ಕಾಂಗ್ರೆಸ್ ಪಕ್ಷ ಸವಕಲು ನಾಣ್ಯ: ಸಿ.ಟಿ.ರವಿ
Team Udayavani, Dec 26, 2021, 3:22 PM IST
ಚಿಕ್ಕಮಗಳೂರು: ಕಾಂಗ್ರೆಸ್ ಪಕ್ಷ ಸವಕಲು ನಾಣ್ಯದಂತಾಗಿದೆ.ಅವರ ನಿಲುವುಗಳೇ ಅವರಿಗೆ ಮಾರಕವಾಗಿವೆ ಎಂದುಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿಹೇಳಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದಅವರು, ಮುಂದಿನ ಚುನಾವಣೆಯನ್ನು ಸಿದ್ದರಾಮಯ್ಯ,ಡಿ.ಕೆ.ಶಿವಕುಮಾರ್, ಪರಮೇಶ್ವರ್ಅಥವಾ ಸೋನಿಯಾ ಗಾಂ ಧಿ ನೇತೃತ್ವದಲ್ಲಿ ನಡೆಸಿದರೂ ಅ ಧಿಕಾರಕ್ಕೆ ಬರಲುಸಾಧ್ಯವಿಲ್ಲ ಎಂದು ಭವಿಷ್ಯ ನುಡಿದರು.ಕಾಂಗ್ರೆಸ್ ತತ್ವ ಮತ್ತು ನಿಲುವು ಜನಹಿತಕ್ಕೆಮಾರಕ. ಅದು ಕೇವಲ ಓಲೈಕೆಗೆ ಸೀಮಿತವಾಗಿದೆ.
ಈ ಹಿನ್ನೆಲೆಯಲ್ಲಿಅವರಿಗೆ ಹಿನ್ನಡೆಯಾಗುತ್ತದೆ. ಮಾಜಿಮುಖ್ಯಮಂತ್ರಿ ಸಿದ್ದರಾಮಯ್ಯಅವರು 2016 ರಲ್ಲಿ ಮತಾಂತರನಿಷೇಧ ಕಾಯ್ದೆ ಕರಡಿಗೆ ಸಹಿಹಾಕಿದ್ದಾರೆ. ಇದನ್ನು ಒಪ್ಪದ ಅವರುನಾನು ಸಹಿ ಹಾಕಿಲ್ಲ, ತೋರಿಸಿ ಎಂದರು. ದಾಖಲೆ ಸಹಿತತೋರಿಸಿದಾಗ ನನಗೆ ಗೊತ್ತಿಲ್ಲದೇ ಸಹಿ ಹಾಕಿದ್ದೇನೆ ಎಂದರು.ಹೆಬ್ಬೆಟ್ಟು ಒತ್ತುವವರಾದರೂ ಏನು ಎಂದು ತಿಳಿದುಕೊಂಡೇಹೆಬ್ಬೆಟ್ಟು ಒತ್ತುತ್ತಾರೆ.
ಆದರೆ ಸಿದ್ದರಾಮಯ್ಯ ಗೊತ್ತಿಲ್ಲದೇಸಹಿ ಹಾಕಿದ್ದೇನೆ ಎನ್ನುತ್ತಿರುವುದು ಅವರ ನಾಟಕ ಎಂದುವ್ಯಂಗ್ಯವಾಡಿದರು. ಮೇಕೆದಾಟು ವಿಚಾರದಲ್ಲಿ ಕಾಂಗ್ರೆಸ್ಪಾದಯಾತ್ರೆ ಕುರಿತು ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ರಾಜಕೀಯ ಪಕ್ಷವಾಗಿ ಪಾದಯಾತ್ರೆ, ಉರುಳುಸೇವೆ ಏನುಬೇಕಾದರೂ ಮಾಡಿಕೊಳ್ಳಲಿ. ಆದರೆ, ಅವರಿಗೆ ಬದ್ಧತೆ ಇಲ್ಲ.ಕೇಂದ್ರದಲ್ಲಿ 2004 ರಿಂದ 2014ರ ವರೆಗೆ ಕಾಂಗ್ರೆಸ್ ಸರ್ಕಾರಇತ್ತು. ಆಗ ಏಕೆ ಅನುಮತಿ ನೀಡಲಿಲ್ಲ. ಈಗ ರಾಜಕೀಯನಾಟಕ ಆಡುತ್ತಿದ್ದಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್ಡಿಡಿ
MUST WATCH
ಹೊಸ ಸೇರ್ಪಡೆ
LS Polls 2024: ಸುಮಲತಾ ಪ್ರಚಾರಕ್ಕೆ ಬರುವುದು ರಾಜ್ಯ ನಾಯಕರ ತೀರ್ಮಾನ: ನಿಖಿಲ್
R. Ashok: ಬಿಜೆಪಿಯಲ್ಲಿ ಈಶ್ವರಪ್ಪನವರದು ಮುಗಿದ ಅಧ್ಯಾಯ: ಅಶೋಕ್
Dr. K Sudhakar: ಭ್ರಷ್ಟಾಚಾರದಿಂದಲೇ ಸಿದ್ದು ಸೋತಿದ್ದಾ?: ಸುಧಾಕರ್
CN Ashwath Narayan: ಕಾಂಗ್ರೆಸ್ನಿಂದ ನಿತ್ಯ ತುಷ್ಟೀಕರಣ ರಾಜಕಾರಣ; ಅಶ್ವತ್ಥನಾರಾಯಣ
Thirthahalli;ಮಳೆಯ ಅಬ್ಬರಕ್ಕೆ ಮೊದಲ ಬಲಿ: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್