ಶಿಡ್ಲಘಟ್ಟ: ಸೋಂಕಿತರ ಸಂಖ್ಯೆ 4ಕ್ಕೇರಿಕೆ
Team Udayavani, Jun 21, 2020, 6:38 AM IST
ಶಿಡ್ಲಘಟ್ಟ: ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಕೋವಿಡ್ 19 ಸೋಂಕು ಮುಕ್ತವೆಂದು ಖ್ಯಾತಿ ಹೊಂದಿದ ರೇಷ್ಮೆನಗರಿ ಶಿಡ್ಲಘಟ್ಟದಲ್ಲಿ ಕೋವಿಡ್ 19 ಪ್ರವೇಶ ಮಾಡಿದ್ದು, ಇದು ವರೆಗೆ ತಾಲೂಕಿನಾದ್ಯಂತ ಸೋಂಕಿತರ ಸಂಖ್ಯೆ 4ಕ್ಕೆ ಏರಿದೆ.
ಗ್ರಾಮದಲ್ಲಿ ಮೂವರಿಗೆ ಸೋಂಕು: ಜಂಗಮಕೋಟೆಯ ಯುವಕನಲ್ಲಿ ಸೋಂಕು ಪತ್ತೆಯಾಗಿದ್ದು, ಆತನ ಸಂಪರ್ಕದಲ್ಲಿದ್ದ ಮತ್ತಿಬ್ಬರಿಗೆ ಸೋಂಕು ದೃಢವಾಗಿ ದ್ದು, ಗ್ರಾಮದಲ್ಲಿ ಸೋಂಕಿತರ ಸಂಖ್ಯೆ 3ಕ್ಕೆ ಏರಿದೆ. ಕ್ಯಾನ್ಸರ್ ಪೀಡಿತ ಮಹಿಳೆಗೆ ಸೋಂಕು: ಮತ್ತೂಂದೆಡೆ ಮಹಿಳೆಯೊಬ್ಬರಿಗೆ ಸೋಂಕು ತಗುಲಿದೆ.
ನಗರದ ಹಳೇ ಅಂಚೆ ಕಚೇರಿ ರಸ್ತೆಯೊಂದರ ಬೀದಿಯಲ್ಲಿ ಕ್ಯಾನ್ಸರ್ ಪೀಡಿತ ಮಹಿಳೆಗೆ ಸೋಂಕು ತಗುಲಿದ್ದು, ಗಂಭೀರವಾಗಿ ಪರಿಗಣಿಸಿದ ನಗರಸಭೆಯ ಪೌರಾಯುಕ್ತ ತ್ಯಾಗರಾಜ್ ಮತ್ತು ಆರೋಗ್ಯ ನಿರೀಕ್ಷಕಿ ಶೋಭಾ, ಸಿಬ್ಬಂದಿ ಮುನ್ನೆಚ್ಚರಿಕೆ ಕ್ರಮವಾಗಿ ಹಳೇ ಅಂಚೆ ಕಚೇರಿ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಿ ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಲಾಗಿದೆ.
ಸಂಪರ್ಕಿತರಿಗೆ ಸೋಂಕು ದೃಢ: ತಾಲೂಕಿನ ಜಂಗಮಕೋಟೆ ಗ್ರಾಮದಲ್ಲಿ ಕೋವಿಡ್ 19 ಸೋಂಕು ಕಂಡು ಬಂದ ಬಳಿಕ ಸಂಪರ್ಕಿತರಲ್ಲಿ ಸೋಂಕು ಪತ್ತೆಯಾಗುತ್ತಿದೆ. ಇಂದು ಸಹ ಒಬ್ಬ ಯುವಕನಿಗೆ ಸೋಂಕು ಪತ್ತೆಯಾಗಿದ್ದು, ತಹಶೀಲ್ದಾರ್ ಕೆ.ಅರುಂಧತಿ, ತಾಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶಮೂರ್ತಿ, ಪಿಡಿಒ ವಜ್ರೆàಶ್ ಮತ್ತಿತರರು ಕಂಟೈನ್ಮೆಂಟ್ ಪ್ರದೇಶದಲ್ಲಿ ಆಹಾರ ಸಾಮಗ್ರಿ ವಿತರಿಸಲು ಕ್ರಮ ಕೈಗೊಂಡಿದ್ದಾರೆ.
ಜೊತೆಗೆ ಜಿಲ್ಲಾಧಿಕಾರಿ ಆರ್.ಲತಾ ಅವರ ಆದೇಶದ ಮೇರೆಗೆ ಕಂಟೈನ್ಮೆಂಟ್ ಝೊàನ್ನಲ್ಲಿ ದಿನಬಳಕೆ ವಸ್ತುಗಳ ಪೂರೈಕೆ ಮಾಡಲು ವಾಟ್ಸ್ಆ್ಯಪ್ ಗುಂಪು ರಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Code of conduct: ಚುನಾವಣಾ ನೀತಿ ಸಂಹಿತೆ: ರಾಜಕೀಯ ಫ್ಲೆಕ್ಸ್, ಬ್ಯಾನರ್ ತೆರವು!
H. D. Deve Gowda, ಕುಮಾರಸ್ವಾಮಿ ಬಿಜೆಪಿ ವಕ್ತಾರರು: ಸಿಎಂ ಸಿದ್ದರಾಮಯ್ಯ
LokSabha Election: ಕ್ಲೈಮ್ಯಾಕ್ಸ್ ತಲುಪಿದ ಕೈ, ಕಮಲ ಅಭ್ಯರ್ಥಿಗಳ ಆಯ್ಕೆ!
Lok Sabha Elections; ವರಿಷ್ಠರು ಅವಕಾಶ ನೀಡಿದರೆ ಸ್ಪರ್ಧೆ: ಸುಧಾಕರ್
Chikkaballapur: ಕಾರಿನಲ್ಲಿ ಇರಿಸಿದ್ದ 3 ಲಕ್ಷ ರೂ. ಮದುವೆ ಮುಯ್ಯಿ ಕಳ್ಳರ ಪಾಲು!