ಸಂತ್ರಸ್ತರ ರಕ್ಷಿಸಿದ ಯೋಧರಿಗೆ ಜಿಲ್ಲಾಡಳಿತ ಬೀಳ್ಕೊಡುಗೆ

ಅರೆಸೇನಾ ಪಡೆಗೆ ಶ್ಲಾಘನಾ ಪತ್ರ ನೀಡಿ ಕೃತಜ್ಞತೆ ಸಲ್ಲಿಸಿದ ಜಿಲ್ಲಾಡಳಿತ

Team Udayavani, Aug 14, 2019, 12:10 PM IST

14-AGUST-16

ಚಿಕ್ಕಮಗಳೂರು: ನೆರೆ ಪೀಡಿತರ ರಕ್ಷಣೆಗಾಗಿ ಜಿಲ್ಲೆಗೆ ಆಗಮಿಸಿದ್ದ ಅರೆಸೇನಾ ಪಡೆ ಯೋಧರಿಗೆ ಸಂತ್ರಸ್ತ ಮಹಿಳೆಯರು ರಾಖೀ ಕಟ್ಟಿ ಆತ್ಮೀಯವಾಗಿ ಬೀಳ್ಕೊಟ್ಟರು.

ಚಿಕ್ಕಮಗಳೂರು: ನಿರಂತರ ಮಳೆ, ಕುಸಿಯುತ್ತಿರುವ ಗುಡ್ಡಗಳು, ಉಕ್ಕಿ ಹರಿಯುವ ನದಿ, ಸಂಪರ್ಕಗಳ ಕಡಿತ ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ತಮ್ಮ ಜೀವದ ಹಂಗು ತೊರೆದು ಮತ್ತೂಂದಿಷ್ಟು ಜೀವಗಳ ರಕ್ಷಣೆಗೆ ಧಾವಿಸಿದ್ದ ಅರೆಸೇನಾ ಪಡೆಯನ್ನು ಮಂಗಳವಾರ ಜಿಲ್ಲಾಡಳಿತ ಕೃತಜ್ಞತಾ ಪೂರ್ವಕವಾಗಿ ಬೀಳ್ಕೊಟ್ಟಿತು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಪರ ಜಿಲ್ಲಾಧಿಕಾರಿ ಡಾ| ಕುಮಾರ್‌, ಸೇನಾ ತಂತ್ರಜ್ಞ ಕಾರ್ಯಪಡೆ ಮುಖ್ಯಸ್ಥ ಕರ್ನಲ್ ಕಮಲೇಶ್‌ ಎಸ್‌.ಬಿಷ್ಟ್ ಮತ್ತು ಕ್ಯಾಪ್ಟನ್‌ ಬಿ.ನಾಗಮಲ್ಲಿಕಾರ್ಜುನ ರಾವ್‌ ಅವರ ನೇತೃತ್ವದ 34 ಮಂದಿ ಸೇನಾ ತಾಂತ್ರಿಕ ಕಾರ್ಯಪಡೆ ಸಿಬ್ಬಂದಿ ಕೈಗೊಂಡ ರಕ್ಷಣಾ ಕಾರ್ಯವನ್ನು ವಿವರಿಸಿ ಅಭಿನಂದಿಸಿದರು.

ಜಿಲ್ಲೆಯ ಮಲೆನಾಡು ಭಾಗದಲ್ಲಿ ಅದರಲ್ಲೂ ವಿಶೇಷವಾಗಿ ಮೂಡಿಗೆರೆ ತಾಲೂಕಿನ ಗ್ರಾಮಗಳಾದ ಆಲೇಕಾನ್‌ ಹೊರಟ್ಟಿ, ದುರ್ಗದಹಳ್ಳಿ, ಅಲಗಡಕದಲ್ಲಿ ಗಾಳಿ, ಮಳೆಗೆ ಸಿಲುಕಿ ಹೊರಜಗತ್ತಿನ ಸಂಪರ್ಕ ವಂಚಿತರಾಗಿ ಆತಂಕದಲ್ಲಿದ್ದ ಕುಟುಂಬಗಳನ್ನು ಪ್ರತಿಕೂಲ ವಾತಾವರಣದ ನಡುವೆಯೂ ರಕ್ಷಿಸಿದ ಸೇನಾ ತಾಂತ್ರಿಕ ಪಡೆಯ ಸಾಹಸವನ್ನು ಮೆಲುಕು ಹಾಕಲಾಯಿತು.

ಆಲೇಕಾನ್‌ ಹೊರಟ್ಟಿ ಗುಡ್ಡ ಕುಸಿತದಿಂದ ನಡುಗಡ್ಡೆಯಾಗಿತ್ತು. ಮಳೆಯ ಹೊಡೆತಕ್ಕೆ ರಸ್ತೆ ಕುಸಿದು ನಾಶವಾಗಿತ್ತು. ಅಲ್ಲಿನ 76 ಮಂದಿ ನಿವಾಸಿಗಳು ಹೊರಹೋಗಲಾಗದೆ, ಒಳಗಿರಲಾರದೆ ಅತಂತ್ರ ಸ್ಥಿತಿಯಲ್ಲಿ ಆತಂಕಕ್ಕೊಳಗಾಗಿದ್ದರು. ಅವರುಗಳನ್ನು ಹೆಲಿಕಾಪ್ಟರ್‌ ಮೂಲಕ ಹೊರಕ್ಕೆ ತರುವ ಪ್ರಯತ್ನ ಪ್ರತಿಕೂಲ ಹವಾಮಾನದಿಂದ ಕೈಗೂಡಲಿಲ್ಲ. ಇಂತಹ ಸ್ಥಿತಿಯಲ್ಲಿ ರಕ್ಷಣಾ ಕಾರ್ಯ ಕೈಗೊಳ್ಳುವ ಅನುಭವ ಹೊಂದಿರುವ ಸೇನಾ ಕಾರ್ಯಪಡೆಯ ಮುಖ್ಯಸ್ಥ ಕಮಲೇಶ್‌ ಎಸ್‌.ಬಿಷ್ಟ್ ಎಲ್ಲಾ ರೀತಿಯ ನೈಸರ್ಗಿಕ ಅಡೆತಡೆ ದಾಟಿ ಆ ಜನರನ್ನು ರಕ್ಷಿಸುವ ಕೆಲಸಕ್ಕೆ ತಮ್ಮ ಪಡೆಯನ್ನು ಸಜ್ಜುಗೊಳಿಸಿದರು ಎಂದು ಡಾ| ಕುಮಾರ್‌ ಹೇಳಿದರು.

ಒಟ್ಟು 8 ಕಿ.ಮೀ.ದೂರವನ್ನು ನಡೆದು ಕ್ರಮಿಸಬೇಕಾಗಿತ್ತು. ಮಣ್ಣು ಕುಸಿತದಿಂದ ರಸ್ತೆ ನಾಶವಾಗಿತ್ತು. ಕಾಡಿನಲ್ಲಿ ಕಾಲುಹಾದಿ ನಿರ್ಮಿಸಿಕೊಂಡು ಪ್ರತಿ 200 ಮೀಟರ್‌ಗೆ ಒಂದು ಹಗ್ಗ ಕಟ್ಟಿಕೊಂಡು 75 ಜನರನ್ನು ಹೊರತರಬೇಕಾಯಿತು. ಸ್ಥಳೀಯ ಸಾಮಗ್ರಿಗಳನ್ನೇ ಬಳಸಿ ತಮ್ಮ ತಾಂತ್ರಿಕ ಕೌಶಲ್ಯದಿಂದ ಆ.11 ರಂದು ಈ ಪಡೆ ಸಣ್ಣ ಸೇತುವೆ ಹಾಗೂ ಕಾಲುಸಂಕಗಳನ್ನು ನಿರ್ಮಿಸಿಕೊಂಡು 6 ಗಂಟೆಗಳ ಕಾಲ 8 ಕಿ.ಮೀ.ದೂರ ನಡೆದು ಗ್ರಾಮ ಪ್ರವೇಶಿಸಿತು ಎಂದರು.

ವೈದ್ಯಕೀಯ ನೆರವನ್ನು ತಕ್ಷಣ ನೀಡಬೇಕಾದ ಅಗತ್ಯವಿದ್ದ 6 ಮಂದಿ ಹಿರಿಯರನ್ನು 8 ಕಿ.ಮೀ.ದೂರ ಹೊತ್ತು ಸಾಗಿಸಿ ರಕ್ಷಿಸಲಾಯಿತು. ಈ ಹಂತದಲ್ಲಿ ಜಿಲ್ಲಾಧಿಕಾರಿ ಡಾ| ಬಗಾದಿ ಗೌತಮ್‌ ಅರ್ಧ ದಾರಿ ವರೆಗೆ ಈ ಪಡೆಯ ಜೊತೆಯಲ್ಲೆ ಇದ್ದರೆ, ಜಿಲ್ಲಾ ಪೊಲೀಸ್‌ ಮುಖ್ಯಾಧಿಕಾರಿ ಹರೀಶ್‌ ಪಾಂಡೆ ಅವರ ಪ್ರೋತ್ಸಾಹ ಮತ್ತು ನೆರವನ್ನು ತಾಂತ್ರಿಕ ಪಡೆ ನೆನೆದುಕೊಂಡಿತು. ಕಂದಾಯ ಉಪವಿಭಾಗಾಧಿಕಾರಿ ಕೆ.ಎಚ್. ಶಿವಕುಮಾರ್‌ ಈ ಕಾರ್ಯಪಡೆ ಜೊತೆ ಇದ್ದು, ಕುಟುಂಬಗಳ ರಕ್ಷಣೆಗೆ ನೆರವಾದರು.

ಈ ಗ್ರಾಮದ 48 ವರ್ಷದ ನಾರಾಯಣಗೌಡ ಪಾರ್ಶ್ವವಾಯು ಪೀಡಿತರಾಗಿದ್ದು, ಅವರನ್ನು ರಕ್ಷಿಸಲು ಸ್ಥಳೀಯವಾಗಿ ಸಿಕ್ಕ ವಸ್ತುಗಳಿಂದಲೆ ಸ್ಟ್ರೆಚರ್‌ ನಿರ್ಮಿಸಿ ಹೊತ್ತು ತಂದು ಎಲ್ಲಾ 76 ಮಂದಿಯನ್ನು ಪರಿಹಾರ ಕೇಂದ್ರಕ್ಕೆ ತಂದು ಸೇರಿಸಲಾಯಿತು.

ಆನಂತರ ಎದುರಾದದ್ದು ಮೂಡಿಗೆರೆ ತಾಲೂಕಿನ ದುರ್ಗದಹಳ್ಳಿ ಮತ್ತು ಅಲಗಡಕ ಗ್ರಾಮದಲ್ಲಿ ಸಿಕ್ಕಿಹಾಕಿಕೊಂಡು ನೆರವಿನ ನಿರೀಕ್ಷೆಯಲ್ಲಿದ್ದ 2 ಕುಟುಂಬಗಳು. ವಯಸ್ಸಾದವರೇ ಹೆಚ್ಚಾಗಿದ್ದ ಈ ಕುಟುಂಬಗಳಲ್ಲಿ ಒಬ್ಬರು ಕ್ಯಾನ್ಸರ್‌ಪೀಡಿತರಾದರೆ, ಮತ್ತೂಬ್ಬರು ಬೆನ್ನುಹುರಿ ಸಮಸ್ಯೆಯಿಂದ ನರಳುತ್ತಿದ್ದರು. ಅಷ್ಟೂ ಮಂದಿಯನ್ನು ನಿಸರ್ಗದ ಎಲ್ಲಾ ರೀತಿಯ ವೈಪರೀತ್ಯಗಳನ್ನು ಎದುರಿಸಿ ಪರಿಹಾರ ಕೇಂದ್ರಕ್ಕೆ ತಂದು ಆಶ್ರಯ ಒದಗಿಸಲಾಯಿತು. ಜಿಲ್ಲಾಡಳಿತದ ಮನವಿ ಆಧರಿಸಿ ಈ ಕಾರ್ಯಪಡೆ ಆ.10 ರಂದು ಜಿಲ್ಲೆಗೆ ಧಾವಿಸಿ ರಾತ್ರಿ, ಹಗಲೆನ್ನದೆ ಜಿಲ್ಲೆಯ ಜನತೆಯ ರಕ್ಷಣೆಗೆ ಮುಂದಾಯಿತೆಂದು ಡಾ| ಕುಮಾರ್‌ ವಿವರಿಸಿದರು.

ಜಿಲ್ಲೆಯಲ್ಲಿ ಕಳೆದ 2 ದಿನಗಳಿಂದ ಮಳೆ ಕಡಿಮೆಯಾಗಿದೆ. ರಕ್ಷಣಾ ಕಾರ್ಯ ಬಹುತೇಕ ಮುಕ್ತಾಯವಾದ ಹಿನ್ನೆಲೆಯಲ್ಲಿ ಮತ್ತೆ ಅಗತ್ಯಬಿದ್ದರೆ ಕರೆಸಿಕೊಳ್ಳಬಹುದು. ಹಾಗಾಗಿ, ಮಂಗಳವಾರ ಈ ಪಡೆ ಹಿಂತಿರುಗುತ್ತಿದೆ ಎಂದು ತಿಳಿಸಿದರು. ನಂತರ ಹಸ್ತಲಾಘವ ನೀಡಿ, ಜೊತೆಗೆ ಒಂದು ಶ್ಲಾಘನಾ ಪತ್ರವನ್ನು ಕೈಗಿತ್ತು ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು.

ಟಾಪ್ ನ್ಯೂಸ್

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

1-wqeqweqweeqweqe

Brahmos; ಫಿಲಿಪ್ಪೀನ್ಸ್‌ಗೆ ಬ್ರಹ್ಮೋಸ್‌: ಭಾರತದ ಮೊದಲ ರಫ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.