ವೃದ್ಧಾಪ್ಯ ವೇತನ ಬೇಡವೆಂದ ವೃದ್ದೆ
ಸರ್ಕಾರದ ಮಾಸಿಕ ಪಿಂಚಣಿ ತಿರಸ್ಕರಿಸಿದ ಗುಡಿಬಂಡೆ ಪಟ್ಟಣದ ನಿವಾಸಿ ವೃದ್ದೆ ರಾಜಮ್ಮ
Team Udayavani, Aug 6, 2021, 5:26 PM IST
ಗುಡಿಬಂಡೆ : ಸರ್ಕಾರದಿಂದ ಯಾವುದೇ ಸೌಲಭ್ಯ ಬಂದರೂ ಅದರಲ್ಲಿ ಒಂದು ರೂಪಾಯಿ ಬಿಡದೆ ಪಡೆಯುವಂತವರು ಇರುವ ಈ ಕಾಲದಲ್ಲಿ ಪಟ್ಟಣದ ವೃದ್ಧೆ ರಾಜಮ್ಮ ನನಗೆ ಮಾಸಿಕ ವೃದ್ಧಾಪ್ಯ ಪಿಂಚಣಿ ಬೇಡವೆಂದು ತಿರಸ್ಕರಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಪಟ್ಟಣದ ಸೊಪ್ಪಿನಪೇಟೆ ನಿವಾಸಿಯಾದ ರಾಜಮ್ಮ ಕೋಂ ಕದಿರಪ್ಪ ಎಂಬುವರ ಮನೆಯ ಬಳಿಗೆ ಕಂದಾಯ ಇಲಾಖೆಯ ಇಲಾಖೆಯ ಅಧಿಕಾರಿಗಳು ಬೇಟಿ ನೀಡಿ, ಆಕೆಯನ್ನು ಇನ್ನೂ ಏಕೆ ನೀವು ವೃದ್ಧಾಪ್ಯ ವೇತನ ಮಾಡಿಸಿಕೊಂಡಿರುವುದಿಲ್ಲ, ಈಗ ನಿಮ್ಮ ಮನೆಯ ಬಾಗಿಲಿಗೆ ಬಂದಿದ್ದೇವೆ, ದಾಖಲೆಗಳನ್ನು ನೀಡಿ, ನಿಮಗೆ ವೃದ್ಧಾಪ್ಯ ವೇತನ ಮಾಡಿಸಿಕೊಡುತ್ತೇವೆ ಎಂದು ಕೇಳಿದಾಗ, 80 ವರ್ಷದ ರಾಜಮ್ಮ ನನಗೆ ಸರ್ಕಾರದ ಪಿಂಚಣಿ ಬೇಕಾಗಿಲ್ಲ, ನನ್ನನ್ನು ದೇವರು ಇನ್ನೂ ಗಟ್ಟಿಯಾಗೇ ಇಟ್ಟಿದ್ದಾನೆ, ನನಗೆ ಏನಾದರೂ ಹಣದ ಅವಶ್ಯಕತೆ ಬಂದಲ್ಲಿ ನನ್ನ ಮಕ್ಕಳು ನೀಡುತ್ತಾರೆ, ಇನ್ನೂ ನನಗೆ ಇರುವ ಜಮೀನಿನಲ್ಲಿ ಅಲ್ಪ ಸ್ವಲ್ಪ ಬರುತ್ತದೆ, ಇನ್ನೂ ಏಕೆ ಬೇಕೆ ನನಗೆ ಸರ್ಕಾರದ ಪಿಂಚಣಿ, ಅದನ್ನು ಬೇರೆ ಬಡ ಕುಟುಂಬದವರಿಗೆ ನೀಡಿ ಎಂದು ತಿರಸ್ಕರಿಸಿದ್ದಾರೆ.
ಇದನ್ನೂ ಓದಿ : ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಶಾಸಕ ಜಿ.ಎಚ್. ತಿಪ್ಪಾರೆಡ್ಡಿ ಮೆಚ್ಚುಗೆ
ಈಕೆ ಪಿಂಚಣಿಯನ್ನು ತಿರಸ್ಕರಿಸುತ್ತಿರುವಾಗ ಸ್ಥಳಿಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ, ಎಷ್ಟೋ ಜನ ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡು ಅಧಿಕಾರಿಗಳ ಕಣ್ಣನ್ನು ಮರೆ ಮಾಚಿ, ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುವವರು ಒಂದೆಡೆಯಾದರೇ, ಇನ್ನು ಎಷ್ಟೋ ಜನ ಶ್ರೀಮಂತ ವರ್ಗದವರೇ ಎಲ್ಲರಿಗೂ ಬರುವ ಸೌಲಭ್ಯ ನನಗೂ ಸಹ ಬರಲಿ ಎಂದು ಅಧಿಕಾರಿಗಳಿಂದ ಪಿಂಚಣಿ ಸೌಲಭ್ಯ ಆದೇಶ ಮಾಡಿಸಿಕೊಂಡು, ಪಿಂಚಣಿ ಪಡೆಯುತ್ತಿರುವ ಈ ಕಾಲದಲ್ಲಿ ಪಟ್ಟಣದ ರಾಜಮ್ಮ ನನಗೆ ಸರ್ಕಾರದಿಂದ ಬರುವ ಪಿಂಚಣಿ ಸೌಲಭ್ಯ ನನಗೆ ಬೇಡ ವೆಂದು ಸುದ್ಧಿಯಾಗಿದ್ದಾಳೆ.
ಇದಕ್ಕೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್ ಸಿಗ್ಬತುಲ್ಲಾ, ಗುಡಿಬಂಡೆ ಪಟ್ಟಣದ ರಾಜಮ್ಮ ಮಾದರಿಯಾಗಿರುವುದು ಸಂತಸ ಎಂದರು.
ಇದನ್ನೂ ಓದಿ : ಪ್ರವಾಹ ಸಂತೃಸ್ತರಿಗೆ ಮೂಲಸೌಕರ್ಯಗಳನ್ನು ಕಲ್ಪಿಸಿ ನಿವೇಶನ ಹಂಚಿ: ಗೋವಿಂದ ಕಾರಜೋಳ ಸೂಚನೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
MUST WATCH
ಹೊಸ ಸೇರ್ಪಡೆ
Ramnagar: ಜಿಲ್ಲೆಯಲ್ಲಿ 25 ಕೋಟಿ ರೂ. ಅಕ್ರಮ ವಸ್ತು ಪತ್ತೆ
Department of Health: ಜನರಿಗೆ ಅರಿವಿನ ಟಾನಿಕ್ ನೀಡುತ್ತಿರುವ ಆರೋಗ್ಯ ಇಲಾಖೆ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
Tollywood: ಈ ತಿಂಗಳಿನಲ್ಲಿ ಸೆಟ್ಟೇರಲಿದೆ ಜೂ.ಎನ್ ಟಿಆರ್ – ಪ್ರಶಾಂತ್ ನೀಲ್ ಸಿನಿಮಾ