರಾಮದ ವಿಜಯ್ ಕುಮಾರ್ ಶೆಟ್ಟಿ (8) ಮೃತ ದುರ್ದೈವಿ. ಬಾಲಕನ ಶವ ಕೆರೆಯಲ್ಲಿ ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ, ಟ್ರ್ಯಾಕ್ಟರ್ ಹರಿಸಿದ್ದರಿಂದ ಆತ ಮೃತಪಟ್ಟಿರುವುದು ದೃಢಪಟ್ಟಿದೆ.
ಘಟನೆ ವಿವರ: ಕುಮಾರ್ ಶೆಟ್ಟಿ ಸೇರಿದಂತೆ ಮೂವರು ಬಾಲಕರು ಟ್ರ್ಯಾಕ್ಟರ್ವೊಂದರಲ್ಲಿ ತುಂಬಿದ್ದ ಕಬ್ಬನ್ನು ತೆಗೆದುಕೊಳ್ಳಲು ಹೋಗಿದ್ದರು. ಈ ಸಂದರ್ಭದಲ್ಲಿ ಬಾಲಕರು ಇರುವುದನ್ನು ಗಮನಿಸದೇ ಚಾಲಕ ಟ್ರ್ಯಾಕ್ಟರ್ ಚಾಲನೆ ಮಾಡಿದ್ದಾನೆ. ಆಗ ಕುಮಾರ್ ಶೆಟ್ಟಿ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದರಿಂದ ಗಾಬರಿಗೊಂಡ ಚಾಲಕ ಈ ಅಪಘಾತ ಪ್ರಕರಣವನ್ನು ಮುಚ್ಚಿಹಾಕಲು ಬಾಲಕನ ಶವವನ್ನು ಪಕ್ಕದಲ್ಲೇ ಇದ್ದ ಕೆರೆಗೆ ಬಿಸಾಡಿ ತೆರಳಿದ್ದನು.
ತಂದೆ ಮಹದೇವ ಶೆಟ್ಟಿ ತಮ್ಮ ಪುತ್ರ ಮನೆಗೆ ಬಂದಿಲ್ಲವೆಂದು ಹುಡುಕಾಟ ನಡೆಸಿದ ಬಳಿಕ ಕೆರೆಯಲ್ಲಿ ಶವವೊಂದು ಪತ್ತೆಯಾಗಿತ್ತು. ಈ ಶವ ಬಾಲಕ ವಿಜಯ್ ಕುಮಾರ್ ಶೆಟ್ಟಿ ಎಂಬುದು ದೃಢಪಟ್ಟಿದ್ದು, ದೇಹದ ಮೇಲೆ ಗಂಭೀರ ಗಾಯಗಳಾಗಿರುವುದು ಕಂಡು ಬಂದಿದೆ. ಯಾರೋ ಮಗನನ್ನು ಕೊಲೆಗೈದು ಕೆರೆಗೆ ಬಿಸಾಡಿದ್ದಾರೆ ಎಂದು ತಂದೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ:ವಿದೇಶಿ ವಿನಿಮಯ ಕಾಯ್ದೆ ಉಲ್ಲಂಘನೆಯ ಆರೋಪದಲ್ಲಿ ಸಿಲುಕಿಕೊಂಡ ಅಮೆಜಾನ್
ತನಿಖೆ ಕೈಗೊಂಡ ಪೊಲೀಸರು, ಮೃತ ಬಾಲಕನ ಇಬ್ಬರು ಸ್ನೇಹಿತರನ್ನು ವಿಚಾರಿಸಿದಾಗ, ಟ್ರ್ಯಾಕ್ಟರ್ನಲ್ಲಿ ತುಂಬಿದ್ದ ಕಬ್ಬನ್ನು ತರಲು ಹೋಗಿದ್ದ ವಿಷಯನ್ನು ತಿಳಿಸಿದ್ದಾರೆ. ಆ ಟ್ರ್ಯಾಕ್ಟರ್ ಯಾರದ್ದು ಎಂದು ಪೊಲೀಸರು ಪತ್ತೆ ಹಚ್ಚಿ ಚಾಲಕ ಬಸವರಾಜುನನ್ನು ವಿಚಾರಣೆ ನಡೆಸಿದಾಗ, “ಟ್ರ್ಯಾಕ್ಟರ್ ಚಲಿಸಿದಾಗ ಚಕ್ರಕ್ಕೆ ಸಿಲುಕು ಬಾಲಕ ಸಾವನ್ನಪ್ಪಿದ್ದನು. ಯಾರಿಗೂ ಕಾಣಬಾರದೆಂದು ಶವವನ್ನು ತಾನೇ ಕೆರೆಗೆ ಬಿಸಾಡಿದ್ದೆ’ ಎಂದು ಆತ ತಪ್ಪೊಪ್ಪಿಕೊಂಡಿದ್ದಾನೆ. ಪೊಲೀಸರು ಚಾಲಕ ಬಸವರಾಜುನನ್ನು ಬಂಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!