ಹೇಮಾವತಿ ತೀರದಲ್ಲಿ ಸ್ನಾನ -ಬಯಲು ಶೌಚ
ಕುಡಿಯುವ ನೀರಿನ ಮೂಲ ಮಲಿನಗೊಳ್ಳುವ ಆತಂಕ
Team Udayavani, Dec 7, 2019, 6:19 PM IST
ಚಿಕ್ಕಮಗಳೂರು: ಮಲೆನಾಡಿನ ಹೇಮಾವತಿ ಲಕ್ಷಾಂತರ ಜನರ ಜೀವನದಿಯಾಗಿದ್ದು, ಮೂಡಿಗೆರೆ ತಾಲೂಕಿನ ಜಾವಳಿಯಲ್ಲಿ ಹುಟ್ಟಿ ಬಣಕಲ್ ಮೂಡಿಗೆರೆಯಿಂದ ಹರಿದು ಹಾಸನ ಜಿಲ್ಲೆಯ ಗೋರೂರು ಅಣೆಕಟ್ಟನ್ನು ತಲುಪುತ್ತದೆ. ಆದರೆ, ಇತ್ತೀಚೆಗೆ ನದಿ ತೀರದಲ್ಲಿ ಸ್ನಾನ, ಬಯಲು ಶೌಚ ಮಾಡುವುದರಿಂದ ಕುಡಿಯುವ ನೀರಿನ ಮೂಲ ಮಲಿನಗೊಳ್ಳುತ್ತಿದೆ.
ವೇದಾವತಿ ನದಿ ನೂರಾರು ಗ್ರಾಮಗಳ ಲಕ್ಷಾಂತರ ಜನರ ಕುಡಿಯುವ ನೀರಿನ ಮೂಲವಾಗಿದೆ. ಬಣಕಲ್ ಸಮೀಪ ಹೇಮಾವತಿ ನದಿ ತೀರದಲ್ಲಿ ರಸ್ತೆ ಕೆಲಸಕ್ಕೆಂದು ಬಂದ ನೂರಾರು ಕಾರ್ಮಿಕರು ನದಿ ತೀರದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡಿದ್ದು, ನದಿ ತೀರದಲ್ಲಿಯೇ ಸ್ನಾನ, ಬಯಲು ಶೌಚ ಮಾಡಿ ಕುಡಿಯುವ ನೀರಿನ ಮೂಲವನ್ನು ಮಲೀನಗೊಳಿಸುತ್ತಿದ್ದಾರೆ.
ಗ್ರಾಮಸ್ಥರಾದ ಸಂಜಯಗೌಡ ಈ ಬಗ್ಗೆ ಮಾತನಾಡಿ, ಜಿಲ್ಲೆ ಬಯಲು ಶೌಚ ಮುಕ್ತ ಜಿಲ್ಲೆಯಾಗಿದ್ದು, ಹೇಮಾವತಿ ನದಿ ತೀರದಲ್ಲಿ ಬಯಲು ಶೌಚ ಮಾಡುತ್ತಿರುವುದರಿಂದ ಕುಡಿಯುವ ನೀರಿನ ಮೂಲ ಮಲಿನವಾಗುವ ಸಾಧ್ಯತೆ ಇದೆ. ರಸ್ತೆ ಕಾಮಗಾರಿಯ ಗುತ್ತಿಗೆದಾರರು ತಮ್ಮ ಕೆಲಸಗಾರರಿಗೆ ಬೇರೆಡೆ ವಸತಿ ಸೌಕರ್ಯ ಕಲ್ಪಿಸಿಕೊಡಬೇಕು. ಹೀಗೆ ಬಯಲಿನಲ್ಲಿ ಟೆಂಟ್ ಹಾಕಿ ವಾಸಿಸುವುದು ಸರಿಯಲ್ಲ ಎಂದರು.
ಹೇಮಾವತಿ ನದಿ ತೀರದಲ್ಲಿ ಟೆಂಟ್ ನಿರ್ಮಿಸಿ ವಾಸ್ತವ್ಯ ಹೂಡಿರುವುದು ನನ್ನ ಗಮನಕ್ಕೆ ಬಂದಿದೆ. ಅಲ್ಲಿಂದ ಅವರನ್ನು ಬೇರೆಡೆಗೆ ಕಳಿಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
.ಮಹೇಶ್,
ಬಣಕಲ್ ಗ್ರಾಪಂ ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Belagavi; ಸವದಿ ಮನೆಗೆ ಭೇಟಿ ನೀಡಿದ ರಣದೀಪ್ ಸುರ್ಜೆವಾಲಾ
Loksabha; ರಾಜ್ಯದಲ್ಲಿ 20ಕ್ಕಿಂತ ಹೆಚ್ಚು ಕ್ಷೇತ್ರ ಗೆಲ್ಲುತ್ತೇವೆ: ರಣದೀಪ್ ಸುರ್ಜೇವಾಲಾ
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bidar; ನೇಹಾ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುವುದು ಸರಿಯಲ್ಲ: ಸಿಎಂ ಸಿದ್ಧರಾಮಯ್ಯ
MUST WATCH
ಹೊಸ ಸೇರ್ಪಡೆ
Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ
Delhi Police: ಮಾರುತಿ ಸ್ವಿಫ್ಟ್ ಕಾರಿನಲ್ಲಿ 30ಕ್ಕೂ ಅಧಿಕ ಕುರಿ, ಮೇಕೆ ಸಾಗಾಟ!
BJP 2025ರಲ್ಲಿ ಹಿಂದುಳಿದ ಸಮುದಾಯಗಳ ಮೀಸಲಾತಿ ತೆಗೆದು ಹಾಕಲಿದೆ: ರೇವಂತ್ ರೆಡ್ಡಿ
Kannada Cinema; ಬ್ಯಾಡ್ ಬಾಯ್ಸ್ ಬಂದ್ರು..! ವಿದ್ಯಾರ್ಥಿ ವಿದ್ಯಾರ್ಥಿನಿಯರ ಹಾಡಿದು…
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ