ಇದು ರಿಯಲ್! ವಿಚ್ಛೇದಿತ ಪತಿ ಸಮ್ಮುಖದಲ್ಲೇ ಮರು ಮದುವೆಯಾದ ವಕೀಲೆ
Team Udayavani, Jul 7, 2017, 3:27 PM IST
ಚಿಂತಾಮಣಿ: ಕಲಾಣ್ಯ ಮಂಟಪದಲ್ಲಿ ಸಪ್ತಪದಿ ತುಳಿದು ಮದುವೆಯಾಗಿದ್ದ ಗಂಡನಿಗೆ ವಿಚ್ಛೇದನ ನೀಡಿ, ತನ್ನ ಸ್ವಂತ ಶಾಲೆಯಲ್ಲಿ ಚಾಲಕನಾಗಿದ್ದ ಪ್ರಿಯಕರನೊಂದಿಗೆ ಶಾಲೆಯ ಒಡತಿಯೊಬ್ಬರು ಗಂಡನ ಸಮ್ಮುಖದಲ್ಲಿಯೇ ಮದುವೆಯಾಗಿರುವ ಘಟನೆ ನಗರದ ಆಶ್ವನಿ ಬಡಾವಣೆಯಲ್ಲಿ ನಡೆದಿದೆ.
ಗಂಡನಿಗೆ ವಿಚ್ಛೇದನ ನೀಡಿ ಪ್ರಿಯಕರನೊಂದಿಗೆ ಮದುವೆಯಾದ ನಗರದ ಆಶ್ವನಿ ಬಡಾವಣೆಯಲ್ಲಿ ವಾಸವಾಗಿರುವ ಮಹಿಳೆ ರಚನಾ ವೃತ್ತಿಯಲ್ಲಿ ವಕೀಲೆ. ಹಾಗೂ ರಾಜ್ಯ ರೈತ ಸಂಘದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆಯಾಗಿದ್ದಾರೆ. ಅವರು ಕಳೆದ ಹದಿನೈದು ವರ್ಷಗಳ ಹಿಂದೇ ಪೆದ್ದೂರು ಗ್ರಾಮದ ವಕೀಲ ಈಶ್ವರಗೌಡರನ್ನು ಮದುವೆಯಾಗಿ ಒಂದು ಹೆಣ್ಣು ಹಾಗೂ ಒಂದು ಗಂಡು ಮಗುವಿನ ತಾಯಿಯಾಗಿದ್ದಾರೆ. ಕೆಲ ದಿನಗಳ ನಂತರ ಇವರ ಸಂಸಾರದಲ್ಲಿ ಅನ್ಯೋನ್ಯತೆ ಇಲ್ಲದ ಕಾರಣ ರಚನಾ 2016ರ ಮಾರ್ಚ್ 3 ರಂದು ನ್ಯಾಯಾಲಯದ ಮುಖಾಂತರ ವಿಚ್ಛೇದನ ಪಡೆದಿದ್ದರು.
ಪತಿ ಸಮ್ಮುಖದಲ್ಲೇ ಮರು ಮದುವೆ
ನಂತರ ತಮ್ಮದೇ ಆದ ರಚನಾ ಕ್ರಿಯೇಟಿವ್ ಶಾಲೆಯನ್ನು ನಡೆಸುತ್ತಿದ್ದರು. ಈಶಾಲೆಯಲ್ಲಿ ವಾ ಹನ ಚಾಲಕನಾಗಿದ್ದ ಪರಿಶಿಷ್ಟ ಪಂಗಡಕ್ಕೆ ಸೇರಿದ ಪಾಪ ತಿಮ್ಮನಹಳ್ಳಿ ಗ್ರಾಮದ ಎನ್.ಮಂಜುನಾಥ್ನ ಪರಿಚಯವಾಗಿದೆ. ಪರಿಚಯ ಪ್ರೇಮಕ್ಕೆ ತಿರುಗಿ ಇಬ್ಬರೂ ಪರಸ್ಪರ ಪ್ರೀತಿಸಲಾರಂಭಿಸಿದ್ದಾರೆ. ಹಾಗಾಗಿ, ವಿಚ್ಛೇದನ ನೀಡಿದ್ದ ಮೊದಲ ಪತಿಗೆ ಈ ವಿಷಯವನ್ನು ತಿಳಿಸಿ ಆತನ ಸಮ್ಮುದಲ್ಲಿಯೇ ತಮ್ಮ ಸ್ವಂತ ಮನೆಯಲ್ಲಿ ಚಾಲಕ ಮಂಜುನಾಥ್ನ ಜತೆಗೆ ಮದುವೆಯಾಗಿದ್ದಾರೆ.
ಮರು ಮದುವೆಗಾಗಿ ವಿಚ್ಛೇದನ
ತಾನು ತನ್ನ ಮುಂದಿನ ಜೀವನಕ್ಕೆ ಅನುಕೂಲವಾಗುವ ಹಾಗೂ ತನ್ನನ್ನು ಇಷ್ಟಪಡುವವರನ್ನು ಮದುವೆಯಾಗ ಬೇಕೆಂಬ ಉದ್ದೇಶದಿಂದ ಗಂಡನಿಗೆ ವಿಚ್ಛೇದನ ನೀಡಿದ್ದೆ. ತಮ್ಮ ಶಾಲೆಯಲ್ಲಿಯೇ ವಾಹನ ಚಾಲಕನಾಗಿರುವ ಮಂಜುನಾಥ್ ತನ್ನನ್ನು ಹೆಚ್ಚಾಗಿ ಇಷ್ಟಪಡುತ್ತಿದ್ದ ಕಾರಣ ಜಾತಿ, ಮತ ಯಾವು ದನ್ನೂ ಲೆಕ್ಕಿಸದೇ ಅವರನ್ನು ಮೊದಲ ಪತಿ ಈಶ್ವರಗೌಡರ ಸಮ್ಮುಖದಲ್ಲಿಯೇ ಮದುವೆ ಯಾಗಿದ್ದೇನೆ ಎಂದು ರಚನಾ ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ