ಪಾಪಾಗ್ನಿ ನದಿಗೆ ಅಡ್ಡಲಾಗಿ ರಸ್ತೆ ನಿರ್ಮಾಣ
Team Udayavani, Dec 20, 2021, 12:00 PM IST
ಚೇಳೂರು: ಇತ್ತೀಚಿಗೆ ಸುರಿದ ಮಳೆಯಿಂದ ಪಾಪಾಗ್ನಿ ನದಿ ತುಂಬಿ ಹರಿದು ಆಂಧ್ರ, ಕರ್ನಾಟಕ ಗಡಿಗ್ರಾಮಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಗಣೇಶನ ಗುಡಿ ರಸ್ತೆಕೊಚ್ಚಿಕೊಂಡು ಹೋಗಿ ಉಭಯ ರಾಜ್ಯಗಳ ಜನರಿಗೆ ತುಂಬ ತೊಂದರೆ ಆಗಿತ್ತು.
ಎರಡು ತಿಂಗಳಿಂದ ನದಿಯಲ್ಲಿ ನೀರು ಹರಿಯುತ್ತಲೇಇದ್ದು, ರಸ್ತೆ ಸಂಪರ್ಕ ಇಲ್ಲದೆ ಆಂಧ್ರದ ತಿರುಪತಿ, ಮದನಪಲ್ಲಿ, ಬಿ.ಕೊತ್ತಕೋಟೆಗೆ ಜನ ಹೋಗಿ ಬರಲುಆಗುತ್ತಿರಲಿಲ್ಲ. ಇದನ್ನು ಗಮನಿಸಿದ ಸ್ಥಳೀಯ ಕಾಂಗ್ರೆಸ್ ನಾಯಕರು, ಬಾಗೇಪಲ್ಲಿ ಶಾಸಕ ಎಸ್.ಎನ್.ಸುಬ್ಟಾರೆಡ್ಡಿಅವರಿಗೆ ತಿಳಿಸಿದ್ದಾರೆ.
ಚೇಳೂರು ಗಣೇಶನ ದೇವಾಲಯದಿಂದ ಕಾಲುಕಿ.ಮೀ. ಇರುವ ಪಾಪಾಗ್ನಿ ನದಿಗೆ 20 ದಿನದಿಂದ ನದಿಗೆಅಡ್ಡಲಾಗಿ, ಲಂಕೆಗೆ ಹೋಗಲು ವಾನರ ಸೈನ್ಯ ರಸ್ತೆನಿರ್ಮಿಸಿದಂತೆ ಗ್ರಾಮಸ್ಥರು ಪೈಪ್ಗ್ಳನ್ನು ಹಾಕಿ, ಭಾರೀಗಾತ್ರದ ಕಲ್ಲು, ಮಣ್ಣನ್ನು ಹಾಕಿ ರಸ್ತೆ ನಿರ್ಮಿಸುತ್ತಿದ್ದಾರೆ.ಇದಕ್ಕೆ ಶಾಸಕ ಸುಬ್ಟಾರೆಡ್ಡಿ ಹಣವನ್ನು ಒದಗಿಸಿದ್ದು, ಚೇಳೂರು ಹಿರಿಯ ಮುಖಂಡ ಕೆ.ಜಿ.ವೆಂಕಟರವಣ,ಯುವ ಕಾಂಗ್ರೆಸ್ ಮುಖಂಡರಾದ ಸುರೇಂದ್ರ, ಜೆ.ಎನ್.ಜಾಲಪ್ಪ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
2 ತಿಂಗಳಿಂದ ನಾವು ಚೇಳೂರಿಗೆ ಬರಲು 45 ಕಿ.ಮೀ.ಸುತ್ತು ಹಾಕಬೇಕಿತ್ತು. ಪಾಪಾಗ್ನಿ ನದಿಗೆ ಅಡ್ಡಲಾಗಿನಿರ್ಮಿಸಿರುವ ರಸ್ತೆ ಸರಿಪಡಿಸಿದ್ದರಿಂದ ಕೇವಲ 3 ಕಿ.ಮೀ.ಆಗುತ್ತದೆ. ವ್ಯಾಪಾರ ವಹಿವಾಟಿಗೂ ತುಂಬಾತೊಂದರೆಯಾಗಿತ್ತು. ಈ ರಸ್ತೆ ಸಂಚಾರದಿಂದ ರಾಜ್ಯದಗಡಿ ಪ್ರದೇಶವಾದ ಚೇಳೂರಿಗೆ ಬರಲು ಬಹಳಅನುಕೂಲವಾಗಿದೆ ಎಂದು ಆಂಧ್ರ ಪ್ರದೇಶದ ನವಾಬುಕೋಟೆಯ ನರೇಶ್, ವೆಂಕಟರವಣ, ರವಿ ಮತ್ತಿತರರು ಬಾಗೇಪಲ್ಲಿ ಶಾಸಕರ ಕಾರ್ಯವನ್ನು ಶ್ಲಾಘಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!
Lok Sabha Election: ಚುನಾವಣಾ ಪ್ರಚಾರದ ಅಬ್ಬರ; ಕೂಲಿ ಕಾರ್ಮಿಕರಿಗೆ ಬರ!
MUST WATCH
ಹೊಸ ಸೇರ್ಪಡೆ
MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್
UCC; ದೇಶವು ಶರಿಯಾ ಕಾನೂನಿನಲ್ಲಿ ನಡೆಯಬೇಕೆ?: ಯುಸಿಸಿ ಜಾರಿ ಬಗ್ಗೆ ಅಮಿತ್ ಶಾ ಖಡಕ್ ಮಾತು
Rain: ಉಡುಪಿ ಜಿಲ್ಲೆಗೆ ತಂಪೆರೆದ ಮಳೆರಾಯ, ಜಿಲ್ಲಾದ್ಯಂತ ಗುಡುಗು ಸಹಿತ ಧಾರಾಕಾರ ಮಳೆ
Daily Horoscope: ಉದ್ಯೋಗ ಸ್ಥಾನದಲ್ಲಿ ನೆಮ್ಮದಿಯ ವಾತಾವರಣ, ಅಕಸ್ಮಾತ್ ಧನಪ್ರಾಪ್ತಿ
Heavy Rain; ದುಬಾೖ ಪ್ರಯಾಣ ಬೇಡ: ಸಲಹೆ