ಶಿಕಣ ತಜ್ಞ ಡಾ.ಎಚ್ಎನ್ ಸ್ಮರಣೆ
Team Udayavani, Jun 7, 2021, 7:11 PM IST
ಚಿಕ್ಕಬಳ್ಳಾಪುರ: ಶಿಕ್ಷಣ ತಜ್ಞ ಎಚ್.ನರಸಿಂಹಯ್ಯ ನವರು ಬೆಂಗಳೂರು ವಿಶ್ವವಿದ್ಯಾಲಯಉನ್ನತ ಮಟ್ಟಕ್ಕೆ ಕೊಂಡೊಯ್ದವರು. ಸ್ವಾತಂತ್ರ್ಯಹೋರಾಟದಲ್ಲೂ ತಮ್ಮ ಛಾಪು ಮೂಡಿಸಿದ್ದರುಎಂದು ಶಿಕ್ಷಣ ತಜ್ಞ ಡಾ.ಕೋಡಿರಂಗಪ್ಪಅಭಿಪ್ರಾಯಪಟ್ಟರು.
ನಗರದ ವಿವೇಕ ಕೇಂದ್ರದಲ್ಲಿ ನಡೆದ ಡಾ.ಎಚ್. ಎನ್. ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ನಿಕಟ ಪೂರ್ವ, ಸರಳ ವ್ಯಕ್ತಿತ್ವ ಹೊಂದಿದ್ದ ಎಚ್ಎನ್ ಅವರು ವೈಚಾರಿಕತೆಯ ಹರಿಕಾರರಾಗಿದ್ದು, ಹಲವು ಶಾಲಾ ಕಾಲೇಜು ಸ್ಥಾಪಿಸಿ ಬಡವಿದ್ಯಾರ್ಥಿ ಗಳಿಗೆ ಸ್ಫೂ ರ್ತಿಯ ಚಿಲುಮೆ ಆಗಿದ್ದಾರೆ. ಪ್ರಶ್ನಿಸದೆ ಯಾವುದನ್ನು ಒಪ್ಪಬೇಡಿಎನ್ನುವ ನಿಲುವನ್ನು ತಾಳಿದವರು,
ವಿಜ್ಞಾನಕೇವಲ ಪಠ್ಯವಾಗದೆ ಜೀವನ ವಿಧಾನವಾಗಬೇಕು ಮತ್ತು ಜೀವನ ಧರ್ಮವಾಗಬೇಕುಎಂದು ತಿಳಿಸಿದ ಮಹಾನ್ ವ್ಯಕ್ತಿ ಎಚ್.ನರಸಿಂಹಯ್ಯನವರು ಎಂದು ಹೇಳಿದರು.
ಈ ಭಾಗದ ಅಸಂಖ್ಯಾತ ಗ್ರಾಮೀಣ ಬಡವಿದ್ಯಾರ್ಥಿಗಳಿಗೆ ಕಾಲೇಜು ಶಿಕ್ಷಣ ಕೇವಲಕನಸಾಗಿತ್ತು. ಇದನ್ನು ಸಾಕಾರಗೊಳಿಸಲುಎಚ್.ಎನ್ ಅವರು ಬಾಗೇಪಲ್ಲಿ, ಗೌರಿಬಿದನೂ ರು ಎಲ್ಲೂರು ಹೊಸೂರಿನಲ್ಲಿ ಶಾಲಾ-ಕಾಲೇಜು ಆರಂಭಿಸಿ ಮುಂದಿನ ಪೀಳಿಗೆಯಏಳಿಗೆಗೆ ನೆರವಾದರು ಎಂದು ತಿಳಿಸಿದರು.
ಸರ್ಕಾರಿ ಶಿಕ್ಷಣ ಮಹಾವಿದ್ಯಾಲಯದಉಪನ್ಯಾಸಕ ಡಾ.ಎಂ.ಶಂಕರ್ ಮಾತನಾಡಿ,ಎಚ್.ಎನ್. ಅವರ ಮೌಲ್ಯಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಲು ಸಲಹೆನೀಡಿದರು. ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ,ಗಾನ ಅಶ್ವತ್ಥ, ಶಿಕ್ಷಕ ಚನ್ನಕೃಷ್ಣಪ್ಪ, ಕೆ.ಎಂ.ರೆಡ್ಡಪ್ಪ,ನಾರಾಯಣಸ್ವಾಮಿ ಮಾತನಾಡಿದರು.
ಕಾರ್ಯಕ್ರಮದಲ್ಲಿ ಶಿಡ್ಲಘಟ್ಟ ತಾಲೂಕು ವಚನಸಾಹಿತ್ಯ ಪರಿಷತ್ ಅಧ್ಯಕ್ಷ ಪಟೇಲ್ನಾರಾಯಣಸ್ವಾಮಿ, ಪ್ರಗತಿಪರ ಚಿಂತಕಯಲವಳ್ಳಿ ಸೊಣ್ಣೇಗೌಡ, ಅಂತಾರಾಷ್ಟ್ರೀಯಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಪತ್ರಕರ್ತರಾದ ಜಯರಾಂ, ನಾರಾಯಣ ಸ್ವಾಮಿ,ಟೀವಿ ಚಂದ್ರಶೇಖರ್, ನಾರಾಯಣಸ್ವಾಮಿ,ಉಪನ್ಯಾಸಕ ಹರೀಶ್, ಶಿಕ್ಷಕ ಮುನಿರಾಜು,ಗೋಪಾಲಕೃಷ್ಣ, ಗಂಗಾಧರಮೂರ್ತಿಮತ್ತಿತರರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ