ಏಲಕ್ಕಿ ಬೆಳೆದು ಮಾದರಿಯಾದ ರೈತ!

ಸಾವಯವ ಪದ್ಧತಿಯಡಿ ಉತ್ತಮ ತೋಟ ರೂಪಿಸಿದ ಅರಣ್ಯ ಇಲಾಖೆ ನಿವೃತ್ತ ಗಾರ್ಡ್

Team Udayavani, Sep 9, 2020, 5:13 PM IST

ಏಲಕ್ಕಿ ಬೆಳೆದು ಮಾದರಿಯಾದ ರೈತ!

ತೀರ್ಥಹಳ್ಳಿ: ಎಡೆಬಿಡದೆ ಸದ್ದು ಮಾಡುವ ತುಂಗಾನದಿ ಹೊಳೆಯ ಮಧ್ಯ ಹೆಬ್ಬಂಡೆ ಜುಳುಜುಳು ನೀರಿನ ಶಬ್ದದ ನಡುವೆ ಪಕ್ಕದ ತೋಟದಲ್ಲಿ ವಿಸ್ತಾರವಾಗಿ ಹಸಿರು ಹೊದಿಕೆ ಹೊದ್ದಿರುವ ಅಡಿಕೆ ತೋಟ. ಮನೆಯ ಸುತ್ತಲೂ ಪಸರಿಸಿರುವ ವಿವಿಧ ತಳಿಯ ಸಸ್ಯ ರಾಶಿ.. ಇದರ ನಡುವೆ ಸಾವಯವ ಕೃಷಿ ನೆಚ್ಚಿಕೊಂಡುತಮ್ಮದೇ ಕಲ್ಪನೆಯಲ್ಲಿ ಜಮೀನನ್ನು ಸುಂದರವಾಗಿ ರೂಪಿಸಿರುವ ತಮ್ಮ 62 ವರ್ಷದ ಲಕ್ಷಿ¾àಪುರ ಅಶೋಕ್‌ ಅವರು ಏಲಕ್ಕಿ ಬೆಳೆದು ಮಾದರಿಯಾಗಿದ್ದಾರೆ.

ಮೇಲಿನ ಕುರುವಳ್ಳಿ ಗ್ರಾಪಂ ವ್ಯಾಪ್ತಿಯ ತುಂಬಡಿಯಲ್ಲಿ ಒಂದು ಎಕರೆ ಭೂಮಿಯಲ್ಲಿ ಅಡಕೆ, ತೆಂಗು, ಬಾಳೆ, ಕೋಕೋ, ವೀಳ್ಯದೆಲೆ, ಕಾಳುಮೆಣಸು, ಕಾಫಿ, ಏಲಕ್ಕಿ, ಜಾಯಿಕಾಯಿ, ಲವಂಗ ಸೇರಿದಂತೆ ಸ್ಥಳೀಯವಾಗಿ ಲಭ್ಯವಿರುವ ಔಷ ಧೀಯ ಸಸ್ಯಗಳುಒಳಗೊಂಡಂತೆ ಅವರ ತೋಟದಲ್ಲಿ ಗಿಡಗಳುಕಾಣಸಿಗುತ್ತವೆ. ನಿತ್ಯ ಬೆಳಗಾದರೆ ತೋಟದಲ್ಲಿಅವರು ಕಾಯಕವೇ ಕೈಲಾಸ ಎನ್ನುವ ಹಾಗೆತಮ್ಮದೇ ಕನಸಿನಂತೆ ಜಮೀನನ್ನು, ರೂಢಿಸಿಕೊಂಡು ಬರುತ್ತಿದ್ದಾರೆ.

ಅಶೋಕ್‌ ಅವರು ಈ ಹಿಂದೆ ಅರಣ್ಯ ಇಲಾಖೆಯ ವಾಚರ್‌ ಆಗಿ ನಂತರ ಕೆಲವು ಸಮಯ ಗಾರ್ಡ್‌ ಆಗಿ ನಿವೃತ್ತಿ ಪಡೆದು ಇದೀಗ ಕೃಷಿ ಕ್ಷೇತ್ರದಲ್ಲಿ ತೊಡಗಿದ್ದಾರೆ. ತಮ್ಮ ತೋಟದ ಮಧ್ಯೆ ದನದ ಕೊಟ್ಟಿಗೆ ನಿರ್ಮಿಸಿ ಎರಡು ಎಚ್‌ಎಫ್‌ ಜರ್ಸಿ ದನಗಳನ್ನು ಸಾಕಿ ಹೈನುಗಾರಿಕೆಯನ್ನು ಸಹ ಮಾಡುತ್ತ ನಿತ್ಯ ತಮ್ಮ ಉಪ ಕಸುಬಿನ ಜೊತೆಗೆ ಹಾಲು ಮಾರಾಟದಲ್ಲೂ ನಿರತರಾಗಿದ್ದಾರೆ. ಕೃಷಿಯಲ್ಲಿ ಪ್ರೇರಿತರಾದ ಇವರು ಒಮ್ಮೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ನಿಯೋಜನೆ ಮಾಡಿದ ಪ್ರವಾಸದಲ್ಲಿತೊಡಗಿ ಸಾಗರದಲ್ಲಿ ಒಬ್ಬರು ಪ್ರಗತಿಪರ ಕೃಷಿಕರು ತೋಟದಲ್ಲಿ ತೊಡಗಿಸಿದ ಸಾವಯವ ಗೊಬ್ಬರ ಮಿಶ್ರಣ ಸಂಗ್ರಹಣಾ ಘಟಕ ನೋಡಿ ಬಂದುತಮ್ಮ ತೋಟದಲ್ಲಿ ಯಾಕೆ ಇದನ್ನು ಅಳವಡಿಸಬಾರದು ಎಂಬ ಕಲ್ಪನೆಯಿಂದ ತಮ್ಮ ತೋಟದ ಮಧ್ಯೆ ಒಂದುಸಾವಿರ ಲೀಟರ್‌ ಸಾಮರ್ಥಯದ ಟ್ಯಾಂಕ್‌ ಇಟ್ಟು ಅದರಿಂದ ನೂರು ಮೀಟರ್‌ ದೂರವಿರುವ ಕೊಟ್ಟಿಗೆಗೆ ಪೈಪ್‌ ಮುಖಾಂತರ ಸಂಪರ್ಕ ಅಳವಡಿಸಿದ್ದಾರೆ.

ಕೊಟ್ಟಿಗೆಯಲ್ಲಿ ತಾವು ನಿತ್ಯ ದನಗಳನ್ನು ತೊಳೆದ ನೀರು ಹಾಗೂ ಗೋಮೂತ್ರ ಮಿಶ್ರಿತ ಸಗಣಿ ನೀರುಹಾದು ಹೋಗಿ ತೋಟದ ಮಧ್ಯದಲ್ಲಿರುವ ಟ್ಯಾಂಕ್‌ಗೆ ತುಂಬುತ್ತದೆ. ಈ ನೀರು ಕೆಲವೇ ವಾರದಲ್ಲಿ ಜೀವಾಮೃತವಾಗಿ ಪರಿವರ್ತನೆಗೊಳ್ಳುತ್ತದೆ. ಈ ಪರಿವರ್ತನೆಯಾದ ಗೋಮೂತ್ರ ತಾವು ಬೆಳೆದ ಏಲಕ್ಕಿ, ಕಾಳುಮೆಣಸು ಇನ್ನಿತರ ಸಸಿಗಳಿಗೆ ಹಾಕಿ ಉತ್ತಮ ಇಳುವರಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಸಾವಯವ ಕೃಷಿಗೆ ಮಡದಿ ಗಂಗಮ್ಮ ಮತ್ತು ಮಗ ಅರುಣ್‌ ಕುಮಾರ್‌ ಅವರ ಅವರ ಸಂಪೂರ್ಣ ಸಹಕಾರವಿದ್ದು ಎಲ್ಲಾ ಕೆಲಸ ಕಾರ್ಯಗಳಿಗೆ ಜೊತೆಗೂಡುತ್ತಾರೆ. ತೀರ್ಥಹಳ್ಳಿಯ ಕುರುವಳ್ಳಿ ಪುತ್ತಿಗೆ ಮಠ ರಸ್ತೆಯಲ್ಲಿ ಒಂದೂವರೆ ಕಿಮೀ ಹೋದರೆ ತುಮ್ಡಿ ಸಮೀಪದಲ್ಲಿ ಅಶೋಕ್‌ ಅವರ ಮನೆ ಇದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಏಲಕ್ಕಿ ಬೋರ್ಡ್‌, ಫಾರಂನಿಂದ ಒಂದೆರಡು ಏಲಕ್ಕಿ ಗಿಡ ತಂದು ಮೊದಲ ಬಾರಿಗೆ ನೆಟ್ಟಿದ್ದಾರೆ. ನಂತರ ಗಿಡ ಮಾಡಿ ತಮ್ಮ ತೋಟದ ಮಧ್ಯೆ ನೆಟ್ಟು ಸ್ವತಃ ತಾವೇ ಕೃಷಿಯಲ್ಲಿ ತೊಡಗಿ ಉತ್ತಮ ಇಳುವರಿ ಪಡೆದು ತಮ್ಮ ಆದಾಯ ದುಪ್ಪಟ್ಟು ಹೆಚ್ಚಿಗೆ ಮಾಡಿಕೊಂಡಿದ್ದಾರೆ. ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಅವರನ್ನು (ದೂ: 9731159612)ಸಂಪರ್ಕಿಸಬಹುದು.

ಕೋವಿಡ್ ಮಹಾಮಾರಿಗೆ ಹೆದರಿ ಮಾನಸಿಕ ನೆಮ್ಮದಿ ಹುಡುಕಿಕೊಂಡು ಇಂದು ಬೆಂಗಳೂರಿನಂತಹ ಮಹಾನಗರಗಳಿಂದ ಹಳ್ಳಿ ಕಡೆಗೆ ಜನರು ಮತ್ತು ಯುವಕರು ಮುಖ ಮಾಡುತ್ತ ಇದ್ದಾರೆ.ಇದರಿಂದ ಹಳ್ಳಿಗಳಲ್ಲಿ ಎಷ್ಟೋ ಪಾಳು ಬಿದ್ದ ಜಾಗಗಳು ಕೃಷಿ ಭೂಮಿಯಾಗಿ ಪರಿವರ್ತನೆಆಗುತ್ತಿರುವುದು ಸಂತೋಷ ತಂದಿದೆ. ಇದು ಆಶಾದಾಯಕ ಬೆಳವಣಿಗೆ ಕೂಡ. – ಎಲ್‌. ಟಿ. ಅಶೋಕ್‌, ಸಾವಯವ ಕೃಷಿಕ

 

-ಶ್ರೀಕಾಂತ್‌ ವಿ. ನಾಯಕ್‌

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.