ಒಕ್ಕಲಿಗರ ಸಮಾವೇಶಕ್ಕೆ ತೆರಳಿದ ಮುಖಂಡರು
Team Udayavani, Mar 14, 2021, 1:44 PM IST
ಚಿಕ್ಕಬಳ್ಳಾಪುರ: ರಾಜ್ಯದಲ್ಲಿ ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆಗಳನ್ನು ಈಡೇರಿಸಬೇಕೆಂದು ಆಗ್ರಹಿಸಿ ನೆಲಮಂಗಲದ ಬಳಿ ನಡೆಯುತ್ತಿರುವಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂಟದ ಬೆಂಗಳೂರು ವಿಭಾಗೀಯ ಸಮಾವೇಶಕ್ಕೆಜಿಲ್ಲೆಯಿಂದ ಒಕ್ಕಲಿಗ ಸಮಾಜದವರು ಅಪಾರ ಸಂಖ್ಯೆಯಲ್ಲಿ ತೆರಳಿದರು.
ಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಾನ್ನಿಧ್ಯದಲ್ಲಿ ನಡೆಯುತ್ತಿರುವ ಸಮಾವೇಶ ದಲ್ಲಿ ಭಾಗವಹಿಸಲು ಎಲ್ಲಾ ತಾಲೂಕುಗಳಿಂದ ಒಕ್ಕಲಿಗ ಸಮಾಜದವರು ಹೆಚ್ಚಿನಸಂಖ್ಯೆಯಲ್ಲಿ ಭಾಗವಹಿಸಿದ್ದರು. ಆಯಾತಾಲೂಕುಗಳು ಒಕ್ಕಲಿಗರ ಸಂಘದಪದಾಧಿಕಾರಿಗಳು ಮತ್ತು ಒಕ್ಕಲಿಗ ಸಮಾಜದ ಮುಖಂಡರು ಬಸ್ ಮೂಲಕ ನೆಲಮಂಗಲಕ್ಕೆ ಪ್ರಯಾಣ ಬೆಳೆಸಿದರು.
ರೈತ ಸಂಘ ಹಾಗೂ ಹಸಿರುಸೇನೆ (ದಿ.ಪುಟ್ಟಣ್ಣಯ್ಯ ಬಣ) ಶಿಡ್ಲಘಟ್ಟತಾಲೂಕು ಅಧ್ಯಕ್ಷ ರವಿಪ್ರಕಾಶ್ ಮಾತ ನಾಡಿ, ರಾಜ್ಯದಲ್ಲಿ(ಉತ್ತರ ಕರ್ನಾಟದ ಸಹಿತ) ಒಕ್ಕಲಿಗರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಬೇಕು ಹಾಗೂ ಇನ್ನಿತರೆ ಬೇಡಿಕೆ ಗಳನ್ನು ಈಡೇರಿಸಬೇಕೆಂದು ಸ್ವಾಮೀಜಿ ಗಳ ಮುಖಂಡತ್ವದಲ್ಲಿ 6 ಜಿಲ್ಲೆಗಳಒಕ್ಕಲಿಗರ ಸಮಾವೇಶ ನಡೆಯುತ್ತಿದ್ದು, ಅದರಲ್ಲಿ ಶಿಡ್ಲಘಟ್ಟ ತಾಲೂಕು ಸೇರಿದಂತೆಜಿಲ್ಲಾದ್ಯಂತ ಹೆಚ್ಚಿನ ಸಂಖ್ಯೆಯಲ್ಲಿಸಮಾಜದ ಮುಖಂಡರು ಭಾಗವಹಿ ಸುತ್ತಿದ್ದಾರೆ ಎಂದರು.
ಅಖೀಲ ಕರ್ನಾಟಕ ಒಕ್ಕಲಿಗರ ಒಕ್ಕೂ ಟದ ಶಿಡ್ಲಘಟ್ಟ ತಾಲೂಕು ಅಧ್ಯಕ್ಷ ಮಳಮಾಚನಹಳ್ಳಿ ರವಿಕುಮಾರ್, ಕೋಟೆ ಚನ್ನೇಗೌಡ, ನಂಜೇಗೌಡ, ಶಂರ್ನಾರಾಯಣ, ನಾಗೇಶ್, ಮಂಜುನಾಥ್, ರಮೇಶ್, ಶ್ರೀನಿವಾಸ್, ರಾಮಚಂದ್ರರೆಡ್ಡಿ, ಗೋಪಾಲರೆಡ್ಡಿ, ನಾಗರಾಜ್, ಸುಬ್ರಹ್ಮಣಿ ಮತ್ತಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!