ಚಿಕ್ಕಬಳ್ಳಾಪುರ ಜಿಲ್ಲೆಗೆ 15 ರ ವಸಂತ


Team Udayavani, Aug 23, 2021, 7:31 PM IST

chikkaballapura news

ಚಿಕ್ಕಬಳ್ಳಾಪುರ: ಅಖಂಡ ಕೋಲಾರ ಜಿಲ್ಲೆಯಿಂದ ಉದಯವಾಗಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಇದೀಗ 15ರ ವಸಂತ. ಇದು ಜಿಲ್ಲೆಯ ಜನರ ಪಾಲಿಗೆ ಸಂಭ್ರಮವೂ ಹೌದು. ಇದರ ಜೊತೆಗೆ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿಯಾಗಿಲ್ಲ ಎಂಬ ಅಸಮಾಧಾನವಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯಾಗಿ ಆ.23ಕ್ಕೆ 14 ವರ್ಷ ಪೂರ್ಣಗೊಂಡು,15ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ. ಉಪ ವಿಭಾಗವಾಗಿದ್ದ ಚಿಕ್ಕಬಳ್ಳಾಪುರವನ್ನು ಜಿಲ್ಲೆಯನ್ನಾಗಿಸಲು ಮಾಜಿ ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ಪ್ರಯತ್ನ ಮಾಡಿದರೂ ಕ್ಷೇತ್ರ ಪುನರ್‌ ವಿಂಗಡಣೆಯಾಗದ ಕಾರಣ, ಅವರ ಅಧಿಕಾರಾವಧಿಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಘೋಷಣೆ ಆಗಿಲ್ಲ. ಆದರೆ,ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ರಾಮನಗರ ಮತ್ತು ಚಿಕ್ಕಬಳ್ಳಾಪುರವನ್ನುಜಿಲ್ಲೆಯಾಗಿ ಘೋಷಣೆ ಮಾಡಿದರು.

ರಾಮನಗರ ಜಿಲ್ಲೆಗೆ ಬೇಕಾಗಿರುವ ಅನುದಾನವನ್ನು ಒದಗಿಸಿದ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ,ಚಿಕ್ಕಬಳ್ಳಾಪುರ ಜಿಲ್ಲೆಯ ಅಭಿವೃದ್ಧಿ ವಿಚಾರದಲ್ಲಿ ತಾರತಮ್ಯ ಮಾಡಿದರು ಎಂಬ ಅಪವಾದ ಈಗಲೂ ಅವರ ಮೇಲಿದೆ. ಅಖಂಡ ಕೋಲಾರ ಜಿಲ್ಲೆಯಿಂದ ಚಿಕ್ಕಬಳ್ಳಾಪುರ ಪ್ರತ್ಯೇಕ ಜಿಲ್ಲೆ ಆಗಿ ಉದಯವಾಗಲುಅನೇಕರ ಶ್ರಮವಿದೆ. ಅದರಲ್ಲಿ ಪ್ರಮುಖವಾಗಿ ಕೇಳಿಬರುವ ಹೆಸರೇ ಯಲುವಹಳ್ಳಿ ರಮೇಶ್‌. 1996ರಲ್ಲಿಸರ್‌ಎಂ.ವಿ ಅವರ ಹೆಸರಿನಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯನ್ನಾಗಿಸಲು ಯಲುವಹಳ್ಳಿ ರಮೇಶ್‌ ಮತ್ತುವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರಾಜಕೀಯಪಕ್ಷಗಳ ಮುಖಂಡರು ಸಾಮೂಹಿಕವಾಗಿ ಮಾಡಿದವಿಭಿನ್ನ ರೀತಿಯ ಹೋರಾಟದ ಫಲದಿಂದಾಗಿ ಚಿಕ್ಕಬಳ್ಳಾಪುರಕ್ಕೆ ಜಿಲ್ಲೆಯ ಭಾಗ್ಯ ಒದಗಿ ಬಂದಿತು.

ವಾರಂಟ್‌ನಿಂದ-ಜಿಲ್ಲೆಯವರೆಗೆ: ಅಖಂಡ ಕೋಲಾರ ಜಿಲ್ಲೆಯಿದ್ದ ಸಂದರ್ಭದಲ್ಲಿ ಪ್ರಸ್ತುತ ಚಿಕ್ಕಬಳ್ಳಾಪುರಜಿಲ್ಲೆಯಲ್ಲಿರುವ ಗೌರಿಬಿದನೂರು ಹಾಗೂ ಬಾಗೇಪಲ್ಲಿತಾಲೂಕಿನ ಜನರು ಸಾರ್ವಜನಿಕಕೆಲಸಕಾರ್ಯಗಳನಿಮಿತ್ತ ಅಥವಾಕೋರ್ಟ್‌ ಕಚೇರಿಗೆ ತೆರಳಬೇಕಾದರೆ ಒಂದು ದಿನ ಪೂರ್ತಿ ಕಳೆದು ಹೋಗುತ್ತಿತ್ತು. ಅಖಂಡಕೋಲಾರ ಜಿಲ್ಲೆ ಇದ್ದ ಸಂದರ್ಭದಲ್ಲಿ ಜನತಾದಳದಅಧ್ಯಕ್ಷರಾಗಿ ರೈತಪರ ಮತ್ತು ಜನಪರ ಹೋರಾಟಗಳಲ್ಲಿಸಕ್ರಿಯವಾಗಿ ಭಾಗವಹಿಸುತ್ತಿದ್ದ ಯಲುವಹಳ್ಳಿ ರಮೇಶ್‌ಅವರು,ಕೆಲಸದ ನಿಮಿತ್ತ ಗೌರಿಬಿದನೂರಿಗೆ ಹೋಗಿದ್ದಸಂದರ್ಭದಲ್ಲಿ ಇಬ್ಬರು ಸಹೋದರು ಭೇಟಿ ಮಾಡಿಸಮಯಕ್ಕೆ ಸರಿಯಾಗಿ ನ್ಯಾಯಾಲಯಕ್ಕೆ ಹೋಗದಿದ್ದರಿಂದ ನ್ಯಾಯಾಲಯದಿಂದ ವಾರಂಟ್‌ ಜಾರಿಯಾಗಿದ್ದನ್ನು ತೋರಿಸಿ, ಕೋಲಾರ ಜಿಲ್ಲಾಕೇಂದ್ರಕ್ಕೆ ತೆರಳಲುಆಗುತ್ತಿದ್ದ ತೊಂದರೆಯನ್ನುವಿವರಿಸಿ ಸಮಸ್ಯೆಯನ್ನುಬಗೆಹರಿಸಬೇಕೆಂದು ಮನವಿ ಮಾಡಿದರು.

ಮೊದಲ ಸಭೆಯಲ್ಲಿ 36 ಮಂದಿ ಭಾಗಿ:ಕೋಲಾರಜಿಲ್ಲೆಯಿಂದ ಜನಸಾಮಾನ್ಯರಿಗೆಆಗುತ್ತಿರುವ ಸಮಸ್ಯೆಯನ್ನುಶಾಶ್ವತವಾಗಿ ಪರಿಹರಿಸಲು ಪಣತೊಟ್ಟ ಹೋರಾಟಗಾರ ಯಲುವಹಳ್ಳಿ ರಮೇಶ್‌ ಅವರು ತಮ್ಮಸ್ನೇಹಿತರೊಂದಿಗೆ ಸೇರಿಕೊಂಡು ಸರ್‌ ಎಂ.ವಿಶ್ವೇಶ್ವರಯ್ಯಅವರ ಹೆಸರಿನಲ್ಲಿ ಚಿಕ್ಕಬಳ್ಳಾಪುರವನ್ನುಜಿಲ್ಲೆಯನ್ನಾಗಿಸಲು ಹೋರಾಟ ರೂಪಿಸಲು ನಗರದಪ್ರವಾಸಿ ಮಂದಿರದಲ್ಲಿ ನಡೆಸಿದ ಮೊದಲ ಸ»ಯ ೆ ಲ್ಲಿಕೇವಲ 36 ಮಂದಿ ಭಾಗವಹಿಸಿದ್ದರು.ಸಭೆಯಲ್ಲಿಕೇವಲ 36 ಮಂದಿ ಭಾಗವಹಿಸಿದರೂನಿರಾಸೆ ಆಗದೆ ಹೋರಾಟ ನಡೆಸಲು ಮತ್ತೂಂದು ಸಭೆನಡೆಸಿದಾಗ ನೂರಾರು ಮಂದಿ ಹೋರಾಟಬೆಂಬಲಿಸಿದರು. ನಂತರ ಅನೇಕ ರೀತಿಯ ಹೋರಾಟನಡೆಸಿ ಸರ್ಕಾರದ ಗಮನ ಸೆಳೆಯುವುದರಲ್ಲಿ ರಮೇಶ್‌ಯಶಸ್ವಿಯಾದರು.

ಎಲ್ಲಾ ತಾಲೂಕಲ್ಲೂ ಹೋರಾಟ: ಹೋರಾಟವನ್ನುಯಶಸ್ವಿಗೊಳಿÓಲು ‌ ಸಂಘಟನೆಯನ್ನು ಬಲಿಷ್ಠಗೊಳಿಸಲುರೈತ-ಜನಪರ ಹೋರಾಟಗಾರ ಯಲುವಹಳ್ಳಿ ರಮೇಶ್‌ಅವರನ್ನು ಸರ್‌ ಎಂವಿ ಜಿಲ್ಲಾ ಹೋರಾಟ ಸಮಿತಿಯಸಂಚಾಲಕರನ್ನಾಗಿ ಮತ್ತು ಹಿರಿಯ ಪತ್ರಕರ್ತರಸೋಮಶೇಖರ್‌ಅವರನ್ನುಕಾರ್ಯದರ್ಶಿಆಗಿ ಆಯ್ಕೆ ಮಾಡಿನಂತರ ಶಿಡ್ಲಘಟ್ಟ,ಚಿಂತಾಮಣಿ,ಗೌರಿಬಿದನೂರು,ಬಾಗೇಪಲ್ಲಿ ತಾಲೂಕುಗಳಲ್ಲಿಹೋರಾಟ ತೀವ್ರಗೊಳಿಸಲಾಯಿತು.ಮೊದಲಿಗೆ ಪ್ರತಿಭಟನೆ-ಧರಣಿಗಳ ಹೋರಾಟವನ್ನುಆರಂಭಿಸಿ ನಂತರ ಬೈಕ್‌ ರ್ಯಾಲಿ ನಡೆಸಿ ಸರ್ಕಾರದಗಮನ ಸೆಳೆಯುವಂತಹ ಕೆಲಸವನ್ನು ಮಾಡಿದರು.ಬಳಿಕ ಸರ್ಕಾರಿ ಸಮಾರಂಭಗಳಲ್ಲಿ ಭಾಗವಹಿಸಲು ಬರುವ ಮಂತ್ರಿಗಳನ್ನು ಘೇರಾವ್‌ ಮಾಡಿ ಸರ್ಕಾರಗಳ ವಿರುದ್ಧಘೋಷಣೆಕೂಗಿ ಕvಲೇ ‌ ಸರ್‌ಎಂವಿಜಿಲ್ಲೆಯನ್ನಾಗಿಘೋಷಣೆ ಮಾಡಬೇಕೆಂದುಒತ್ತಾಯಿಸುತ್ತಿದ್ದರು.

ಜೆ.ಎಚ್‌.ಪಟೇಲ್‌ರಿಗೆ ಮನವಿ ಸಲ್ಲಿಕೆ: ಅಖಂಡಕೋಲಾರ ಜಿಲ್ಲೆಯಲ್ಲಿ ನಡೆಯುವ ಚಳವಳಿಗಳಲ್ಲಿಸಕ್ರಿಯವಾಗಿ ಭಾಗವಹಿಸುತ್ತಿದ್ದ ಯಲುವಹಳ್ಳಿ ರಮೇಶ್‌ಅವರು ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ ಅವರು ರಾಜ್ಯದಲ್ಲಿ6 ಹೊಸ ಜಿಲ್ಲೆಗಳನ್ನು ಘೋಷಣೆಮಾಡಿದಾಗ ಚಿಕ್ಕಬಳ್ಳಾಪುರ ಉಪವಿಭಾಗವನ್ನುಜಿÇಯ ೆÉ ನಾಗ್ನಿ ಸಬೇಕೆಂದು ಮನವಿ ಮಾಡಿದರು..‌ಆದರೆ, ಅಂದಿನ ಮುಖ್ಯಮಂತ್ರಿ ಜೆ.ಎಚ್‌.ಪಟೇಲ್‌ಅವರು ಅಧಿಕಾರದ ಕೊನೆಯ ಅವಧಿಯಲ್ಲಿಜಿಲ್ಲೆ ಮಾಡುವ ಇಂಗಿತವನ್ನು ÊÂಕ ಪಡ್ತಿ‌ ಸಿ, ಮೊತ್ತೂಂದುಬಾರಿ ಮುಖ್ಯÊುಂತಿ ‌ Åಯಾಗಿ ಸೇವೆ ಮಾಡುವ ಅವಕಾಶಲಭಿಸಿದರೆ ಮೊದಲು ಚಿಕ್ಕಬಳಾ±Û ‌ುರವನ್ನು ಜಿಲ್ಲೆಮಾಡುವುದಾಗಿ ಭರವಸೆ ನೀಡಿದರು. ಆದರೆ, ಅವರಆಸೆ ಈಡೇರಿಲ್ಲ. ರಾಜಕೀಯವಾಗಿ ಜನತಾದಳದಲ್ಲಿಸಕ್ರಿಯವಾಗಿ ಸೇವೆ ಸಲ್ಲಿಸುತ್ತಿದ್ದ ಯಲುವಹಳ್ಳಿರಮೇಶ್‌, ಅವಕಾಶ ಸಿಕ್ಕಾಗ ಚಿಕಬಳಾ R ±Û ‌ುರÊನ ‌ ು° ಸರ್‌ಎಂವಿ ಜಿಲ್ಲೆಯನ್ನಾಗಿಸಲು ಸರ್ಕಾರದ ಪ್ರತಿನಿಧಿಗಳುಮತ್ತು ಮುಖಂಡರನ್ನು ಒತ್ತಾಯಿಸುವಕಾಯಕವನ್ನುರೂಢಿಸಿಕೊಂಡಿದ್ದರು. ಮಾಜಿ ಕೃಷಿ ಸಚಿವ ಸಿ.ಬೈರೇಗೌಡಅವರ ಗರಡಿಯಲ್ಲಿ ಬೆಳೆದಿದ್ದ ಯಲುವಹಳ್ಳಿ Ãವೆ ‌ ುàಶ್‌ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರನ್ನುನವದೆಹಲಿಯಲ್ಲಿ ಭೇಟಿ ಮಾಡಿ ಜಿಲ್ಲೆ ಮಾಡಲುಮನವಿ ಸಲ್ಲಿಸಿದರು.

ಕುಮಾರ ಸ್ವಾಮಿಯಿಂದಘೋಷಣೆ: ಚಿಕ್ಕಬಳ್ಳಾಪುರಉಪವಿಭಾಗವನ್ನು ಜಿಲ್ಲೆಯ ಸ್ಥಾನಮಾನ ನೀಡಲು ಸತತ12 ವರ್ಷಗಳ ಹೋರಾಟದ ಫಲದಿಂದಾಗಿ ಮಾಜಿಸಿಎಂ ಎಚ್‌.ಡಿ.ಕುವ ‌Þರಸ್ವಾಮಿ ಅಧಿಕಾರಾವಧಿಯಲ್ಲಿಚಿಕRಬ‌ ಳ್ಳಾ±ುರ ‌ ಹಾಗೂ ರಾಮನಗರವನ್ನು ಜಿಲ್ಲೆಯನ್ನಾಗಿಘೋಷಣೆ ಮಾಡಿದರು. ಪ್ರಥಮ ಅನುದಾನಬಿಡುಗಡೆ ಮಾಡಿದರು, ಬಳಿಕ ಅಧಿಕಾರಕ್ಕೆ ಬಂದಮಾಜಿ ಸಿಎಂ ಸಿದ್ದರಾಮಯ್ಯ ಅವರು ಜಿಲ್ಲೆಯಅಭಿವೃದ್ಧಿಗೆ ಬೇಕಾಗಿದ್ದ ಸೌಲಭ್ಯಗಳನ್ನುಕಲ್ಪಿಸಲು ಅಗತ್ಯಅನುದಾನವನ್ನೂ ಬಿಡುಗಡೆ ಮಾಡಿದರಿಂದ ಜಿಲ್ಲೆಯಲ್ಲಿ ಅನೇಕ ಸರ್ಕಾರಿ ಕಟ್ಟಡಗಳು ನಿರ್ಮಾಣ ಭಾಗ್ಯಕಾಣುವಂತಾಯಿತು.

ಎಂ.ಎ.ತಮೀಮ್‌ ಪಾ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.