ಯುವತಿ ಆತ್ಮಹತ್ಯೆ: ಬಿಜೆಪಿ ಮುಖಂಡನ ಸೆರೆ
Team Udayavani, Jan 9, 2018, 7:20 AM IST
ಮೂಡಿಗೆರೆ: ಯಾದವ್ ಸುವರ್ಣ ಮತ್ತು ಸರಸ್ವತಿ ದಂಪತಿಯ ಪುತ್ರಿ ಧನ್ಯಾ (20) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ
ದಂತೆ ಮೂಡಿಗೆರೆ ಪೊಲೀಸರು ಬಿಜೆಪಿ ನಗರ ಯುವ ಮೋರ್ಚಾ ಅಧ್ಯಕ್ಷ ಅನಿಲ್ ಎಂಬಾತನನ್ನು ಬಂಧಿಸಿದ್ದಾರೆ.
ಮೃತ ಧನ್ಯಾ ತನ್ನ ಕಣ್ಣುಗಳ ಚಿತ್ರವನ್ನು ಮೊಬೈಲ್ ವಾಟ್ಸ್ ಆ್ಯಪ್ನಲ್ಲಿ ಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾ
ಡಿತ್ತು. ಇದನ್ನು ಕಂಡ ಸಂತೋಷ್ ಎಂಬಾತ ನಾನು ಬಜರಂಗ ದಳದ ಕಾರ್ಯಕರ್ತನಿದ್ದು, “ನೀನೊಂದು ಹಿಂದೂ
ಹುಡುಗಿಯಾಗಿ ಬುರ್ಖಾ ಹಾಕಿಕೊಂಡು ಫೋಟೋ ಹಾಕಿರುವುದು ಸರಿಯಲ್ಲ’ ಎಂದೂ, ಮೂಡಿಗೆರೆಯ ಬಜರಂಗ ದಳದ ಕಾರ್ಯಕರ್ತರಿಗೆ ಮೆಸೇಜ್ ಮಾಡುತ್ತೇನೆ ಎಂದೂ ಹೆದರಿಸಿದ್ದ. ನಂತರ ಮೂಡಿಗೆರೆ ಬಜರಂಗದಳದ ಕಾರ್ಯಕರ್ತರಿಗೆ ಮೆಸೇಜ್ ಕಳುಹಿಸಿದ್ದ. ಅದನ್ನು ಕಂಡ ಅನಿಲ್ ಮತ್ತು ಅವಿನಾಶ್ ಇನ್ನಿಬ್ಬರೊಂದಿಗೆ ಆಕೆಯ ಮನೆಗೆ ತೆರಳಿ ಬುದ್ಧಿ ಹೇಳಿ ಬಂದಿದ್ದರು. ಇದರಿಂದ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೂಡಿಗೆರೆ ಉಪ ಠಾಣಾಧಿಕಾರಿ ರಫೀಕ್ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಉಳಿದ ನಾಲ್ವರ ಶೋಧ ನಡೆಸುತ್ತಿದ್ದು ಆದಷ್ಟು ಬೇಗ ಅವರನ್ನೂ ಬಂಧಿಸುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್
Subramanya: ಮಗು ಮಲಗಿದೆ ಜೋರಾಗಿ ಮಾತನಾಡಬೇಡಿ ಎಂದಿದಕ್ಕೆ ಕತ್ತಿಯಿಂದ ಹಲ್ಲೆ