ಕಾಫಿ ಕೊಯ್ಲಿಗೆ ಇರುವೆ ಕಾಟ
Team Udayavani, Feb 4, 2020, 1:36 PM IST
ಕೊಟ್ಟಿಗೆಹಾರ: ಇದು ಕುಯ್ಲಿನ ಸಮಯವಾಗಿರುವುದರಿಂದ ಕಾಫಿ ತೋಟಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಕಾಫಿ ಕುಯ್ಲಿಗೆ ಕುನಕ ಎಂಬ ಇರುವೆ ಕಾಟದಿಂದ ಕಾರ್ಮಿಕರು ಹಿಂದೇಟು ಹಾಕುತ್ತಿರುವುದು ರೈತರಿಗೆ ತಲೆನೋವಾಗಿದೆ.
ಅತಿವೃಷ್ಟಿಯಿಂದ ಕೀಟಗಳ ಸಂತತಿ ಅತಿಯಾಗಿದ್ದು, ಮಳೆಗಾಲದಲ್ಲಿ ಜಿಗಣಿ(ಇಂಬಳ), ಚುಂಗಳ(ಕಂಬಳ ಹುಳ), ಚಳಿಗಾಲ ಬರುತ್ತಲೆ ಉಣುಗು (ಉಣ್ಣೆ), ಕಾಫಿ ಕುಯ್ಲಿನ ಸಮಯಕ್ಕೆ ಬಂದರೆ ಕುನಕ (ಕುಣಜ) ಮತ್ತು ಚಗಳಿಗಳ ಕಾಟ ಅತಿಯಾಗಿದೆ. ಇದರಿಂದ ಕಾಫಿ ಕುಯ್ಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಹಣ್ಣಾಗಿ ನಿಂತ ಕಾಫಿ ಗಿಡದ ಹಲವು ರೆಂಬೆಗಳನ್ನು ಬಳಸಿ ಕುನಕಗಳು ಗೂಡು ಕಟ್ಟುವುದರಿಂದ ಕಾಫಿ ಕುಯ್ಲು ಸಂದರ್ಭದಲ್ಲಿ ಕುನಜದಿಂದ ಕಚ್ಚಿಸಿಕೊಳ್ಳುತ್ತಲೇ ಕಾಫಿ ಕುಯ್ಯುವ ಸ್ಥಿತಿ ಬಂದಿದೆ.
ಕೀಟನಾಶಕ ಬಳಸಿ ಕುನಕದ ಕೀಟ ಬಾಧೆ ನಿಯಂತ್ರಿಸಬಹುದಾದರೂ ಎಲ್ಲಾ ಗಿಡಗಳಲ್ಲೂ ಕುನಕಗಳ ಕಾಟ ಇರುವುದರಿಂದ ಎಲ್ಲಾ ಕಾಫಿ ಗಿಡಗಳಿಗೆ ಕೀಟನಾಶಕ ಸಿಂಪಡಿಸುವುದು ದುಬಾರಿ ಮತ್ತು ಕೀಟನಾಶಕಗಳಿಂದ ಅಡ್ಡ ಪರಿಣಾಮಗಳಿರುವುದರಿಂದ ಕೀಟನಾಶಕ ಸಿಂಪಡಿಸುವುದು ಕೂಡ ರೈತರಿಗೆ ಸವಾಲಾಗಿ ಪರಿಣಮಿಸಿದೆ. ಕುನಜಗಳು ಸಗಣಿಯನ್ನು ಬಳಸಿ ಗೂಡು ಕಟ್ಟುತ್ತವೆ. ಗೋಮಾಳಗಳು ಕಡಿಮೆಯಾಗುವುದರಿಂದ ಜಾನುವಾರುಗಳು ತೋಟಗಳಲ್ಲಿ ಸಂಚರಿಸುವುದರಿಂದ ತೋಟದ ನಡುವೆ ಸಿಗುವ ಸಗಣಿಯನ್ನು ಬಳಸಿ ಕುನಜಗಳು ಗೂಡು ಕಟ್ಟಿರುವುದರಿಂದ ಕೆಲ ವರ್ಷಗಳಿಂದ ಕಾಫಿ ತೋಟಗಳಲ್ಲಿ ಕುನಕಗಳ ಕಾಟ ಹೆಚ್ಚಾಗಿದೆ. ಕೈಗೆ ಕವಚಗಳನ್ನು ಹಾಕಿಕೊಂಡು ಕಾಫಿ ಕುಯ್ಲು ಮಾಡಲು ಸಾಧ್ಯವಿದ್ದರೂ ಕುನಕಗಳು ಇತರೆ ಇರುವೆಗಳಂತೆ ಕಚ್ಚದೇ ಕಾಫಿ ಗಿಡದ ಕೆಳಗೆ ಕಾಫಿ ಕುಯ್ಲು ಮಾಡುವ ಕಾರ್ಮಿಕರ ಮೇಲೆ ಕುನಕಗಳು ಉದುರಿ ನಂತರ ಕಚ್ಚಲು ಪ್ರಾರಂಭಿಸುತ್ತವೆ. ಇದರಿಂದ ಕೈಗೆ ಕವಚಗಳನ್ನು ಹಾಕುವುದು ಕೂಡ ಕುನಕಗಳ ತಡೆಗೆ ಪರಿಣಾಮಕಾರಿಯಲ್ಲ. ಅತಿವೃಷ್ಟಿ, ಅನಾವೃಷ್ಟಿ, ಕಾರ್ಮಿಕರ ಕೊರತೆ, ಕಡಿಮೆ ಇಳುವರಿ ಮುಂತಾದ ಸಮಸ್ಯೆಗಳಿಂದ ಬಳಲುತ್ತಿರುವ ಕಾಫಿ ಬೆಳೆಗಾರರಿಗೆ ಕುನಕಗಳ ಕಾಟ ತಲೆನೋವಾಗಿ ಪರಿಣಮಿಸಿದೆ.
ಅತಿಯಾದ ಮಳೆ ಮತ್ತು ತೇವಾಂಶದಿಂದ ಈ ಹಿಂದೆ ನೆಲಮಟ್ಟದಲ್ಲಿ ಗೂಡು ಕಟ್ಟುತ್ತಿದ್ದ ಕುನಕಗಳು ಕಾಫಿ ಮತ್ತು ಕೆಲ ಜಾತಿಯ ಮರಗಳಲ್ಲಿ ಗೂಡು ಕಟ್ಟುತ್ತವೆ. ಉಣುಗು ಎಂಬ ಒಂದು ರೀತಿಯ ಕೀಟಗಳು ಇದ್ದ ಕಡೆಗಳಲ್ಲಿ ಕುನಕಗಳ ಕಾಟ ಕಡಿಮೆ ಇರುತ್ತದೆ. ಕಾಫಿಯ ನಾಲ್ಕಾರು ರೆಂಬೆಗಳನ ಆಧಾರ ಪಡೆದು ಕುನಕಗಳು ಗೂಡನ್ನು ಕಟ್ಟುತ್ತವೆ. ಗಿರೀಶ್,ಕೃಷಿ ವಿಜ್ಞಾನಿ, ಕೃಷಿ ವಿಜ್ಞಾನ ಕೇಂದ್ರ, ಮೂಡಿಗೆರೆ
ಕುನಕ, ಚಗಳಿ ಗಿಡದಲ್ಲಿ ಹೆಚ್ಚಿರುವುದರಿಂದ ಕಾಫಿ ಹಣ್ಣಿನ ಕುಯ್ಲಿಗೆ ತೊಂದರೆಯಾಗಿದೆ. ಈ ಮುಂಚೆ ದಿನವೊಂದಕ್ಕೆ 8 ರಿಂದ 10 ಬುಸಲು ಕಾಫಿ ಕುಯ್ಯುತ್ತಿದ್ದೆವು. ಈಗ 4 ರಿಂದ 5 ಬುಸಲಿಗೆ ಇಳಿದಿದೆ. ಕುನಕದಿಂದಾಗಿ ದಿನಕ್ಕೆ ಕಾಫಿ ಕುಯ್ಲಿನ ಪ್ರಮಾಣ ಕಡಿಮೆಯಾಗಿದೆ. ಶಕುಂತಲಾ,ಕಾಫಿ ತೋಟದ ಕಾರ್ಮಿಕರು
–ಸಂತೋಷ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ
Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್ ಗಗನ ಯಾತ್ರೆ
Rajveer Diler: ಹೃದಯಾಘಾತದಿಂದ ಬಿಜೆಪಿ ಸಂಸದ ರಾಜ್ವೀರ್ ದಿಲೇರ್ ನಿಧನ
Scam: 25,000 ಕೋಟಿ ಬ್ಯಾಂಕ್ ಹಗರಣ ಪ್ರಕರಣ: ಅಜಿತ್ ಪವಾರ್ ಪತ್ನಿ ಸುನೇತ್ರಾಗೆ ಕ್ಲೀನ್ ಚಿಟ್
OTT Release: ವಿಜಯ್ ದೇವರಕೊಂಡ ʼಫ್ಯಾಮಿಲಿ ಸ್ಟಾರ್ʼ ಓಟಿಟಿ ರಿಲೀಸ್ಗೆ ಡೇಟ್ ಫಿಕ್ಸ್