ಎಚ್.ಎನ್.ವ್ಯಾಲಿ ನೀರು ಅಕ್ರಮ ಬಳಕೆ ಮಾಡಿದ್ರೆ ಕ್ರಮ
Team Udayavani, Jun 23, 2021, 7:25 PM IST
ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಅಂತರ್ಜಲ ವೃದ್ಧಿಸಲುಹೆಬ್ಟಾಳ-ನಾಗವಾರಕೆರೆಗಳ ತ್ಯಾಜ್ಯ ಸಂಸ್ಕರಿತ ನೀರನ್ನುಯೋಜನೆ (ಎಚ್.ಎನ್. ವ್ಯಾಲಿ) ವ್ಯಾಪ್ತಿಯ ಎಲ್ಲಾ ಕೆರೆಗಳುತುಂಬಿಸುವ ಅಗತ್ಯವಿದೆ. ಮಾರ್ಗ ಮಧ್ಯೆ ಎಲ್ಲಿಯೂ ನೀರು ಅಕ್ರಮವಾಗಿ ಬಳಸದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಣ್ಣ ನೀರಾವರಿ ಸಚಿವಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಎಚ್.ಎನ್.ವ್ಯಾಲಿನೀರುಹರಿಯುತ್ತಿರುವ ಚಿಕ್ಕಬಳ್ಳಾಪುರನಗರದ ಕಂದವಾರ ಕೆರೆಯನ್ನು ವೀಕ್ಷಿಸಿ ನಂತರಸುದ್ದಿಗಾರರೊಂದಿಗೆ ಮಾತನಾಡಿ, ಚಿಕ್ಕಬಳ್ಳಾಪುರ ಜಿಲ್ಲೆಯಹಲವು ಕೆರೆಗಳನ್ನು ತುಂಬಿಸುವ ಮೂಲಕ ಅಂತರ್ಜಲಹೆಚ್ಚಿಸುವಲ್ಲಿ ಎಚ್.ಎನ್.ವ್ಯಾಲಿ ಯೋಜನೆ ಸಹಕಾರಿ ಆಗಿದೆ.ಯೋಜನೆ ವ್ಯಾಪ್ತಿಯ ಕೊನೆಯ ಕೆರೆಗೂ ನಿ àರುಹರಿಯಬೇಕು. ಆ ಮೂಲಕ ಯೋಜನೆಯ ನಿಜವಾದ ಉದ್ದೇಶ ಈಡೇರಬೇಕು ಎಂಬುದು ಸರ್ಕಾರದ ಗುರಿ ಎಂದುಹೇಳಿದರು.
ಅಕ್ರಮ ನೀರು ಬಳಕೆ ಮಾಡಿದ್ರೆ ಕ್ರಮ: ಆದರೆ, ಕೆಲವುರೈತರು ಕಾಲುವೆಗೆ ಅಕ್ರಮವಾಗಿ ಮೋಟರ್ಅಳವಡಿಸಿಕೊಂಡು ವ್ಯಾಲಿ ನೀರನ್ನು ಬಳಸುತ್ತಿದ್ದಾರೆ.ಇದರಿಂದ ಯೋಜನೆಯ ನಿಜವಾದ ಉದ್ದೇಶಕೆ R ಧಕ್ಕೆ ಆಗಿದೆ.ಈ ಕುರಿತು ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ವೃಷಭಾವತಿ ವ್ಯಾಲಿ ಡಿಪಿಆರ್ ಸಿದ್ಧ: 1,400 ಕೋಟಿ ರೂ.ವೆಚ್ಚದ ವೃಷಭಾವತಿ ವ್ಯಾಲಿ ಯೋಜನೆಯ ಮೂಲಕನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ, ತುಮಕೂರಿನಕೆರೆಗಳಿಗೆ ನೀರು ತುಂಬಿಸಲಾಗುವುದು. ಈ ಯೋಜನೆಯಡಿಪಿಆರ್ ಆಗುತ್ತಿದೆ ಎಂದು ಮಾಹಿತಿ ನೀಡಿದರು.ಎರಡು ತಿಂಗಳಲ್ಲಿ ಬಾಕಿ ನೀರು: ಎಚ್.ಎನ್.ವ್ಯಾಲಿಯೋಜನೆಯಡಿ ಚಿಕ್ಕಬಳ್ಳಾಪುರ ಜಿಲ್ಲೆಗೆ 210 ಎಂಎಲ್ಡಿನೀರು ಕೊಡಬೇಕಾಗಿತ್ತು.ಅಷ್ಟು ಪ್ರಮಾಣದ ನೀರುದೊರೆಯುತ್ತಿಲ್ಲ. ಆದ್ದರಿಂದಎಲ್ಲಾ ಕೆರೆಗಳನ್ನು ತುಂಬಿಸಲುಸಾಧ್ಯವಾಗುತ್ತಿಲ್ಲ.
ಈಗ100ರಿಂದ 110 ಎಂಎಲ್ಡಿನೀರು ಹರಿಸಲಾಗುತ್ತಿದೆ. ಎರಡು ತಿಂಗಳ ಒಳಗೆ ಬಾಕಿನೀರನ್ನು Öರಿ ಸಲಾಗುವುದು ಎಂದು ಹೇಳಿದರು.ಸಣ್ಣ ಕೆರೆ ಮೊದಲು ತುಂಬಿಸಿ: ಕಂದವಾರ ಕೆರೆ ತುಂಬಿದನಂತರ ಗೋಪಾಲಕೃಷ್ಣ ಕೆರೆಗೆ ನೀರು ಹರಿಸಬೇಕು. ಈಕೆರೆಯ ಸಾಮರ್ಥ್ಯ 140 ಎಂಸಿಎಫ್ಟಿ ಇದೆ. ದೊಡ್ಡಕೆರೆಗಳು ತುಂಬುವವರೆಗೆ ಕಾಯಬಾರದು.30ರಿಂದ 40 ಎಂಸಿಎಫ್ಟಿ ಸಾಮ¥Âì ದಕೆÃಗ ೆ ಳನ್ನು ಮೊದಲು ತುಂಬಿಸಬೇಕು ಎಂದು ಹೇಳಿದರು.
ಶಾಸಕ ವಿ.ಮುನಿಯಪ್ಪ, ಎಂಎಲ್ಸಿವೈ.ಎ.ನಾರಾಯಣಸ್ವಾಮಿ,ಬಿಜೆಪಿಜಿಲ್ಲಾಧ್ಯಕ್ಷರಾಮಲಿಂಗಪ್ಪ, ಮಾಜಿ ಅಧ್ಯಕ್ಷ ರವಿನಾರಾಯಣರೆಡ್ಡಿ, ಸಣ್ಣನೀರಾವರಿ ಇಲಾಖೆ ಕಾರ್ಯಪಾಲಕ ಅಭಿಯಂತರನರೇಂದ್ರಬಾಬು, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿಭಕ್ತÃಹಳಿ Û ಬೈರೇಗೌಡ, ಡಿವೈಎಸ್ಪಿ ರವಿಶಂಕರ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
MUST WATCH
ಹೊಸ ಸೇರ್ಪಡೆ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್
ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು
Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್