ಬಂಜೆತನ ತಪಾಸಣೆ ಲ್ಯಾಬ್ ಆರಂಭ
Team Udayavani, May 25, 2019, 2:37 PM IST
ಚಿಂತಾಮಣಿ: ಬಂಜೆತನ ನಿವಾರಣೆಗೆ ತಪಾಸಣೆ ಮತ್ತು ಚಿಕಿತ್ಸೆಗೆ ಅಪೋಲೋ ವತಿಯಿಂದ ಚಿಂತಾಮಣಿ ನಗರದ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಬಂಜೆತನಕ್ಕೆ ಸಂಬಂಧಿಸಿದ ಎಲ್ಲಾ ತರಹದ ತಪಾಸಣೆ ಮತ್ತು ಚಿಕಿತ್ಸೆಯ ಲ್ಯಾಬ್ನ್ನು ಪ್ರಾರಂಭಿಸಲಾಗಿದೆ ಎಂದು ಲಕ್ಷ್ಮೀ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಿ.ಎನ್.ನರಸಿಂಹರೆಡ್ಡಿ ತಿಳಿಸಿದ್ದಾರೆ. ನಗರದ ಎನ್.ಆರ್.ಬಡಾವಣೆ ವರದಾ ಮಿಲ್ ರಸ್ತೆಯಲ್ಲಿರುವ ವಿಕ್ರಮ್ ಸ್ಕ್ಯಾನಿಂಗ್ ಸೆಂಟರ್ನಲ್ಲಿ ಬಂಜೆತನ ಸಂಬಂಧಿತ (ಐಯುಐ ಸೆಂಟರ್) ಲ್ಯಾಬ್ ಉದ್ಘಾಟಿಸಿ ಮಾತನಾಡಿ, ಚಿಂತಾಮಣಿ ಸೇರಿದಂತೆ ಸುತ್ತಮುತ್ತಲಿನ ತಾಲೂಕುಗಳ ಜನತೆಯು ಬಂಜೆತನಕ್ಕೆ ಸಂಬಂಧಿಸಿದಂತೆ ತಪಾಸಣೆ ಮತ್ತು ಚಿಕಿತ್ಸೆಗೆ ಬೆಂಗಳೂರಿಗೆ ತೆರಳಬೇಕಾಗಿತ್ತು. ಇದರ ಬೇಡಿಕೆಯ ಕುರಿತು ಅಪೋಲೋ ಸಂಸ್ಥೆಯೊಂದಿಗೆ ಮಾತನಾಡಿ ಚಿಂತಾಮಣಿ ನಗರದಲ್ಲಿ ಲ್ಯಾಬ್ ಆರಂಭಿಸಿದಲ್ಲಿ ಈ ಭಾಗದ ಜನತೆಗೆ ಉತ್ತಮ ಆರೋಗ್ಯ ಸೇವೆ ಮತ್ತು ಬಂಜೆತನದ ಸಮಸ್ಯೆಯ ನಿವಾರಣೆ ಮಾಡಬಹುದೆಂದು ಚಿಂತನೆ ನಡೆಸಿ ಇಲ್ಲಿ ಲ್ಯಾಬ್ ಆರಂಭಿಸುತ್ತಿರುವುದು ಈ ಭಾಗದ ಬಡ ಮತ್ತು ಮಧ್ಯಮ ವರ್ಗದ ಜನತೆಗೆ ಅನುಕೂಲವಾಗಲಿದೆ ಎಂದರು. ಡಾ. ವಿಕ್ರಮ್ ಮಾತನಾಡಿದರು. ಅಪೋಲೋ ಹೆಲ್ತ್ ಆ್ಯಂಡ್ ಲೈಫ್ಸ್ಟೈಲ್ ಲಿಮಿಟೆಡ್ನ ಗ್ರೂಪ್ ಸಿಇಒ ಚಂದ್ರಶೇಖರ್ ಸಿ, ಅಪೋಲೋ ಸಂಸ್ಥೆಯ ಸಿಒಒ ಅನುಭವ್ ಪ್ರಶಾಂತ್, ಡಾ. ಜಯಂತಿ, ಡಾ.ಎಂ.ವಿ.ಅಪರ್ಣಾರೆಡ್ಡಿ, ಡಾ.ಬಿ.ಎನ್.ಬೈರಾ ರೆಡ್ಡಿ, ಡಾ.ಕೈಸರ್ ಬೇಗಂ, ಡಾ.ಆರತಿ ರಾಮಾರಾವ್, ಡಾ.ವಿ.ಎಸ್.ಕಾತ್ಯಾಯಿನಿ, ಡಾ.ಯಲ್ಲಪ್ಪಗೌಡ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
Hot meal: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಬಿಸಿಯೂಟ