ಸಮಾಜಘಾತುಕ ಶಕ್ತಿಗಳ ಜೊತೆ ರಾಜಿ ಮಾಡಿ ಅಧಿಕಾರ ಮಾಡುವ ಪಕ್ಷ ನಮ್ಮದ್ದಲ್ಲ: ಸಿ ಟಿ ರವಿ
Team Udayavani, Aug 17, 2020, 3:52 PM IST
ಚಿಕ್ಕಮಗಳೂರು: ಸಮಾಜಘಾತುಕ ಶಕ್ತಿಗಳ ಜೊತೆಗೆ ರಾಜಿ ಮಾಡಿಕೊಂಡು ಅಧಿಕಾರ ಮಾಡುವ ಪಕ್ಷ ನಮ್ಮದ್ದಲ್ಲ. ಇಂತಹವರ ಜೊತೆಗೆ ರಾಜಿ ಇಲ್ಲವೇ ಇಲ್ಲ. ನಮ್ಮ ಪಕ್ಷ ಎಂದೂ ಲಾಭದ ರಾಜಕಾರಣ ಮಾಡುವುದಿಲ್ಲ ಎಂದು ಸಚಿವ ಸಿ ಟಿ ರವಿ ಹೇಳಿದ್ದಾರೆ.
ಬಾಳೆಹೊನ್ನೂರಿನಲ್ಲಿ ಮಾತನಾಡಿದ ಸಚಿವರು, ಬೆಂಗಳೂರು ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ 300ಕ್ಕೂ ಹೆಚ್ವು ಜನರ ಬಂಧನವಾಗಿದೆ. ಗಲಭೆ ಸಂಬಂಧ ಎಲ್ಲಾ ಮಾಹಿತಿ ಕಲೆ ಹಾಕುತ್ತಿದ್ದೇವೆ. ರಾಜಿಯಾಗಲು ಪಕ್ಷದ ಒಳಗೂ ಬಿಡಲ್ಲ, ಹೊರಗೂ ಬಿಡಲ್ಲ ಎಂದರು.
ಪೊಲೀಸರಿಂದ ಕಾರ್ಪೋರೇಟರ್ ಗಳಿಗೆ ನೋಟೀಸ್ ಹಿನ್ನಲೆಯಲ್ಲಿ ಸರ್ಕಾರದ ವಿರುದ್ಧ ಡಿ ಕೆ ಶಿವಕುಮಾರ್ ಅಸಮಾಧಾನ ತೋಡಿಕೊಂಡಿರುವ ಬಗ್ಗೆ ಮಾತನಾಡಿದ ಸಿಟಿ ರವಿ, ಡಿಕೆ ಶಿವಕುಮಾರ್ ಆರೋಪಿಸುವುದು ಅವರನ್ನು ಬೆಂಬಲಿಸುವಂತೆ ಕಾಣುತ್ತಿದೆ. ಇಲ್ಲಿ ಯಾರೂ ಕೆಲಸ ಇಲ್ಲದೆ ಕುಳಿತಿಲ್ಲ. ಅವರ ಪಕ್ಷದ ಶಾಸಕರ ಮನೆಯೇ ಧ್ವಂಸವಾಗಿದೆ. ಹೀಗಿರುವಾಗ ನನಗೆ ಡಿಕೆಶಿ ರಾಜಕಾರಣದ ದಾರಿ ಬಗ್ಗೆ ಅನುಮಾನವಿದೆ. ತನ್ನ ಪಕ್ಷದ ಶಾಸಕರಿಗಿಂತ ಸಮಾಜ ಘಾತುಕರೆ ಇವರಿಗೆ ದೊಡ್ಡದಾಗಿ ಹೋದರಾ ಎಂದು ಪ್ರಶ್ನಿಸಿದ ಅವರು, ಸಂಪನ್ನರಿಗೆ ಭಯಬೇಡ, ಕಳ್ಳರಿಗೆ ಬಲಿ ಹಾಕಿಯೇ ಹಾಕುತ್ತೇವೆ ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕಾಂಗ್ರೆಸ್ ಪಕ್ಷದ ಆಂತರಿಕ ಕಚ್ಚಾಟದಿಂದ ಬೆಂಗಳೂರು ಗಲಭೆ ನಡೆದಿದೆ: ಬಿ. ವೈ. ವಿಜಯೇಂದ್ರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್ಡಿಡಿ