ನಿಷೇಧವಿದ್ದರೂ ನಂದಿಗಿರಿಧಾಮಕ್ಕೆ ಪ್ರವಾಸಿಗರು ಆಗಮನ
Team Udayavani, Jul 18, 2021, 8:58 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಪ್ರೇಕ್ಷಣಿಯ ತಾಣ ನಂದಿಗಿರಿಧಾಮಕ್ಕೆ ವಾರಾಂತ್ಯ ಭೇಟಿ ನಿಷೇಧಿಸಿದ್ದರೂಶನಿವಾರ ನೂರಾರು ಪ್ರವಾಸಿಗರು ಆಗಮಿಸಿದ್ದರು.ಪ್ರವೇಶ ದ್ವಾರದಲ್ಲೇ ಹಾಕಿದ್ದ ನಿಷೇಧದ ನಾಮಫಲಕನೋಡಿ ನಿರಾಸೆಯಿಂದ ಹಿಂದಿರುಗಿದ ದೃಶ್ಯ ಕಂಡುಬಂತು.
ನಂದಿಬೆಟ್ಟದ ತಪ್ಪಲಿನ ಚೆಕ್ಪೋಸ್ಟ್ ಬಳಿಬ್ಯಾರಿಕೇಡ್ಹಾಕಿ, ನಂದಿಬೆಟ್ಟಕ್ಕೆಪ್ರವಾಸಿಗರಪ್ರವೇಶನಿರ್ಬಂಧಿಸಿದ್ದು, ಬೆಳ್ಳಂಬೆಳಗ್ಗೆ ಕಾರು ಹಾಗೂ ಬೈಕ್ಗಳಲ್ಲಿ ಆಗಮಿಸಿದ್ದ ಪ್ರವಾಸಿಗರು ದೂರದಿಂದಲೇನಂದಿಬೆಟ್ಟ ನೋಡಿ, ಮೊಬೈಲ್ನ ಕ್ಯಾಮೆರಾದಲ್ಲಿಸೆಲ್ಫಿ ತೆಗೆದುಕೊಂಡು, ಮನಸಿನಲ್ಲೇ ಬೈದುಕೊಂಡುವಾಪಸ್ಸಾದರು.ಜಿಲ್ಲಾಡಳಿತದಿಂದ ಆದೇಶ: ಕಳೆದ ವೀಕೆಂಡ್ನಲ್ಲಿಸಾವಿರಾರು ಮಂದಿ ನಂದಿಬೆಟ್ಟಕ್ಕೆ ಭೇಟಿ ನೀಡಿದ್ದು,ಕೊರೊನಾ ನಿಯಮಗಳನ್ನು ಪ್ರವಾಸಿಗರು ಬ್ರೇಕ್ಮಾಡಿದ್ದರು.
ಹೀಗಾಗಿ ಚಿಕ್ಕಬಳ್ಳಾಪುರ ಜಿಲ್ಲಾಡಳಿತವೀಕೆಂಡ್ನಲ್ಲಿ ನಂದಿಗಿರಿಧಾಮ ಬಂದ್ ಮಾಡಿಆದೇಶ ಹೊರಡಿಸಿದೆ.ನಾಳೆಯಿಂದ ಪಾಸ್ ವಿತರಣೆ: ಇನ್ನೂ ವೀಕ್ಡೇಸ್ಸಾಮಾನ್ಯದಿನಗಳಲ್ಲಿನಂದಿಗಿರಿಧಾಮಕ್ಕೆಪ್ರವಾಸಿಗರಪ್ರವೇಶಕ್ಕೆ ಅವಕಾಶವಿದೆ. ಸೋಮವಾರದಿಂದಪಾರ್ಕಿಂಗ್ ಸಾಮರ್ಥ್ಯಕ್ಕೆ ಅನುಗುಣವಾಗಿಪ್ರವಾಸಿಗರಿಗೆ ಪಾಸ್ ವಿತರಿಸಿ ಪ್ರವೇಶಕ್ಕೆ ಅವಕಾಶನೀಡಲಾಗುವುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್.ಲತಾ ತಿಳಿಸಿದ್ದಾರೆ.
ಪ್ರವಾಸಿಗರ ನೆಚ್ಚಿನ ತಾಣ: ಕರ್ನಾಟಕದಊಟಿಯೆಂದು ಖ್ಯಾತಿ ಹೊಂದಿರುವ ಜಿಲ್ಲೆಯಲ್ಲಿನಂದಿಗಿರಿಧಾಮ ಎಲ್ಲರ ಮೆಚ್ಚುಗೆಯ ಪ್ರವಾಸಿತಾಣವಾಗಿದೆ. ಇತ್ತೀಚಿನ ದಿನಗಳಲ್ಲಿ ಪ್ರಾಕೃತಿಕಸೌಂದರ್ಯಮತ್ತುಸೊಬಗನ್ನುಕಣ್ತುಂಬಿಸಿಕೊಳ್ಳುವಖುಷಿಯಲ್ಲಿ ರಾಜ್ಯ ಸರ್ಕಾರ ಜಾರಿಗೊಳಿಸಿರುವಕೋವಿಡ್-19 ನಿಯಮ ಗಾಳಿಗೆ ತೂರಿದ್ದಫಲದಿಂದಾಗಿ ನಂದಿಗಿರಿಧಾಮದಲ್ಲಿ ವೀಕೆಂಡ್ನಲ್ಲಿಪ್ರವೇಶವನ್ನು ನಿರ್ಬಂಧಿಸಿ ಲಾಕ್ಡೌನ್ಮಾಡಲಾಗಿದೆ. ಇದರಿಂದ ಸ್ಥಳೀಯ ಪ್ರವಾಸಿಗರಿಗೆ ನಿರಾಸೆಯುಂಟಾಗಿದೆ.
ಪೊಲೀಸರು ಹರಸಾಹಸ: ಕಳೆದ ವೀಕೆಂಡ್ನಲ್ಲಿನಂದಿಗಿರಿಧಾಮಕ್ಕೆ ಜನಸಾಗರವೇ ಹರಿದು ಬಂದಹಿನ್ನೆಲೆಯಲ್ಲಿ ಸ್ಥಳೀಯರು ಮುಂದಿನ ದಿನಗಳಲ್ಲಿನಂದಿಗಿರಿಧಾಮಕೊರೊನಾಹಾಟ್ಸ್ಪಾಟ್ ಆಗಲಿದೆಎಂದು ಆತಂಕ ವ್ಯಕ್ತಪಡಿಸಿದ್ದರು. ಜೊತೆಗೆ ಸಂಚಾರಪೊಲೀಸರು ನಿಯಮ ಉಲಂಘಿಸಿದ ವಾಹನ ಸವಾರರಿಗೆ ದಂಡ ವಿಧಿಸಿ ಶಾಕ್ ನೀಡಿದರು. ಆದರೂ,ಪ್ರವಾಸಿಗರುಹೆಚ್ಚಿನ ಸಂಖ್ಯೆಯಲ್ಲಿಆಗಮಿಸಿದ್ದರಿಂದಅವರನ್ನು ನಿಯಂತ್ರಿಸಲು ಹರಸಾಹಸಪಡುವಂತಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
MUST WATCH
ಹೊಸ ಸೇರ್ಪಡೆ
Rameshwaram Cafe ಪ್ರಕರಣ: ಇಬ್ಬರು ಶಂಕಿತರ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಿದ NIA
LS Election; ದಿಂಗಾಲೇಶ್ವರ ಶ್ರೀ ಟೀಕೆ ನನಗೆ ಆಶೀರ್ವಾದ ಇದ್ದಂತೆ: ಪ್ರಹ್ಲಾದ್ ಜೋಶಿ
Kejriwal ಪತ್ನಿಯನ್ನು ರಾಬ್ರಿ ದೇವಿಗೆ ಹೋಲಿಸಿದ ಕೇಂದ್ರ ಸಚಿವ ಹರ್ದೀಪ್ ಪುರಿ
Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್’: ಟ್ರೇಲರ್, ಆಡಿಯೋದಲ್ಲಿ ಹೊಸಬರ ಚಿತ್ರ
Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್