ಹಣದಾಸೆಗೆ ಗೋಮಾಳವನ್ನೂ ನುಂಗಿದ ಅಧಿಕಾರಿಗಳು….!: ಸ್ಥಳೀಯರ ಆರೋಪ


Team Udayavani, Oct 19, 2021, 9:50 PM IST

chikkamagalore news

ಚಿಕ್ಕಮಗಳೂರು: ಮಲೆನಾಡಲ್ಲಿ ದನುಕರುಗಳು ಮೇಯಲು ಜಾಗವೇ ಇಲ್ಲ ಅಂದ್ರೆ ಯಾರೂ ನಂಬಲ್ಲ. ಆದರೆ, ಈಗ ಮಲೆನಾಡಲ್ಲಿ ನಿಜಕ್ಕೂ ಅಂತಹದ್ದೊಂದು ಸನ್ನಿವೇಶ ನಿರ್ಮಾಣವಾಗಿದೆ.

ದನಕರುಗಳ ಮೇವಿಗೆ ಜಾಗವೇ ಇಲ್ಲ. ಇದ್ದರೂ ತುಂಬಾ ವಿರಳ. ಗೋಮಾಳದಲ್ಲಿ ಸ್ವಚ್ಛಂದವಾಗಿ ಮೇಯುತ್ತಿದ್ದ ರಾಸುಗಳು ಹೊಲ-ಗದ್ದೆ, ತೋಟ, ರಸ್ತೆ ಬದಿ ಸೇರಿದಂತೆ ಅಲ್ಲಿ-ಇಲ್ಲಿ ಮೇಯುವಂತಹಾ ಸ್ಥಿತಿ ನಿರ್ಮಾಣವಾಗಿದೆ.

ಅಧಿಕಾರಿಗಳು ಹಣದ ಆಸೆಗೆ ಗೋಮಾಳವನ್ನೂ ದಾಖಲೆ ಮಾಡಿ ಕೊಡುತ್ತಿದ್ದಾರೆ ಎಂಬ ಗಂಭೀರ ಆರೋಪ ಅಧಿಕಾರಿಗಳ ಮೇಲಿದೆ. ಏಕೆಂದರೆ, ಜಿಲ್ಲೆಯ ಮೂಡಿಗೆರೆ ತಾಲೂಕಿನ ಗಬ್ಗಲ್ ಸುತ್ತಮುತ್ತ ದನಕರುಗಳ ಮೇವಿಗೆ ಇದ್ದ ಗೋಮಾಳ ಒತ್ತುವರೆಯಾಗಿದೆ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಹಾಗಾಗಿ, ದನಕರುಗಳು ರಸ್ತೆ ಬದಿಯಲ್ಲೇ ಮೇಯುವಂತಾಗಿದೆ. ಹೀಗೆ ಹಸಿರು ಕಂಡಲ್ಲಿ ಮೇಯುಲು ಹೋಗುವ ರಾಸುಗಳಿಂದ ಹೊಲ-ಗದ್ದೆ, ತೋಟಗಳು ಹಾಳಾಗುತ್ತಿದೆ. ಇದರಿಂದ ತೋಟದ ಮಾಲೀಕರು ಜಗಳಕ್ಕೆ ಬರುವುದು ಸರ್ವೇ ಸಾಮಾನ್ಯವಾಗಿದೆ.

ಹಾಗಾಗಿ,  ರಾಸುಗಳ ಕೊರಳಿಗೆ ದಪ್ಪನಾದ ಮರದ ತುಂಡನ್ನ ಕಟ್ಟುತ್ತಿದ್ದಾರೆ. ಹೀಗೆ ಕಟ್ಟಿದರೆ ರಾಸುಗಳು ರಸ್ತೆ ಬದಿಯಲ್ಲೇ ಮೇಯುತ್ತವೆ. ಬೇಲಿ ದಾಟಿಕೊಂಡು ತೋಟಗಳ ಒಳಗೆ ಹೋಗಲು ಆಗುವುದಿಲ್ಲ. ಹಾಗಾಗಿ, ಮೂಡಿಗೆರೆ ತಾಲೂಕಿನ ಹಲವು ಭಾಗದಲ್ಲಿ ರಾಸುಗಳ ಕೊರಳಲ್ಲಿ ಮರದ ತುಂಡು ಸಾಮಾನ್ಯವಾಗಿದೆ. ಇದಕ್ಕೆಲ್ಲಾ ಕಾರಣ ಗೋಮಾಳ ಒತ್ತುವರಿಯೇ ಎಂದು ಸ್ಥಳಿಯರು ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅಧಿಕಾರಿಗಳು ಹಣದ ಆಸೆಗೆ ಗೋಮಾಳವನ್ನು ಒತ್ತುವರಿ ಮಾಡಿದವರಿಗೆ ದಾಖಲೆ ನಿರ್ಮಿಸಿ ಕೊಡುತ್ತಿದ್ದಾರೆ. ಇದರಿಂದ ರಾಸುಗಳ ಮೇವಿಗೆ ಜಾಗವಿಲ್ಲ ಎಂದು ಸ್ಥಳಿಯರು ಆರೋಪಿಸಿದ್ದಾರೆ.

ಇದನ್ನೂ ಓದಿ:ದಸರಾ ಹಾಗೂ ನಂತರದ ಹಿಂಸಾಚಾರ ಪ್ರಕರಣ : ಬಾಂಗ್ಲಾದಲ್ಲಿ 450 ಮಂದಿ ಅರೆಸ್ಟ್‌ 

ಮಲೆನಾಡಲ್ಲಿ ಯತೇಚ್ಛವಾಗಿ ಅರಣ್ಯವಿದೆ. ಅರಣ್ಯದಲ್ಲಿ ಮೇವಿಗೆ ಹೋದರೆ ರಾಸುಗಳು ವಾಸಪ್ ಮನೆಗೆ ಬರುವುದು ಅನುಮಾನ. ಕಾಡುಪ್ರಾಣಿಗಳಿಗೆ ಆಹಾರವಾಗುತ್ತದೆ. ಇದ್ದ ಗೋಮಾಳವೂ ಒತ್ತುವರೆಯಾಗಿರೋದು ರೈತರು ರಾಸುಗಳನ್ನ ಸಾಕುವುದು ಕಷ್ಟಸಾಧ್ಯವಾಗಿದೆ. ಇನ್ನು ಒಂದು ಹಳ್ಳಿ, ಗ್ರಾಮ ಪಂಚಾಯಿತಿ ಅಂದಾಗ ಇಷ್ಟೆ ಪ್ರಮಾಣದ ಗೋಮಾಳ ಇರಬೇಕೆಂದು ಕಾನೂನು ಇದೆ. ಆದರೆ, ಆ ಪ್ರಮಾಣದಲ್ಲಿ ಗೋಮಾಳ ಇಲ್ಲದಂತಾಗಿದೆ.

ಅಧಿಕಾರಿಗಳು ಸರ್ಕಾರದ ಆದೇಶವನ್ನ ಮಲೆನಾಡ ತಣ್ಣನೆಯ ಗಾಳಿಯಲ್ಲಿ ತೂರಿ ಗೋಮಾಳ ಒತ್ತುವರಿಗೂ ದಾಖಲೆ ಮಾಡಿ ಕೊಟ್ಟಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.

ಮೊದಮೊದಲು ಗೋಮಾಳವನ್ನು ಒತ್ತುವರಿ ಮಾಡಿ ತೋಟ ಮಾಡುತ್ತಿದ್ದರು. ತದನಂತರ ಅಧಿಕಾರಿಗಳು ರೆಕಾರ್ಡ್ ಮಾಡಿಕೊಡುತ್ತಿದ್ದರು. ಆದರೆ, ಈಗ ಮೊದಲು ಗೋಮಾಳಕ್ಕೆ ದಾಖಲೆ ಮಾಡಿಕೊಡುತ್ತಿದ್ದಾರೆ. ನಂತರ ಅಲ್ಲಿ ತೋಟ ಮಾಡುತ್ತಿದ್ದಾರೆಂಬ ಆರೋಪವೂ ಇದೆ.

ರಾಸುಗಳ ಭೂಮಿಯನ್ನು ಉಳಿಸಬೇಕಾದವರೇ ಇಂದು ಹಣದ ಆಸೆಗೆ  ದಾಖಲೆ ಮಾಡಿಕೊಡುತ್ತಿರುವುದರಿಂದ ರಾಸುಗಳ ಮೇವಿಗೆ ಜಾಗವಿಲ್ಲದಂತಾಗಿದೆ. ರಾಸುಗಳು ಎಲ್ಲೆಂದರಲ್ಲಿ ಮೇಯಲು ಹಾಗೂ ದನಗಳ್ಳರ ಪಾಲಾಗುತ್ತಿವೆ. ಹಾಗಾಗಿ, ತಾಲೂಕು ಹಾಗೂ ಜಿಲ್ಲಾಡಳಿತ ಗೋಮಾಳದ ಭೂಮಿಯತ್ತ ಗಮನ ಹರಿಸಿ ರಾಸುಗಳನ್ನು ಜಾಗವನ್ನು ಉಳಿಸಬೇಕೆಂದು ಸ್ಥಳಿಯರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್‌ ಹೆಗ್ಡೆ: ವಿಠಲ ಹೆಗ್ಡೆ

4-chikkamagaluru

Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

Udupi-Chikmagalur Poll: ಬ್ರಹ್ಮಾವರ ಬ್ಲಾಕ್‌ ಕಾಂಗ್ರೆಸ್‌ ಸಮಿತಿ- ಇಂದು ಸಾರ್ವಜನಿಕ ಸಭೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.