2,054 ಮನೆಗೆ ಉಚಿತ ವಿದ್ಯುತ್ ಭಾಗ್ಯ!
Team Udayavani, Jan 19, 2022, 1:18 PM IST
ಚಿಕ್ಕಬಳ್ಳಾಪುರ: ಬಡತನ ರೇಖೆಗಿಂತ ಕೆಳಗಿರುವವರ ಮನೆಗೆ ಉಚಿತ ವಿದ್ಯುತ್ ಸಂಪರ್ಕ ಒದಗಿಸುವ ಬೆಳಕು ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಜಿಲ್ಲೆಯಲ್ಲಿ (ಚಿಂತಾಮಣಿಉಪವಿಭಾಗ ಸಹಿತ) 4,710 ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಗುರಿ ಹೊಂದಿದ್ದು, ಈಗಾಗಲೇ 2,054 ಫಲಾನುಭವಿಗಳ ಮನೆಗೆ ಕರೆಂಟ್ ಭಾಗ್ಯ ಸಿಕ್ಕಿದೆ.
ಇಂಧನ ಸಚಿವ ಸುನೀಲ್ಕುಮಾರ್ ಇಲಾಖೆಯಲ್ಲಿಹಲವು ರೀತಿಯಲ್ಲಿ ಬದಲಾವಣೆ ತರಲು ಯತ್ನಿಸಿದ್ದು, ಬೆಳಕುಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲುಮುಂದಾಗಿದ್ದಾರೆ. ವಿದ್ಯುತ್ಗೆ ಸಂಬಂಧಿ ಸಿದ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಬೆಸ್ಕಾಂ ಮೂಲಕ ಈಗಾಗಲೇ ಪ್ರತಿತಿಂಗಳು ಕೊನೆ ಶನಿವಾರ ಗ್ರಾಹಕರ ಸಂವಾದ ಸಭೆ ನಡೆಸುತ್ತಿದ್ದಾರೆ. ಅಲ್ಲಿ ಸಲ್ಲಿಕೆ ಆಗುವ ದೂರುಗಳನ್ನು ತ್ವರಿತವಾಗಿಇತ್ಯರ್ಥಗೊಳಿಸಲು ಬೆಸ್ಕಾಂ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಜೊತೆಗೆ ಬೆಳಕು ಯೋಜನೆ ಸದ್ಬಳಕೆ ಮಾಡಿಕೊಳ್ಳಲು ಜಾಗೃತಿ ಮೂಡಿಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ತಾಲೂಕಿನಲ್ಲಿ ಅತ್ಯಧಿಕವಾಗಿ ವಿದ್ಯುತ್ ಸಂಪರ್ಕ ರಹಿತ ಮನೆಗಳನ್ನುಗುರುತಿಸಲಾಗಿದೆ. ಅಲ್ಲದೆ, ಶಿಡ್ಲಘಟ್ಟ ತಾಲೂಕಿನಲ್ಲಿ ಅತೀಕಡಿಮೆ ಅಂದರೆ 194 ಮನೆಗಳು ವಿದ್ಯುತ್ ಸಂಪರ್ಕಪಡೆದಿರಲಿಲ್ಲ. ಆ ಪೈಕಿ 181 ಮನೆಗೆ ವಿದ್ಯುತ್ ಸಂಪರ್ಕ ಒದಗಿಸುವುದರಲ್ಲಿ ಅಧಿ ಕಾರಿಗಳು ಯಶಸ್ವಿಯಾಗಿದ್ದಾರೆ.
ತಾಲೂಕು ಒಟ್ಟು ಮನೆ ಸಂಪರ್ಕ ಪ್ರಗತಿ
ಚಿಂತಾಮಣಿ 1,906 849 1,057
ಚಿಕ್ಕಬಳ್ಳಾಪುರ 528 255 273
ಗೌರಿಬಿದನೂರು 688 194 494
ಗುಡಿಬಂಡೆ 830 206 624
ಬಾಗೇಪಲ್ಲಿ 64 369 195
ಶಿಡ್ಲಘಟ್ಟ 194 181 13
ರಾಜ್ಯ ಇಂಧನ ಸಚಿವರ ಮತ್ತು ಬೆಸ್ಕಾಂ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರ ಸೂಚನೆ ಮೇರೆಗೆ ಚಿಂತಾಮಣಿ ಮತ್ತು ಚಿಕ್ಕಬಳ್ಳಾಪುರ ಉಪವಿಭಾಗದಲ್ಲಿ ವಿದ್ಯುತ್ ಸಂಪರ್ಕ ರಹಿತ ಮನೆಗಳನ್ನು ಗುರುತಿಸಿ ಅದಕ್ಕೆ ವಿದ್ಯುತ್ ಸಂಪರ್ಕವನ್ನು ಕಲ್ಪಿಸುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. – ವೆಂಕಟೇಶಪ್ಪ, ಆನಂದಕುಮಾರ್, ಕಾರ್ಯಪಾಲಕ ಅಭಿಯಂತರರು, ಬೆಸ್ಕಾಂ.
–ಎಂ.ಎ.ತಮೀಮ್ಪಾಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ