ಚಿಕ್ಕಬಳ್ಳಾಪುರ: ಬಿತ್ತನೆ ಬೀಜ, ರಸಗೊಬ್ಬರ ದಾಸ್ತಾನು


Team Udayavani, Jun 11, 2021, 7:10 PM IST

chikkaballapura news

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮುಂಗಾರು ಪೂರ್ವಮಳೆ ವಾಡಿಕೆಗಿಂತ ಹೆಚ್ಚಾಗಿಯೇ ಸುರಿದಿದ್ದು, ರೈತರುಜಮೀನು ಹದ ಮಾಡಿಕೊಂಡು ಈಗಾಗಲೇ ತೊಗರಿ,ನೆಲಗಡಲೆ ಬಿತ್ತನೆ ಕಾರ್ಯ ಆರಂಭಿಸಿದ್ದಾರೆ.

ತಿಂಗಳಾಂತ್ಯದೊಳಗೆ ರಾಗಿ, ಮುಸುಕಿನ ಜೋಳ ಬಿತ್ತನೆಕ್ಕೂ ಸಿದ್ಧತೆನಡೆದಿದೆ.ಜಿಲ್ಲೆಯಲ್ಲಿ ಮೇ ಅಂತ್ಯಕ್ಕೆ 130.7 ಮಿ.ಮೀ. ಮಳೆಆಗಬೇಕಿತ್ತು. ಆದರೆ, ಈ ಬಾರಿ ಹೆಚ್ಚು ಅಂದರೆ 245.5.ಮಿ.ಮೀ. ಆಗಿದೆ. ಇದು ಮುಂಗಾರು ಹಂಗಾಮಿನಶುಭ ಸೂಚನೆಯಾಗಿದೆ. ರೈತರಿಗೆ ಜೂನ್‌ ತಿಂಗಳುನೆಲಗಡಲೆ, ತೊಗರಿ ಬಿತ್ತನೆ ಮಾಡಲು ಸೂಕ್ತಸಮಯವಾಗಿದೆ. ಇದರಿಂದ ದ್ವಿದಳ ಧಾನ್ಯ, ಎಣ್ಣೆಕಾಳುಗಳ ವಿಸ್ತೀರ್ಣ, ಉತ್ಪಾದನೆ ಹೆಚ್ಚಿಸಲು ಸದಾವಕಾಶವಾಗಿದೆ.

ಶೇ.50 ದಾಸ್ತಾನು: ರಾಗಿ, ಮುಸುಕಿನ ಜೋಳ, ಅಲಸಂದಿ ಮತ್ತು ತೃಣಧಾನ್ಯಗಳ ಬಿತ್ತನೆ ಸಮಯವುಜೂನ್‌ ತಿಂಗಳ ಅಂತ್ಯದಿಂದ ಪ್ರಾರಂಭವಾಗಲಿದ್ದು,ಇದಕ್ಕೆ ಪೂರಕವಾಗಿ ಬಿತ್ತನೆ ಬೀಜಗಳ ದಾಸ್ತಾನನ್ನುಕೃಷಿ ಇಲಾಖೆ ಅಧಿ ಕಾರಿಗಳು ರೈತ ಸಂಪರ್ಕ ಕೇಂದ್ರಗಳಲ್ಲಿ ಶೇ.50 ಈಗಾಗಲೇ ದಾಸ್ತಾನು ಮಾಡಿದ್ದಾರೆ.ಉಳಿದಿದ್ದನ್ನು ಹಂತವಾಗಿ ಪೂರೈಕೆ ಮಾಡಲು ಸಿದ್ಧತೆಮಾಡಿಕೊಳ್ಳಲಾಗಿದೆ.  ಇಲಾಖೆಯಿಂದ ರೈತರಿಗೆಕೆ-ಕಿಸಾನ್‌ ತಂತ್ರಾಂಶದಿಂದ ಹಿಡುವಳಿಗೆ ಅನುಗುಣವಾಗಿ ಬಿತ್ತನೆ ಬೀಜ ವಿತರಿಸಲಾಗುತ್ತಿದೆ.

ಪೂರೈಕೆಗೆ ಕ್ರಮ: ಹಿಂದಿನ ವರ್ಷ ಎಕರೆಗೆ ರಾಗಿ-5ಕೆ.ಜಿ., ಮುಸುಕಿನ ಜೋಳ-5 ಕೆ.ಜಿ. ನೀಡಲಾಗುತ್ತಿತ್ತು.ಈ ವರ್ಷದಿಂದ ರೈತರ ಬೇಡಿಕೆಯಂತೆ ಪ್ರತಿ ಎಕರೆಗೆರಾಗಿ 10 ಕೆ.ಜಿ., ಮುಸುಕಿನ ಜೋಳ 8 ಕೆ.ಜಿ., ನೆಲಗಡಲೆ 60 ಕೆ.ಜಿ. ಬಿತ್ತನೆ ಬೀಜ ವಿತರಿಸಲು ಕೃಷಿ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿದ್ದು, ಪ್ರಸ್ತುತ ಜಿಲ್ಲೆಗೆರಾಗಿ 1200 ಕ್ವಿಂಟಲ್‌, ನೆಲಗಡಲೆ 2400 ಕ್ವಿಂಟಲ್‌,ಮುಸುಕಿನ ಜೋಳ 1600 ಕ್ವಿಂಟಲ್‌ ಒಟ್ಟು 4760ಕ್ವಿಂಟಲ್‌ ಬಿತ್ತನೆ ಬೀಜಗಳ ಪೂರೈಕೆಗೆ ಕಾರ್ಯಕ್ರಮರೂಪಿಸಲಾಗಿದೆ.

ಹಂತವಾಗಿ ಪೂರೈಕೆ: ಅದರಲ್ಲಿ ಈಗಾಗಲೇ ಜಿಲ್ಲೆಯ26 ರೈತ ಸಂಪರ್ಕ ಕೇಂದ್ರಗಳಲ್ಲಿ 3000 ಕ್ವಿಂಟಲ್‌ಬಿತ್ತನೆ ಬೀಜ ದಾಸ್ತಾನು ಮಾಡಲಾಗಿದೆ. ಉಳಿದದಾಸ್ತಾನನ್ನು ಹಂತವಾಗಿ ಸರಬರಾಜು ಮಾಡಲು ಕೃಷಿಇಲಾಖೆಯ ಅಧಿ ಕಾರಿಗಳು ಕ್ರಮ ಕೈಗೊಂಡಿದ್ದಾರೆ.

ಬಿತ್ತನೆ ಬೀಜ ವಿತರಣೆ: ರಸಗೊಬ್ಬರಕ್ಕೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ 3,256 ಮೆಟ್ರಿಕ್‌ ಟನ್‌-ಯೂರಿಯಾ, 1000 ಮೆಟ್ರಿಕ್‌ ಟನ್‌- ಡಿ.ಎ.ಪಿ, 900ಮೆಟ್ರಿಕ್‌ ಟನ್‌-ಎಂ.ಒ.ಪಿ, 5500 ಮೆಟ್ರಿಕ್‌ ಟನ್‌-ಇತರೆ ರಸಗೊಬ್ಬರಗಳ ದಾಸ್ತಾನು ಲಭ್ಯವಿದೆ ಎಂದುಕೃಷಿ ಅಧಿ ಕಾರಿಗಳು ಹೇಳಿದ್ದಾರೆ.ಈಗಾಗಲೇ ಜಿಲ್ಲೆಯ ಎಲ್ಲಾ ಕೃಷಿ ಪರಿಕರ ಮಾರಾಟಗಾರರಿಗೆ ಗೂಗಲ್‌-ಮೀಟ್‌ ಮೂಲಕ ರಸಗೊಬ್ಬರ,ಕೀಟನಾಶಕ, ಬಿತ್ತನೆ ಬೀಜಗಳ ದಾಸ್ತಾನು, ಮಾರಾಟಕ್ಕೆಸಂಬಂಧಿ ಸಿದಂತೆ ಸೂಕ್ತ ಮಾರ್ಗದರ್ಶನ ನೀಡಲಾಗಿದೆ. ಜಿಲ್ಲೆಯ ಎಲ್ಲಾ ಪರಿವೀಕ್ಷಕರು ಕೃಷಿ ಪರಿಕರಮಾರಾಟಗಾರರ ಮಳಿಗೆಗಳ ತಪಾಸಣೆ ಕೈಗೊಂಡುಮಾದರಿ ಸಂಗ್ರಹಣೆ ಮಾಡಿ ಪ್ರಯೋಗಾ ಲಯಕ್ಕೆಸಲ್ಲಿಸಲು ಕ್ರಮ ಕೈಗೊಂಡಿದ್ದಾರೆ.

ಎಂ.ಎ.ತಮೀಮ್‌ ಪಾಷ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್‌

1-qeqeqwe

Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್‌ ಕಲ್ಯಾಣ್‌!

Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!

Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!

LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!

LS polls 2024: ಅಸೆಂಬ್ಲಿಯಲ್ಲಿ ಜಂಗೀಕುಸ್ತಿ, ಲೋಕ ಸಮರದಲ್ಲಿ ದೋಸ್ತಿ!

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.