ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಧಾರಾಕಾರ ಮಳೆ
Team Udayavani, Jul 19, 2021, 8:38 PM IST
ಚಿಕ್ಕಬಳ್ಳಾಪುರ: ಸತತ ಬರಗಾಲದಿಂದ ತತ್ತರಿಸುತ್ತಿರುವ ಜಿಲ್ಲೆಗೆಈ ಬಾರಿಯ ಮುಂಗಾರು ಮಳೆ ಒಂದಷ್ಟು ಆಶಾಭಾವನೆಮೂಡಿಸಿದೆ. ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆಕೆರೆ-ಹಳ್ಳಗಳಿಗೆ ನೀರು ಹರಿದು ರೈತರಿಗೆ ಒಂದು ಕಡೆ ಸಂತಸ,ಮತ್ತೂಂದೆಡೆ ಸಂಕಟ ಆಗಿದೆ.
ವಾರದಿಂದಲೂ ಮೋಡಕವಿದ ವಾತಾವರಣ, ತುಂತುರಾಗಿಬೀಳುತ್ತಿದ್ದ ಮಳೆ ಶನಿವಾರ ರಾತ್ರಿ ಧಾರಾಕಾರವಾಗಿ ಸುರಿಯಿತು.ಇದರಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೆಲವು ಕಡೆಮರಗಳು ನೆಲಕ್ಕೆ ಉರುಳಿವೆ. ಮಣ್ಣಿನ ಮನೆ, ಗೋಡೆಗಳುಕುಸಿದು, ಕಾಗದ ಪತ್ರಗಳು, ದವಸ ಧಾನ್ಯ ನೀರು ಪಾಲಾಗಿದೆ.
ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.ಚಿಕ್ಕಬಳ್ಳಾಪುರ ತಾಲೂಕಿನ ನವಿಲುಗುರ್ಕಿ, ಬೊಮ್ಮೇನಹಳ್ಳಿಗ್ರಾಮಗಳಲ್ಲಿ2 ಮನೆಗಳ ಗೋಡೆಕುಸಿದಿರುವ ಕುರಿತು ಮಾಹಿತಿಬಂದಿದೆ ಎಂದು ತಹಶೀಲ್ದಾರ್ ಗಣಪತಿಶಾಸ್ತ್ರಿ ತಿಳಿಸಿದ್ದಾರೆ.
ಜಲಾವೃತ: ಚಿಕ್ಕಬಳ್ಳಾಪುರದ ಮಂಚನಬಲೆಗೆ ಸಂಪರ್ಕಕಲ್ಪಿಸುವ ಸೇತುವೆ ಮತ್ತು ಶಿಡ್ಲಘಟ್ಟದಿಂದ ಇದೂÉಡುಗೆ ತೆರಳುವಸೇತುವೆ ಜಲಾವೃತಗೊಂಡಿದೆ. ವಾಹನ ಸವಾರರು ಪರದಾಡುವಂತಾಗಿದೆ. ಈ ಸಂಬಂಧ ಸಂಸದರಿಗೆ ಮತ್ತು ರೈಲ್ವೆ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಿಲ್ಲಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತುಂಬಿ ಹರಿದ ಚಿತ್ರಾವತಿ: ಜಿಲ್ಲೆಯ ಬಾಗೇಪಲ್ಲಿ ಮೂಲಕಆಂಧ್ರಕ್ಕೆ ಹೋಗುವ ಚಿತ್ರಾವತಿ ನದಿ, ಕೆಲವು ವರ್ಷಗಳಿಂದ ಬತ್ತಿಹೋಗಿತ್ತು. ಆದರೆ, ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆಜೀವಕಳೆ ಬಂದಿದೆ. ನದಿಯಲ್ಲಿ ನೀರು ಉಕ್ಕಿ ಹರಿಯುತ್ತಿದೆ.ಇದನ್ನು ನೋಡಲು ಸ್ಥಳೀಯರು ಮುಗಿಬಿದ್ದಿದ್ದಾರೆ. ವಾರಗಳಕಾಲ ಇದೇ ರೀತಿ ಹರಿದರೆ ಸಾವಿರಾರು ಅಡಿಗೆ ಕುಸಿದಿರುವಅಂತರ್ಜಲ ಸುಧಾರಿಸಲಿದೆ ಎಂಬ ನಿರೀಕ್ಷೆ ರೈತರದಾಗಿದೆ.
ಸಂಕಷ್ಟ: ತಾಲೂಕಿನ ಮೈಲಪನಹಳ್ಳಿ ಭಾಗದಲ್ಲಿಕಂದವಾರಕೆರೆಹಿನ್ನೀರಿನ ಪ್ರದೇಶದಲ್ಲಿ ಹತ್ತಾರು ಎಕರೆಯಲ್ಲಿ ಬೆಳೆದಿದ್ದಸೇವಂತಿ, ಗುಲಾಬಿ, ಬೀನ್ಸ್ ಜಲಾವೃತವಾಗಿದೆ. ಚಿಕ್ಕಬಳ್ಳಾಪುರನಗರದ ಸುಬ್ಬರಾಯನ ಪೇಟೆಯಲ್ಲಿ ಹಳೆ ಮನೆಗಳುಕುಸಿದಿವೆ. ಹಾಗೆಯೇ, ತಿಮ್ಮೇಗೌಡನ ಕೆರೆ ಪ್ರದೇಶವಾಗಿದ್ದ 8,9ನೇ ವಾರ್ಡ್ಗಳಲ್ಲಿನ ತಗ್ಗಿನಲ್ಲಿದ್ದ ಮನೆಯೊಳಗೆ ನೀರು ನುಗ್ಗಿನಿವಾಸಿಗಳು ಪರದಾಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ