ಇ -ಹರಾಜು ಸ್ಥಗಿತ; ರೇಷ್ಮೆ ಬೆಳೆಗಾರರು ಕಂಗಾಲು
Team Udayavani, Aug 20, 2019, 3:22 PM IST
ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ ರೇಷ್ಮೆ ಗೂಡು ಮಾರುಕಟ್ಟೆಯಲ್ಲಿ ಇದೇ ಮೊದಲ ಬಾರಿಗೆ ಇ ಹರಾಜು ಸ್ಥಗಿತಗೊಂಡು ಗೂಡು ತಂದಿದ್ದ ಬೆಳೆಗಾರರು ಗೂಡು ಮಾರಾಟವಾಗದೇ ತೊಂದರೆ ಅನುಭವಿಸಬೇಕಾಯಿತು.
ಏಷ್ಯಾ ಖಂಡದಲ್ಲೇ ಅತಿ ಹೆಚ್ವು ರೇಷ್ಮೆ ಬೆಳೆಯುವ ಬೆಳೆಗಾರರು ಶಿಡ್ಲಘಟ್ಟ ತಾಲೂಕಿನಲ್ಲಿ ಇದ್ದಾರೆ. ಆದರೆ ತಾಂತ್ರಿಕ ದೋಷದಿಂದ ಇ ಹರಾಜು ಸ್ಥಗಿತಗೊಂಡಿದ್ದರಿಂದ ಬೆಳೆಗಾರರು ಪರದಾಡಬೇಕಾಯಿತು. ಕೆಲ ರೈತರು ಮಾರುಕಟ್ಟೆ ಹೊರಗೆ ತಾವು ತಂದಿದ್ದ ರೇಷ್ಮೆ ಗೂಡನ್ನು ಕೈಗೆ ಸಿಕ್ಕ ಬೆಲೆಗೆ ಮಾರಾಟ ಮಾಡಿ ಮನೆಗಳಿಗೆ ತೆರೆಳಿದರು. ಇತಿಹಾಸದಲ್ಲೇ ಮೊದಲ ಬಾರಿಗೆ ಮಾರುಕಟ್ಟೆ ಸ್ಥಗಿತಗೊಂಡಿದೆಯೆಂದು ಬೆಳೆಗಾರರು ಆರೋಪಿಸಿದ್ದಾರೆ.
ಈ ಬಗ್ಗೆ ರೇಷ್ಮೆ ಇಲಾಖೆ ಅಧಿಕಾರಿಗಳ ಗಮನ ಸೆಳೆದರೂ ಏನು ಪ್ರಯೋಜನವಾಗಿಲ್ಲ ಎಂದು ಮಾರುಕಟ್ಟೆಗೆ ರೇಷ್ಮೆ ಗೂಡು ತಂದಿದ್ದ ಬೆಳೆಗಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಿತ್ಯ ಕೋಟ್ಯಾಂತರ ರೂ, ವಹಿವಾಟು ನಡೆಯುವ ಮಾರುಕಟ್ಟೆಯಲ್ಲಿ ಹರಾಜು ನಡೆಯದ ಕಾರಣ ಬೆಳೆಗಾರರು ಕಂಗಾಲಾದರು. ಮಾರುಕಟ್ಟೆಯಲ್ಲಿನ ಜನರೇಟರ್ ಕೆಟ್ಟು ಈ ಸ್ಥಿತಿ ನಿರ್ಮಾಣವಾಗಿದೆಯೆಂದು ರೈತರು ದೂರಿದ್ದಾರೆ. ಟನ್ ಗಟ್ಟಲೇ ರೇಷ್ಮಗೂಡು ಹರಾಜು ಅಗದೆ ಉಳಿದುಕೊಂಡಿದೆ. ಕೆಲವರು ಪರಿಸ್ಥಿತಿಯ ಲಾಭ ಪಡೆದು ರೈತರಿಂದ ಚೌಕಸಿ ಮಾಡಿ ಹೊರಗಿನ ರೀಲರ್ ಗಳು ಗೂಡು ಖರೀದಿಗೆ ಮುಂದಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ