ಬರಸಿಡಿಲಿನ ಹೊಡೆತಕ್ಕೆ ತತ್ತರಿಸಿದ ಬಡಕುಟುಂಬ
Team Udayavani, Apr 28, 2021, 4:27 PM IST
ಚಿಂತಾಮಣಿ: ಸಿಡಿಲು ಬಡಿದು ಬೆಂಗಳೂರಿನವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದತಾಲೂಕಿನ ಸೂಮಯಾಜಲಹಳ್ಳಿಯ ಮತ್ತಿಬ್ಬರುಮಕ್ಕಳು ಮೃತಪಟ್ಟಿದ್ದು, ಇದರೊಂದಿಗೆ ತಂದೆ ಸೇರಿಮೂವರು ಮಕ್ಕಳು ದುರಂತ ಅಂತ್ಯಕಂಡಿದ್ದಾರೆ. ಈಘಟನೆ ಇಡೀ ಗ್ರಾಮವನ್ನು ಶೋಕ ಸಾಗರದಲ್ಲಿ ಮುಳುಗುವಂತೆ ಮಾಡಿದೆ.
ಒಂದೆಡೆ ಕೊರೊನಾ, ಮತ್ತೂಂದೆ ಈ ದುರುಂತಗ್ರಾಮದ ಜನರಿಗೆ ಶಾಕ್ ಮೇಲೆ ಶಾಕ್ ನೀಡಿದಂತೆಆಗಿದೆ. ಮೊದಲೇ ಬಡತನದ ಬೇಗೆಯಲ್ಲಿಬೆಯ್ಯುತ್ತಿದ್ದ ಇಡೀ ಕುಟುಂಬ ತಲ್ಲಣಗೊಂಡಿದೆ.ಮನೆಯ ಯಜಮಾನನ ಜೊತೆ ಕುಟುಂಬದವಂಶೋದ್ಧಾರಕ, ಇಬ್ಬರು ಹೆಣ್ಣು ಮಕ್ಕಳುಮೃತಪಟ್ಟಿರುವುದನ್ನು ನೋಡಿದರೆ ಪ್ರಕೃತಿಗೆಕರುಣೆಯೇ ಇಲ್ಲವೇ ಎಂದು ಶಪಿಸಬೇಕಿನಿಸುತ್ತದೆ.ತಾಲೂಕಿನ ಮುರುಗಮಲ್ಲ ಹೋಬಳಿಯಸೋಮಯಾಜಲಹಳ್ಳಿ ಗ್ರಾಮದಲ್ಲಿ ಏ.22ರಂದುಸುರಿದ ಮಳೆಯ ಜೊತೆಗೆ ಬಡಿದ ಸಿಡಿಲು ಅಂಬರೀಶ್ ಅವರ ಕಲ್ಲು ಚಪ್ಪಡಿ ಮನೆಯನ್ನು ಕೆಡವಿಹಾಕಿತ್ತು.
ಈ ವೇಳೆ ಅಂಬರೀಶ್ ಸೇರಿ ಈತನ ಪತ್ನಿಗಾಯತ್ರಮ್ಮ, ಮಕ್ಕಳಾದ ವಾಣಿಶ್ರೀ (7), ಲಾವಣ್ಯಾ(6), ದರ್ಶನ್ (12), ಗೌತಮ್ (4) ಹಾಗೂಜಗನ್ (70)(ಅಂಬರೀಶ್ ಅವರ ತಂದೆ) ಅವರಿಗೆಗಂಭೀರ ಸ್ವರೂಪದ ಸುಟ್ಟಗಾಯಗಳಾಗಿತ್ತು.ಈ ವೇಳೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆಗಾಯಗೊಂಡಿದ್ದ ಇಡೀ ಕುಟುಂಬವನ್ನೇ ಸೇರಿಸಲಾಗಿತ್ತು.
ಇದರಲ್ಲಿ ಚಿಕಿತ್ಸೆ ಫಲಕಾರಿಯಾಗದೇಭಾನುವಾರ ಬೆಳಗಿನ ಜಾವ ಪುಟ್ಟ ಬಾಲಕ ಗೌತಮ್ನಿಧನ ಹೊಂದಿದ್ದು, ಭಾನುವಾರ ಸಂಜೆ ಆತನ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಇದರ ಬೆನ್ನಲ್ಲೇ ಅದೇದಿನ ಸಂಜೆ ಮನೆಯ ಯಜಮಾನನಾಗಿದ್ದಅಂಬರೀಶ್ ಮೃತಪಟ್ಟಿದ್ದಾರೆ. ಸೋಮವಾರಅಂಬರೀಶ್ ಅವರ ಅಂತ್ಯ ಸಂಸ್ಕಾರ ನೆರವೇರಿಸಿದನಂತರ ಇವರ ದೊಡ್ಡಮಗಳು ವಾಣಿಶ್ರೀ, ಅದೇದಿನ ರಾತ್ರಿ 12 ಗಂಟೆಯಲ್ಲಿ ಚಿಕ್ಕಮಗಳು ಲಾವಣ್ಯಾಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸರಣಿಯಂತೆ ತಂದೆ ಮಕ್ಕಳು ಸಾವನ್ನಪಿರುವುದಕ್ಕೆಸೋಮಯಾಜಲಹಳ್ಳಿ ಗ್ರಾಮದ ಜನತೆ ಶೋಕದಮಡುವಿನಲ್ಲಿ ಮುಳುಗಿದೆ.ಇನ್ನೂ ಆಸ್ಪತ್ರೆಯಲ್ಲಿ ಅಂಬರೀಶ್ ಅವರ ಪತ್ನಿಗಾಯತ್ರಮ್ಮ, ಈಕೆಯ ಅಕ್ಕನ ಮಗ ದರ್ಶನ್,ಅಂಬರೀಶ್ ಅವರ ತಂದೆ ಜಗನ್ ಇನ್ನೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆರೋಗ್ಯದಲ್ಲಿ ಸ್ವಲ್ಪಚೇತರಿಕೆ ಕಂಡು ಬಂದಿದೆ ಎಂದು ತಿಳಿದು ಬಂದಿದೆ.
ಕುಟುಂಬಕ್ಕೆ ಪ್ರೋತ್ಸಾಹಧನ: ಅಂತ್ಯ ಸಂಸ್ಕಾರಕಾರ್ಯದಲ್ಲಿ ತಹಶೀಲ್ದಾರ್ ಹನುಮಂತರಾಯಪ್ಪಹಾಗೂ ಸಿಬ್ಬಂದಿ ಭಾಗವಹಿಸಿ ಸಂತಾಪ ಸೂಚಿಸಿ,ಶವಸಂಸ್ಕಾರಕ್ಕಾಗಿ 10 ಸಾವಿರ ರೂ., ತಾಪಂನಿಂದ25 ಸಾವಿರ ರೂ. ಅನ್ನು ಉಪಾಧ್ಯಕ್ಷನಾರಾಯಣಸ್ವಾಮಿ ವಿತರಣೆ ಮಾಡಿದರು. ಬೋವಿಮಹಾಸಭಾದ ಜಿಲ್ಲಾಧ್ಯಕ್ಷ ಎಂ.ಗುರ್ರಪ್ಪ ಕೂಡಮೃತರ ಕುಟುಂಬಕ್ಕೆ 10 ಸಾವಿರ ರೂ. ನೀಡಿದರು.ಕಳೆದ ಸೋಮವಾರದಂದು ಸೋಮಯಾಜನಹಳ್ಳಿಗೆ ಭೇಟಿ ನೀಡಿದ ಮಾಜಿ ಶಾಸಕ ಎಂ.ಸಿ.ಸುಧಾಕರ್ ಮೃತರ ಕುಟುಂಬಕ್ಕೆ ಧೈರ್ಯ ಹೇಳಿಸಂತಾಪ ಸೂಚಿಸಿದರು. ಈ ವೇಳೆ ಗ್ರಾಮದಜನರು ಮಾಸ್ಕ್ ಧರಿಸಿ ಅಂತ್ಯಸಂಸ್ಕಾರದಲ್ಲಿಪಾಲ್ಗೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
MUST WATCH
ಹೊಸ ಸೇರ್ಪಡೆ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ
ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ
Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ