ಕೆರೆಯಾಗಿ ಬದಲಾದ ಮಕ್ಕಳ ಆಟದ ಪಾರ್ಕ್
Team Udayavani, Oct 23, 2021, 6:29 PM IST
ಗುಡಿಬಂಡೆ: ಪಟ್ಟಣದ ಹನ್ನೊಂದನೇ ವಾರ್ಡ್ನ ಮಕ್ಕಳ ಆಟದ ಪಾರ್ಕ್ ಮಳೆ ನೀರು ನಿಂತು ಚಿಕ್ಕ ಕೆರೆಯಂತಾಗಿದೆ.
ಪಟ್ಟಣದಲ್ಲಿ ಒಟ್ಟು 7 ಪಾರ್ಕ್ಗಳಿದ್ದು, ಅವುಗಳಲ್ಲಿ ನಾರೆಪ್ಪ ಬಡಾವಣೆಯ ಪಾರ್ಕ್ನ ಅಭಿವೃದ್ಧಿಗಾಗಿ ಒಂದಷ್ಟು ಹಣವನ್ನು ವ್ಯಯ ಮಾಡಿ ಅಭಿವೃದ್ಧಿ ಮಾಡಿದ್ದರು, ನಂತರ ಇನ್ನು ಹೆಚ್ಚಿನ ಅಭಿವೃದ್ಧಿಗಾಗಿ 2016-17ನೇ ಸಾಲಿನಲ್ಲಿ 14ನೇ ಹಣಕಾಸು ಯೋಜನೆಯಲ್ಲಿ ಸುಮಾರು 7.82 ಲಕ್ಷ ವೆಚ್ಚ ಮಾಡಿ ಪಾರ್ಕ್ಗೆ ಗೇಟ್ ಹಾಗೂ ಉಳಿಕೆ ಭಾಗದ ಕಾಂಪೌಂಡ್ ನಿರ್ಮಾಣಕ್ಕೆ ಖರ್ಚು ಮಾಡಿ ಅಭಿವೃದ್ದಿ ಮಾಡಲಾಗಿತ್ತು.
ಈಗ ಇದೇ ಪಾರ್ಕ್ನಲ್ಲಿ ಮಕ್ಕಳ ಆಟಿಕೆಗಾಗಿ ಸುಮಾರು 16.00 ಲಕ್ಷಕ್ಕೂ ಹೆಚ್ಚು ಹಣವನ್ನು ಖರ್ಚು ಮಾಡಿ ಆಟಿಕೆ ಪರಿಕರಗಳನ್ನು ಹಾಕಿ, ರ್ಯಾಂಪ್ ವಾಕ್ ನಿರ್ಮಾಣ ಮಾಡಿ, ಕುರ್ಚಿಗಳನ್ನು ಹಾಕಿ, ಪಾರ್ಕ್ನ್ನು ಅಭಿವೃದ್ಧಿ ಮಾಡಿರುತ್ತಾರೆ.
ಮಳೆಯಿಂದ ಈ ಪಾರ್ಕ್ನಲ್ಲಿ ಮಳೆ ನೀರು ಹೊರಗೆ ಹೋಗಲು ದಾರಿಯಿಲ್ಲದೆ ಅಲ್ಲೆ ನಿಂತು ಕೆರೆಯಾಗಿ ಮಾರ್ಪಾಟಾಗಿದೆ.
ಅವೈಜ್ಞಾನಿಕವಾಗಿ ನಿರ್ಮಾಣ
ನಾರೆಪ್ಪ ಬಡಾವಣೆಯ ಪಾರ್ಕ್ನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿದ್ದು, ಪಾರ್ಕ್ನಲ್ಲಿ ಈ ಹಿಂದೆ ಸುಮಾರು ಹಣವನ್ನು ವ್ಯಯ ಮಾಡಿ ಎರಡು ಇಂಗು ಗುಂಡಿಯನ್ನು ಸಹ ನಿರ್ಮಾಣ ಮಾಡಿದ್ದರು, ಅದರೆ ಇದನ್ನು ಪಾರ್ಕ್ನ ಅಭಿವೃದ್ಧಿಯ ದೃಷ್ಟಿಯಿಂದ ಮುಚ್ಚಿ ಹಾಕಿದ್ದು, ಇದ್ದ ಒಂದು ಗುಂಡಿಯು ಸರಿಯಾಗಿ ನಿರ್ಮಾಣ ಮಾಡದೆ ಇರುವುದರಿಂದ ಮಳೆ ನೀರು ಅಲ್ಲಿ ಇಂಗುತ್ತಿಲ್ಲ, ಹಾಗೂ ಮಳೆ ನೀರು ಹೊರಗೆ ಹೋಗದೆ ಕೆರೆಯಂತಾಗಿದೆ ಎಂದು ಸ್ಥಳಿಯರು ದೂರುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!