ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತ: ಪ್ರತಿಭಟನೆ
Team Udayavani, Feb 19, 2020, 3:00 AM IST
ಗೌರಿಬಿದನೂರು: ಫೆ.5ನೇ ತಾರೀಖೀನಿಂದ ಗೌರಿಬಿದನೂರು ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿದ್ದು, ಹೊಸತಂತ್ರಾಶ ಅಳವಡಿಸದೇ ಉಪನೋಂದಣಾಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸಾರ್ವಜನಿಕರು ಹಾಗೂ ಪತ್ರಬರಹಗಾರರು ಉಪನೋಂದಣಾಧಿಕಾರಿಗಳ ಕಚೇರಿಗೆ ಬೀಗಜಡಿದು ಪ್ರತಿಭಟನೆ ನಡೆಸಿದರು.
ನೋಂದಣಿಗಾಗಿ ಹೊಸ ಪದ್ಧತಿ ಜಾರಿಯಾಗಿದ್ದು, ಸೇವಾ ತಂತ್ರಾಂಶ 6.8 ತಂತ್ರಾಂಶ ಅಳವಡಿಸಿರುವುದರಿಂದ 5ನೇ ತಾರೀಖೀನಿಂದಲೂ ದಸ್ತಾವೇಜುಗಳು ನೋಂದಣಿಯಾಗದೇ ಸಾರ್ವಜನಿಕರು ಹಾಗೂ ಪತ್ರಬರಹಗಾರರಿಗೆ ತೀವ್ರ ತೊಂದರೆಯಾಗಿದೆ ಎಂದು ದೂರಿದರು.
ಹೊಂದಿಕೆಯಾಗದ ಹೊಸ ತಂತ್ರಾಂಶ: ಉಪನೋಂದಣಾಧಿಕಾರಿಗಳು ಕಳೆದ 15ದಿನಗಳಿಂದ ಯಾವುದೇ ಕ್ರಮಕೈಗೊಳ್ಳದೇ ಹಾಗೂ ಬದಲಿ ವ್ಯವಸ್ಥೆ ಮಾಡದೇ ವಿಳಂಬ ನೀತಿ ತೋರುತ್ತಿದ್ದಾರೆ ಎಂದು ಸಾರ್ವಜನಿಕರು ಹಾಗೂ ಪತ್ರಬರಹಗಾರರು ಉಪನೋಂದಣಾಧಿಕಾರಿ ಕಚೇರಿ ಮುಂದೆ ಪ್ರತಿಭಟಿಸಿ ಈ ಹಿಂದೆ ಕಚೇರಿಯಲ್ಲಿ ನೋಂದಣಿಗಾಗಿ ಹಳೆ ತಂತ್ರಾಶ ಅಳವಡಿಸಿದ್ದು, ಈಗಿನ ಹೊಸ ತಂತ್ರಾಂಶ (6.8) ಹೊಂದಿಕೆಯಾಗುತ್ತಿಲ್ಲ.
ಇದನ್ನು ಮನಗಂಡು ಕೂಡಲೇ ಸರಿಪಡಿಸಬೇಕಾದ ಜವಾಬ್ದಾರಿಯಿದ್ದರೂ ಉಪ ನೋಂದಣಾಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಕನ್ನಡ ಪರ ಹೋರಾಟಗಾರ ಹಾಗೂ ಪತ್ರಬರಹಗಾರ ಕಾದಲವೇಣಿ ಮೋಹನ್ ಆರೋಪಿಸಿದರು.
ನೋಂದಣಿಗೆ ಹೊಸ ನಿಬಂಧನೆಗಳು: ಎಲ್ಲಾ ತರಹದ ದಸ್ತಾವೇಜುಗಳಿಗೆ ಮೊಬೈಲ್ ನಂಬರ್ಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು, ಯಾವುದೇ ನೋಂದಣಿ ಪತ್ರದಲ್ಲಿ ಕ್ರಯದಾರರು ಹಾಗೂ ಮಾರಾಟಗಾರರ ದಸ್ತಾವೇಜಿನಲ್ಲಿ ಸಹಿ ಮಾಡಿರುವ ಸಾಕಿದಾರರ ಸಮೇತ ಎಲ್ಲರ ಅಧಾರ್ ಕಾರ್ಡ್ ಹಾಗೂ ಮೊಬೈಲ್ ನಂಬರ್ ಕಡ್ಡಾಯವಾಗಿ ಸಲ್ಲಿಸಬೇಕು ಹಾಗೂ ಎಲ್ಲರೂ ಖುದ್ದು ಹಾಜರಿರಬೇಕು.
ನೋಂದಣಿ ಪ್ರಾರಂಭಿಸಿಲ್ಲ: ನೋಂದಣಿ ದಸ್ತಾವೇಜು, ಭೂಮಿ (ಜೆ ಸ್ಲಿಪ್ ಚೀಟಿ) ಎಕ್ಸ್ ಎಂಎಲ್ ಅಪ್ಲೋಡ್ ಮಾಹಿತಿ, ಇ-ಸ್ವತ್ತು , ಯುಪಿಒಆರ್ ಎಕ್ಸ್ಎಂಎಲ್ ಮಾಹಿತಿಯನ್ನು ಸಂಬಂಧಪಟ್ಟ ಕಕ್ಷಿದಾರರಿಗೆ ಎಸ್ಎಂಎಸ್ ಮೂಲಕ ಮಾಹಿತಿ ಕಳುಹಿಸಲಾಗುವುದು ಎಂದು ಮಾಹಿತಿ ನೀಡಲಾಗಿದ್ದು,
ನೋಂದಣಿ ಸಮಯದಲ್ಲಿ ಎಲ್ಲಾ ತರಹದ ದಸ್ತಾವೇಜುಗಳಿಗೆ ಸಲ್ಲಿಸಲಾಗುವ ಇತರೆ ದಾಖಲಾತಿಗಳ ಜೊತೆಗೆ ಅಧಾರ್ ಕಾರ್ಡ್ ಮತ್ತು ಮೊಬೈಲ್ ನಂಬರ್ ಕಡ್ಡಾಯವಾಗಿ ಹಾಜರುಪಡಿಸಬೇಕು ಹಾಗೂ ಪಹಣಿ 15 ದಿನಗಳ ಒಳಗೆ ಪಡೆದ ‘ಮೂಲ ಹಾಗೂ ಜೆರಾಕ್ಸ್ ಪ್ರತಿ ಸಲ್ಲಿಸಬೇಕೆಂದು ನಿಬಂಧನೆ ಹಾಕಿದ್ದು, ಸಾರ್ವಜನಿಕರು ಒಪ್ಪಿದ್ದರೂ ಈವರೆಗೂ ನೋಂದಣಿ ಪ್ರಾರಂಭಿಸಿಲ್ಲ ಎಂದು ಆರೋಪಿಸಿದ್ದಾರೆ.
ನೋಂದಣಿಯಾಗದಿರುವುದರಿಂದ ಮದುವೆಗಾಗಿ ಹಾಗೂ ಸಾಲ ತೀರಿಸಲು ಆಸ್ತಿಗಳನ್ನು ಮಾರಾಟ ಮಾಡಿಕೊಳ್ಳಬೇಕು, ಬ್ಯಾಂಕ್ ಸಾಲಕ್ಕಾಗಿ ಇ.ಸಿ. ಪ್ರತಿ ಪಡೆಯಬೇಕೆಂದು 15 ದಿನದಿಂದ ಕಾಯುತ್ತಿರುವ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗಿದ್ದು, ಪ್ರತಿನಿತ್ಯ ಇದನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ಪತ್ರಬರಹಗಾರರಿಗೆ ಆರ್ಥಿಕ ಸಮಸ್ಯೆ ತಲೆದೋರಿದೆ.
ಇವುಗಳನ್ನು ಅರಿತುಕೊಳ್ಳದ ನೋಂದಣಾಧಿಕಾರಿಗಳು ನಿರ್ಲಕ್ಷ್ಯ ತಾಳಿದ್ದು, ತಾಲೂಕು ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಂಡು ಈ ಸಮಸ್ಯೆಯನ್ನು ಪರಿಹರಿಸಬೇಕೆಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸುಧೀಂದ್ರರಾವ್, ಅಶ್ವತ್ಥನಾರಾಯಣ, ಪ್ರಕಾಶ್, ಲಕ್ಷ್ಮೀಶ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
ಉಪನೋಂದಣಾಧಿಕಾರಿಗಳ ಕಚೇರಿಯಲ್ಲಿ ಹೊಸದಾಗಿ ಅಳವಡಿಸಿರುವ ಸಾಫ್ಟ್ವೇರ್ ಹೊಂದಾಣಿಕೆಯಾಗುತ್ತಿಲ್ಲ. ಈ ಸಂಬಂಧ ಮೇಲಾಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇನೆ.
-ಸಬ್ರಿಜಿಸ್ಟರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಡೀಸೆಲ್ ಇಲ್ಲದೆ ನಿಂತ ವಾಹನ… ಕಸವನ್ನು ಹೆಗಲ ಮೇಲೆ ಹೊತ್ತು ವಿಲೇವಾರಿ ಮಾಡಿದ ಪೌರಕಾರ್ಮಿಕ
Raksha Ramaiah: ಯಾರಿಗೆ ಟಿಕೆಟ್ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ
Lok Sabha Polls; ಮೊಯ್ಲಿ ಕೊನೇ ಚುನಾವಣೆ ಅಸ್ತ್ರದಿಂದ ಚಿಕ್ಕಬಳ್ಳಾಪುರ ಟಿಕೆಟ್ ಕಗ್ಗಂಟು
Gruha Jyothi scheme: ಗೃಹಜ್ಯೋತಿ ಗ್ರಾಹಕರ ಜೇಬಿಗೆ ಕತ್ತರಿ!
Chikaballapura: ಲೋಕ ಸಮರ ಹೊತ್ತಲ್ಲೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪೈಪೋಟಿ
MUST WATCH
ಹೊಸ ಸೇರ್ಪಡೆ
ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು