ಶಿಕ್ಷಣ, ವಿಜ್ಞಾನಕ್ಕೆ ಹಣ ನೀಡಿ ಪ್ರತಿಭೆ ಸೃಷ್ಟಿಸಿ
Team Udayavani, Feb 8, 2018, 3:44 PM IST
ಚಿಕ್ಕಬಳ್ಳಾಪುರ: ದೇಶದ ಭವಿಷ್ಯ ಹಳ್ಳಿ ಮಕ್ಕಳ ತಲೆ ಮೇಲಿದ್ದು, ಮಕ್ಕಳಿಗೆ ಉತ್ತಮ ಅವಕಾಶ ಕಲ್ಪಿಸಿದರೆ ದೊಡ್ಡ ಮಟ್ಟದಲ್ಲಿ ಪ್ರತಿಭಾವಂತರಾಗಿ ಹೊರಹೊಮ್ಮು ವುದರಲ್ಲಿ ಅನುಮಾನವಿಲ್ಲ. ಆದರೆ, ಸರ್ಕಾರಗಳು ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಗಳಿಗೆ ಕೊಡುವ ಉತ್ತೇ ಜನ, ಬೆಂಬಲ ತೀರಾ ಕಡಿಮೆ ಎಂದು ಖ್ಯಾತ ವಿಜ್ಞಾನಿ, ಭಾರತ ರತ್ನ ಪುರಸ್ಕತ ಸಿ.ಎನ್.ಆರ್. ರಾವ್ ಬೇಸರ ವ್ಯಕ್ತಪಡಿಸಿದರು.
ನಗರದ ಹೊರ ವಲಯದ ಎಸ್ ಜೆಸಿಐಟಿ ಕಾಲೇ ಜಿನ ಸಮ್ಮೇಳನ ಸಭಾಂಗಣದಲ್ಲಿ ಜಿಲ್ಲಾಡಳಿತ ಜಿಲ್ಲೆಯ ವಿದ್ಯಾರ್ಥಿಗಳೊಂದಿಗೆ ಬುಧವಾರ ಆಯೋಜಿಸಿದ್ದ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತ ನಾಡಿದರು.
ಕಡಿಮೆ ಉತ್ತೇಜನ: ದೇಶದ ಒಟ್ಟಾರೆ ಜಿಡಿಪಿಯಲ್ಲಿ ಶೇ.2.50 ರಷ್ಟನ್ನು ಶಿಕ್ಷಣ ಕ್ಷೇತ್ರಕ್ಕೆ ಮೀಸಲಿಡಬೇಕು. ಆ ಕೆಲಸವನ್ನು
ಸರ್ಕಾರಗಳು ಮಾಡುತ್ತಿಲ್ಲ. ವಿಜ್ಞಾನಕ್ಕೂ ಸಹ ಜಿಡಿಪಿಯಲ್ಲಿ ಕನಿಷ್ಠ ಶೇ.1 ರಷ್ಟು ನೀಡುತ್ತಿಲ್ಲ. ನಮ್ಮ ಸುತ್ತಲೂ ಇರುವ ಏಷ್ಯಾ ರಾಷ್ಟ್ರಗಳಲ್ಲಿ ಶಿಕ್ಷಣ ಹಾಗೂ ವಿಜ್ಞಾನ ಕ್ಷೇತ್ರಕ್ಕೆ ಸಿಗುವ ಉತ್ತೇಜನ, ಬೆಂಬಲಕ್ಕಿಂತ ಭಾರತದಲ್ಲಿ ಅತಿ ಕಡಿಮೆ ಸಿಗುತ್ತಿದೆ.
ನಮ್ಮಲ್ಲಿ ಪರೀಕ್ಷೆಗೆ ಸಿಗುವ ಆದ್ಯತೆ ಶಿಕ್ಷಣಕ್ಕೆ ಸಿಗುತ್ತಿಲ್ಲ. ಕಳ್ಳೇ ಕಾಯಿ ಕೊಟ್ಟರೆ ಕೋತಿಗಳು ಬರು ತ್ತೇವೆ ಎಂಬ ಗಾದೆ ಮಾತು ಇದೆ. ಆದ್ದರಿಂದ ಸರ್ಕಾರ ಗಳು ಶಿಕ್ಷಣ, ವಿಜ್ಞಾನಕ್ಕೆ ಹೆಚ್ಚಿನ ಹಣವನ್ನು ಖರ್ಚು ಮಾಡಿ ಪ್ರತಿಭೆಗಳನ್ನು ತಯಾರಿಸಬೇಕೆಂದರು.
ಕರ್ನಾಟಕ ಪ್ರೋತ್ಸಾಹ: ಜೀವನದಲ್ಲಿ ಧೈರ್ಯ ಇರಬೇಕು, ಸಂಗೀತ, ಕಲೆ, ಸಾಹಿತ್ಯ, ಪತ್ರಿಕೋದ್ಯಮ ಏನೇ ಇರಲಿ ಸಣ್ಣ
ವಿಷಯದಲ್ಲಿಯೂ ಮುಂದೆ ಬರಬೇಕು, ಕಷ್ಟಪಟ್ಟು ಒಳ್ಳೆ ಕೆಲಸ ಮಾಡಬೇಕು, ಸಾಧನೆ ಎನ್ನುವುದು ತಪಸ್ಸು ಇದ್ದಂತೆ,
ಇಲ್ಲಿಯೆ ಸ್ವರ್ಗ, ನರಕ ಎರಡು ಇದೆ. ದೇಶದಲ್ಲಿರುವ ಕೋಟ್ಯಂತರ ಮಕ್ಕಳು ಮುಂದೆ ಬರಲು ಅವಕಾಶ ಮಾಡಿಕೊಟ್ಟರೆ ದೇಶದ ಭವಿಷ್ಯ ಉಜ್ವಲಗೊಳ್ಳುತ್ತದೆ. ದೇಶಕ್ಕೆ ಹೋಲಿಸಿದರೆ ಕರ್ನಾಟಕ ಸರ್ಕಾರವೇ ಹೆಚ್ಚು ವಿಜ್ಞಾನ, ತಂತ್ರಜ್ಞಾನಕ್ಕೆ ಪ್ರೋತ್ಸಾಹ ನೀಡುತ್ತಿವೆ ಎಂದರು.
ಸನ್ಮಾನ: ಜಿಲ್ಲಾಡಳಿತ ವಿದ್ಯಾರ್ಥಿಗಳೊಂದಿಗೆ ಹಮ್ಮಿ ಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಿ. ಎನ್.ಆರ್.ರಾವ್ರನ್ನು ಜಿಲ್ಲಾಡಳಿತದ ಪರವಾಗಿ ಸನ್ಮಾನಿಸಲಾಯಿತು. ಬೆಂಗಳೂರು ಸೂಸೈಡ್ ಬ್ಯಾಂಕ್ ದೇಶದಲ್ಲಿಯೇ ಬೆಂಗಳೂರು ಸೊಸೈಡ್ ಬ್ಯಾಂಕ್ ಆಗಿದೆ. ಇಲ್ಲಿನವರಿಗೆ ಹಣದ ಹುಚ್ಚು ಜಾಸ್ತಿ, ಸಂಶೋಧನೆ ಅಂದ್ರೆ ಹಿಂದೆ ಮುಂದೆ ನೋಡುತ್ತಾರೆ. ಹಣದ ಹಿಂದೆ ಬೀಳುವುದು ಜಾಸ್ತಿ, ಹಣ ಜಾಸ್ತಿಯಾದರೆ ಏನು ದಿಕ್ಕು ತೋಚದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಳ್ಳಿಯ ಜನರಲ್ಲಿರುವ ಪ್ರತಿಭೆ ಕಲಿಕೆಯ ಆಸಕ್ತಿ ನಗರ ಪ್ರದೇಶದ ಮಕ್ಕಳಗಿಲ್ಲ.
ಸರ್ಕಾರಗಳು ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕಲಿಸಬೇಕು. ಮಾತೃಭಾಷೆ ಶಿಕ್ಷಣ ಬಹಳ ಮುಖ್ಯ. ಆದ್ದರಿಂದ ಕನ್ನಡ ಕಲಿಯುವುದು ಅಗತ್ಯ. ಜೊತೆಗೆ ಇಂಗ್ಲಿಷ್ ಕೂಡ ಕಲಿಯಬೇಕು. ಕನ್ನಡ ಕಲಿತ ಮಕ್ಕಳಲ್ಲಿ ಸೃಜನಶೀಲತೆ ಹೆಚ್ಚಿರುತ್ತದೆ. ಎಂದು ಸಿಎನ್ಆರ್ ರಾವ್ ತಿಳಿಸಿದರು.
77 ಗೌರವ ಡಾಕ್ಟರೆಟ್ ಪದವಿ 26ನೇ ವಯಸ್ಸಿಗೆ ನಾನು ಇಂಡಿ ಯನ್ ಸೈನ್ಸ್ ಅಕಾಡೆಮಿ ಸದಸ್ಯ ನಾಗಿದ್ದೆ. ದೇಶ, ವಿದೇಶದಲ್ಲಿ ಕೆಲಸ ಮಾಡಲು ಸಾಕಷ್ಟು ಅವಕಾಶಗಳು ಇದ್ದವು. ಆದರೂ ತಾನು ಬೆಂಗಳೂರಿಗೆ ಬಂದು ಕೆಲಸ ಮಾಡಿದೆ. ತಮಗೆ 77 ಗೌರವ ಡಾಕ್ಟರೆಟ್ ಪದವಿಗಳು ಸಮ್ಮನೆ ಹುಡುಕಿಕೊಂಡು ಬರಲಿಲ್ಲ. ಯಾವುದೇ ಕ್ಷೇತ್ರವಾಗಲಿ ಕಠಿಣವಾಗಿ ಕಷ್ಟಪಟ್ಟು ಕೆಲಸ ಮಾಡಬೇಕು. ಆಗ ಅವಕಾಶ ಗಳು ಹುಡುಕಿಕೊಂಡು ಬರುತ್ತೇವೆ. ಸಂಶೋಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ. ಆಸಕ್ತಿ, ದೃಢತೆ, ಕಠಿಣ ಪರಿಶ್ರಮ ಬೇಕು. ಆದರೆ, ಬೆಂಗಳೂರಿನ ಹುಡುಗರಲ್ಲಿ ಅದು ಇಲ್ಲ. ಆಸ್ತಕ್ತಿ ಇರುವ ಹಳ್ಳಿ ಮಕ್ಕಳಿಗೆ ಉತ್ತೇಜನ ಸಿಗುತ್ತಿಲ್ಲ ಎಂದು ಸಿ.ಎನ್.ಆರ್.
ರಾವ್ ಬೇಸರ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
MUST WATCH
ಹೊಸ ಸೇರ್ಪಡೆ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Chitradurga; ನಾವು ಯಾರನ್ನೂ ಕಾಯಲ್ಲ, ನಾಮಿನೇಷನ್ ಪಕ್ಕಾ…: ಎಂ.ಚಂದ್ರಪ್ಪ
ಬಂಧನದಲ್ಲಿರುವ ಪತಿಯ ಬೆಂಬಲಕ್ಕಾಗಿ ವಾಟ್ಸ್ಆ್ಯಪ್ ಅಭಿಯಾನ ಆರಂಭಿಸಿದ ಕೇಜ್ರಿವಾಲ್ ಪತ್ನಿ