ಕಳಚಿ ಬಿದ್ದ ಬಸ್ ಟೈರ್: ಅಪಾಯದಿಂದ ಪಾರು
Team Udayavani, May 27, 2022, 3:05 PM IST
ಆಲ್ದೂರು: ಚಿಕ್ಕಮಗಳೂರಿನಿಂದ -ಆಲ್ದೂರು ರಾಜ್ಯ ಹೆದ್ದಾರಿ 27 ರ ಮಾರ್ಗವಾಗಿ ಆಲ್ದೂರಿಗೆ ಬರುತ್ತಿದ್ದ ಕಡೂರು- ಮಂಗಳೂರು ಕೆಎಸ್.ಆರ್.ಟಿ.ಸಿ. ಬಸ್ನ ಮುಂಭಾಗದ ಬಲಬದಿಯ ಟೈರ್ ತೋರಣಮಾವು ಗ್ರಾಮದ ಬಳಿ ಕಳಚಿ ಬಿದ್ದಿದ್ದು ಅದೃಷ್ಟ ವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಚಾಲಕನ ಸಮಯಪ್ರಜ್ಞೆಯಿಂದ ಸಂಭವಿಸುತ್ತಿದ್ದ ಅವಘಡವೊಂದು ತಪ್ಪಿದ್ದು ಬಸ್ನಲ್ಲಿದ್ದ ಸುಮಾರು 50 ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಪ್ರತಿದಿನ 8.30ಕ್ಕೆ ಆಲ್ದೂರು ಮಾರ್ಗವಾಗಿ ಈ ಬಸ್ ಸಾಗುತ್ತದೆ. ಕಾಲೇಜು ವಿದ್ಯಾರ್ಥಿಗಳು ಹಾಗೂ ಮಂಗಳೂರು ಆಸ್ಪತ್ರೆಗೆ ಹೋಗುವವವರ ಸಂಖ್ಯೆ ಹೆಚ್ಚಿರುತ್ತದೆ. ಬೆಳಗ್ಗೆ 8- 30 ರ ಸಮಯದಲ್ಲಿ ಈ ಅವಘಡ ಸಂಭವಿಸಿದ್ದು ಬಸ್ ರಸ್ತೆ ಮಧ್ಯೆಯೇ ನಿಂತ ಪರಿಣಾಮ ವಾಹನಗಳು ಸಾಗಲು ಜಾಗವಿಲ್ಲದೆ ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜ್ಯಾಮ್ ಉಂಟಾಗಿತ್ತು. ಬೆಳಗ್ಗೆ ಕಚೇರಿಗಳಿಗೆ ತೆರಳುವ ನೌಕರರು, ಶಾಲಾ- ಕಾಲೇಜು ವಿದ್ಯಾರ್ಥಿಗಳು ತೊಂದರೆ ಅನುಭವಿಸುವಂತಾಯಿತು.
ಬೆಳಗ್ಗೆ ನಾವು ಬಸ್ ಹಿಂಬದಿಯಲ್ಲೇ ಬರುತ್ತಿದ್ದೆವು. ಬಸ್ ನಿಧಾನವಾಗಿ ಸಾಗುತ್ತಿತ್ತು. ತೋರಣಮಾವು ಗ್ರಾಮದ ಬಳಿ ಬಸ್ನ ಬಲಭಾಗದ ಟೈರ್ ಏಕಾಏಕಿ ಕಳಚಿದ ಪರಿಣಾಮ ಬಸ್ ಒಂಡೆದೆ ವಾಲಿತು. ಚಾಲಕ ನಿಧಾನವಾಗಿ ಬಸ್ ಅನ್ನು ನಿಯಂತ್ರಿಸಿದ್ದರಿಂದ ಭಾರೀ ಅನಾಹುತ ತಪ್ಪಿದಂತಾಯಿತು ಎಂದು ಪ್ರತ್ಯಕ್ಷದರ್ಶಿ ಮೂರ್ತಿ ಪತ್ರಿಕೆಗೆ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ
Chikkamagaluru: ಎಟಿಎಂನಲ್ಲಿ ಅಗ್ನಿ ಅವಘಡ; ಸುಟ್ಟು ಕರಕಲಾದ ಲಕ್ಷ ಲಕ್ಷ ಹಣ
MUST WATCH
ಹೊಸ ಸೇರ್ಪಡೆ
ಮಗಳ ಪ್ರಕರಣ ದಿಕ್ಕು ತಪ್ಪುತ್ತಿದೆ ಎಂದಿದ್ದ ನೇಹಾಳ ತಂದೆ ರಾಜ್ಯ ಸರಕಾರದ ಕ್ಷಮೆ ಕೇಳಿದ್ದೇಕೆ?
ನೀತಿ ಸಂಹಿತೆ ನಡುವೆಯೂ ರಾಜ್ಯಕ್ಕೆ ನೆರವು ಎನ್ನುವ ಬಿಜೆಪಿಗೆ ನಾಚಿಕೆ ಇಲ್ಲವೇ? – ಖಂಡ್ರೆ
Gadaga: ಸೈಕ್ಲಿಸ್ಟ್ ಪವಿತ್ರಾ ಕುರ್ತಕೋಟಿ ಸೈಕ್ಲಿಂಗ್ ರಾಷ್ಟ್ರೀಯ ತರಬೇತಿ ಶಿಬಿರಕ್ಕೆ ಆಯ್ಕೆ
ಶರ್ಟ್ ಒಳಗೆ ಕಂತೆ ಕಂತೆ ನೋಟುಗಳನ್ನು ಬಚ್ಚಿಟ್ಟು ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದ ವ್ಯಕ್ತಿ!
ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ: ಜೈಲಿನಿಂದ ಬಿಡುಗಡೆಯಾದ ಆರೋಪಿಗಳಿಗೆ ಹೂಮಾಲೆ ಹಾಕಿ ಸ್ವಾಗತ