ಸೋಂಕಿತರಿಗೆ ಔಷಧಿ ಸಿಗಲಿ
Team Udayavani, May 16, 2021, 3:52 PM IST
ಚಿಕ್ಕಬಳ್ಳಾಪುರ: ರೆಮ್ಡೆಸಿವಿಯರ್ ಸೇರಿಸೋಂಕಿತರಿಗೆ ನೀಡುವ ಇತರೆ ಔಷ ಧಿಗಳನ್ನು ಕನಿಷ್ಠ20 ದಿನಗಳಿಗೆ ಆಗುವಷ್ಟು ಖರೀದಿಸಿ, ದಾಸ್ತಾನುಇಟ್ಟುಕೊಳ್ಳಬೇಕೆಂದು ಜಿಲ್ಲಾಧಿಕಾರಿ ಆರ್.ಲತಾ,ತಾಲೂಕು ಆರೋಗ್ಯ ಹಾಗೂ ಕೋವಿಡ್ ನೋಡಲ್ಅ ಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದಟಾಸ್ಕ್ ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿಮಾತನಾಡಿ, ಸೋಂಕಿತರಿಗೆ ನೀಡುವ ಅಗತ್ಯ ಔಷಧಿಗಳ ಖರೀದಿಗಾಗಿಯೇ ಪ್ರತಿ ತಾಲೂಕಿಗೆ ಹಣವನ್ನುಬಿಡುಗಡೆ ಮಾಡಲಾಗಿದೆ.
ತಾಲೂಕು ಆರೋಗ್ಯಾಧಿಕಾರಿಗಳು ಮುಂಚೆಯೇ ಖರೀದಿಸಿ ಹೋಂಐಸೋಲೇಷನ್ನಲ್ಲಿರುವ ಸೋಂಕಿತರಿಗೆ ಸಕಾಲಕ್ಕೆವಿತರಿಸುವ ವ್ಯವಸ್ಥೆ ಮಾಡುವಂತೆ ಸೂಚಿಸಿದರು.ವರದಿ ನೀಡಿ: ಆಯಾ ತಾಲೂಕು ನೋಡಲ್ಅ ಧಿಕಾರಿಗಳು ನಿತ್ಯ ತಮ್ಮ ತಾಲೂಕುಗಳಲ್ಲಿ ಆಕ್ಸಿಜನ್ಸಿಲಿಂಡರ್ಗಳ ಕೊರತೆ ಬಗ್ಗೆ ಗಮನ ಹರಿಸಬೇಕು.
ಆಯಾ ತಾಲೂಕು ನೋಡಲ್, ಆರೋಗ್ಯಅ ಧಿಕಾರಿಗಳು ಪ್ರತಿ ನಿತ್ಯವೂ ಟಾಸ್ಕ್ಫೋರ್ಸ್ ಸಮಿತಿಸದಸ್ಯರೊಂದಿಗೆ ಜೂಮ್ ಮೀಟಿಂಗ್ ಮಾಡಿ, ಈಬಗ್ಗೆ ವರದಿ ನೀಡಬೇಕು ಎಂದು ತಿಳಿಸಿದರು.
7 ದಿನ ಕ್ವಾರಂಟೈನ್ನಲ್ಲಿ ಇರಲಿ: ಬೆಂಗಳೂರು,ಇತರೆ ಜಿಲ್ಲೆಗಳಿಂದ ಬಂದಿರುವವರಿಗೆ ಕಡ್ಡಾಯವಾಗಿಕೋವಿಡ್ ಪರೀಕ್ಷೆ ಮಾಡಿಸಬೇಕು. ನೆಗೆಟಿವ್ಬಂದರೂ ಅವರನ್ನು ಕಡ್ಡಾಯವಾಗಿ ಕನಿಷ್ಠ 7ದಿನವಾದರೂ ಹೋಂಕ್ವಾರಂಟೈನ್ನಲ್ಲಿ ಇರುವಂತೆನೋಡಿಕೊಳ್ಳಬೇಕು. ಕೋವಿಡ್ ಕೇರ್ ಕೇಂದ್ರಗಳಲ್ಲಿಯಾವುದೇ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕುಎಂದು ಹೇಳಿದರು.
ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿ: ಹೋಬಳಿ ಗೊಂದುಆ್ಯಂಬುಲೆನ್ಸ್ ವ್ಯವಸ್ಥೆ ಮಾಡಿಕೊಳ್ಳಬೇಕು. ಯಾವತಾಲೂಕುಗಳಿಗೆ ಎಷ್ಟು ವಾಹನ ಅವಶ್ಯಕತೆ ಇದೆಎಂಬುದನ್ನು ತಿಳಿಸಿ ಎಂದು ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣ ಅ ಧಿಕಾರಿಗಳಿಗೆ ಸೂಚಿಸಿದರು.ಜಿಪಂ ಸಿಇಒ ಪಿ.ಶಿವಶಂಕರ್, ಎಸ್ಪಿ ಜಿ.ಕೆ.ಮಿಥುನ್ಕುಮಾರ್, ಎಸಿ ಎ.ಎನ್.ರಘುನಂದನ್, ಜಿಲ್ಲಾಆರೋಗ್ಯ ಮತ್ತು ಕುಟುಂಬ ಕಲ್ಯಾಣಾ ಧಿಕಾರಿಡಾ.ಇಂದಿರಾ ಆರ್.ಕಬಾಡೆ, ಡಾ.ಯಲ್ಲಾ ರಮೇಶ್ಬಾಬು, ಆರೋಗ್ಯ ಅಧಿ ಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
MUST WATCH
ಹೊಸ ಸೇರ್ಪಡೆ
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್
Theft ಶಿರೂರು: ಜ್ಯುವೆಲ್ಲರಿ ಅಂಗಡಿ ಶಟರ್ ಮುರಿದು ಕಳ್ಳತನ
90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೇವಾಲಾ
ನಮ್ಮ ಆರಾಧನ ಪದ್ಧತಿ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ: ರಾಕೇಶ್ ಶೆಟ್ಟಿ ಬೆಳ್ಳಾರೆ
ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ