ಸೀಮೆಹಸುಗಳಿಗೆ ಲಸಿಕೆ ಹಾಕಿಸಿ
ಆರು ತಿಂಗಳಿಗೊಮ್ಮೆ ಕಡ್ಡಾಯ ಲಸಿಕೆ ಹಾಕಿಸಿದರೆ ಸಾವು ತಪ್ಪಿಸಬಹುದು
Team Udayavani, May 11, 2020, 4:54 PM IST
ಸಾಂದರ್ಭಿಕ ಚಿತ್ರ
ಬಾಗೇಪಲ್ಲಿ: ಸೀಮೆಹಸುಗಳಿಗೆ ಪ್ರತಿ ಆರು ತಿಂಗಳಿಗೊಮ್ಮೆ ಲಸಿಕೆ ಹಾಕಿಸುವುದರಿಂದ ಸಾವು ತಪ್ಪಿಸಬಹುದು ಎಂದು ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ ತಿಳಿಸಿದರು. ಪಟ್ಟಣದ ಕೋಚಿಮುಲ್ ಕಚೇರಿಯಲ್ಲಿ 63 ಫಲಾನುಭವಿಗಳಿಗೆ ಗುಂಪುರಾಸುಗಳ ವಿಮಾ ಯೋಜನೆ ಯಡಿಯಲ್ಲಿ ತಲಾ 60 ಸಾವಿರ ರೂ. ಚೆಕ್ ವಿತರಿಸಿ ಮಾತನಾಡಿದ ಅವರು, ರೈತರು ಲಕ್ಷಾಂತರ ರೂ. ವೆಚ್ಚ ಮಾಡಿ ಸೀಮೆಹಸುಗಳನ್ನು ಖರೀದಿ ಮಾಡಿ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜು ಮಾಡಿ ಕುಟುಂಬ ಪೋಷಣೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ.
ಆದರೆ ಕಾಲುಬಾಯಿ ಜ್ವರ ಹಾಗೂ ಇನ್ನಿತರ ಕಾರಣ ಗಳಿಂದ ಸೀಮೆಹಸುಗಳು ಮೃತಪಟ್ಟರೆ ರೈತರು ಬೀದಿಗೆ ಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕೆಲವು ರೈತರು ಲಸಿಕೆ ಹಾಕಿಸಿದರೆ ಹಾಲು ನೀಡುವುದಿಲ್ಲ ಎಂಬ ಭಯದಿಂದ ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಹಾಕಿದ ಪ್ರಾರಂಭದಲ್ಲಿ ಸೀಮೆಹಸುಗಳು ಹಾಲು ಸ್ವಲ್ಪ ಕಡಿಮೆ ನೀಡುಬಹುದು. ನಂತರ ಎಂದಿನಂತೆ ಹಾಲು ನೀಡಲು ಪ್ರಾರಂಭಿಸುತ್ತದೆ. ಆತಂಕಕ್ಕೆ ಒಳಗಾಗದೇ ಲಸಿಕೆ ಹಾಕಿಸಿ ಸೀಮೆಹಸುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗುಂಪುರಾಸು ವಿಮಾ ಯೋಜನೆ ಯಡಿಯಲ್ಲಿ 64 ಫಲಾನುಭವಿಗಳಿಗೆ 35.50 ಲಕ್ಷ ರೂ. ಚೆಕ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ಕೋಚಿ ಮುಲ್ ಶಿಬಿರ ಕಚೇರಿ ಉಪ ವ್ಯವಸ್ಥಾಪಕ ಸಿ.ಪುಣ್ಯ ಕೋಟಿ, ಡಾ.ಗೌತಮ್, ಡಾ.ಮನೋರಂಜನರೆಡ್ಡಿ, ವಿಸ್ತ ರಣಾಧಿಕಾರಿ ಸತೀಶ್, ಮುನಿಸ್ವಾಮಿರೆಡ್ಡಿ, ಜಿ.ಎಂನಾಗ ರಾಜಪ್ಪ, ಹಾಲು ಉತ್ಪಾದಕರ ನೌಕರರ ಸಂಘದ ಕಾರ್ಯದರ್ಶಿ ವಿನಯ್, ಸಿಬ್ಬಂದಿ ಶ್ರೀನಿವಾಸರೆಡ್ಡಿ ಹಾಜರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಕೊಟ್ಟಿದ್ದ ಖಾಲಿ ಚೊಂಬನ್ನು ಅಕ್ಷಯಪಾತ್ರೆ ಮಾಡಿದ್ದು ಮೋದಿ: ಎಚ್ ಡಿಡಿ ಕಿಡಿ
ಜೆಡಿಎಸ್ -ಬಿಜೆಪಿ ಬಿ ಟೀಮ್ ಹೌದು: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
Congress ಸರ್ಕಾರ ಪತನ ದೇವೇಗೌಡರ ಭ್ರಮೆ: ಸಿದ್ದರಾಮಯ್ಯ ವಾಗ್ದಾಳಿ
Lok Sabha Election 2024; ಚಿಕ್ಕಬಳ್ಳಾಪುರಕ್ಕೆ ನಾನೇ ಪವನ್ ಕಲ್ಯಾಣ್!