ಪ್ರಧಾನಿ ಮೋದಿಯಿಂದ ಜನಪರ ಯೋಜನೆ
Team Udayavani, Feb 18, 2019, 7:27 AM IST
ಚಿಕ್ಕಬಳ್ಳಾಪುರ: ದೇಶದ ಪ್ರಗತಿಗಾಗಿ ಹಾಗೂ ಜನರ ನೆಮ್ಮದಿಗಾಗಿ ಅವಿರತವಾಗಿ ಶ್ರಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯಿಂದಾಗಿ ಭಾರತ ಸ್ವಾಭಿಮಾನದಿಂದ ಬೀಗುತ್ತಿದೆ. ಉಗ್ರರ ಎಡೆಮುರಿ ಕಟ್ಟಲು ಸೈನ್ಯಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ನಿಜವಾದ ದೇಶಭಕ್ತ ಮೋದಿ ಆಗಿದ್ದಾರೆ. ಸಾರ್ವಜನಿಕರ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜಾರಿ ಮಾಡಿದ್ದಾರೆ ಎಂದು ಟೀಮ್ ಮೋದಿ ಸಂಸ್ಥೆಯ ಸಂಚಾಲಕ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ನಗರದ ಭಾರತಿ ವಿದ್ಯಾಸಂಸ್ಥೆ ಆವರಣದಲ್ಲಿ ಭಾನುವಾರ ದೇಶಕ್ಕಾಗಿ ಮೋದಿ ಮೋದಿಗಾಗಿ ನಾವು ಎಂಬ ಘೋಷಣೆಯಡಿ ಟೀಮ್ ಮೋದಿ ಚಿಕ್ಕಬಳ್ಳಾಪುರ ಘಟಕದ ವತಿಯಿಂದ ಮತ್ತೂಮ್ಮೆ ಮೋದಿ ದೇಶದ ಪ್ರಧಾನಿಯಾಗಲೆಂದು ಆಶಿಸಿ ಆಯೋಜಿಸಲಾಗಿದ್ದ ಮಹಾ ಸುದರ್ಶನ ಹೋಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಭಾರತ ಇಂದು ಎಲ್ಲಾ ರಂಗಗಳಲ್ಲೂ ಸ್ವಾವಲಂಬಬಿ ದೇಶವಾಗಿ ಜಾಗತಿಕವಾಗಿ ಬೆಳೆಯುತ್ತಿದೆ ಎಂದರೆ ಅದಕ್ಕೆ ಪ್ರಧಾನಿ ಮೋದಿ ಆಡಳಿತ ಕಾರಣವಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ದೇಶವನ್ನು ಗರೀಬಿ ಹಠಾವೋ ಎಂದು ಹೇಳಿಕೆಗೆ ಸೀಮಿತಗೊಳಿಸಿ ಬಡವರನ್ನು ಮತ್ತಷ್ಟು ಬಡವರಾಗಿಸಿ ತಾವು ಮಾತ್ರ ಶ್ರೀಮಂತರಾಗಿದ್ದು ಇತಿಹಾಸ.
ಆದರೆ ಮೋದಿ ಸರ್ಕಾರ ದೇಶವನ್ನು ಶೌಚಾಲಯ ನಿರ್ಮಿಸಿಕೊಳ್ಳಲು ಅನುಕೂಲ, ಅರ್ಹ ಬಡವರಿಗೆ ಸೂರು ವಿದ್ಯುತ್, ಗ್ಯಾಸ್ ನೀಡಿ ಸಶಕ್ತರನ್ನಾಗಿಸಿದ್ದಾರೆ. ಮೋದಿ ಆಡಳಿತದಲ್ಲಿ ದೇಶದ ಸಾಮರ್ಥ್ಯವನ್ನು ವಿಶ್ವಮಟ್ಟದಲ್ಲಿ ಬೆಳಗಿಸಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಯುವ ಬ್ರಿಗೇಡ್ ರಾಜ್ಯ ಸಂಚಾಲಕ ಕುಕ್ಕೆ ಚಂದ್ರಶೇಖರ್, ಬಿಜೆಪಿ ತಾಲೂಕು ಅಧ್ಯಕ್ಷ ಅಗಲಗುರ್ಕಿ ಚಂದ್ರಶೇಖರ್, ಜಂಗಮ ಜೋಳಿಗೆ ಸಿದ್ದಲಿಂಗ ಸ್ವಾಮೀಜಿ, ಯುವ ಬ್ರಿಗೇಡ್ ಹಾಗೂ ಟೀಮ್ ಮೋದಿ ಸಂಘಟನೆಯ ಅಭಿಲಾಷ್, ಸುನೀಲ್, ಕಾರ್ತಿಕ್,ಪ್ರಜ್ವಲ್ ಇದ್ದರು.
ಪೋಟೋ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election; ಕಾಂಗ್ರೆಸ್ ಗೆದ್ದರೆ ಸಿದ್ದರಾಮಯ್ಯ ಸ್ಥಾನ ಭದ್ರ
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ