ಮೂಲ ಸೌಕರ್ಯ ಅಭಿವೃದ್ಧಿಗೆ ಆದ್ಯತೆ
Team Udayavani, Feb 16, 2022, 2:48 PM IST
ಚಿಕ್ಕಮಗಳೂರು: ನಗರದಲ್ಲಿ ಮೂಲ ಸೌಲಭ್ಯಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದುನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ತಿಳಿಸಿದರು.
ಬುಧವಾರ ನಗರದಲ್ಲಿ ನಗರಸಭೆ ವತಿಯಿಂದತ್ಯಾಜ್ಯ ಸಂಗ್ರಹಣೆಗೆ ಖರೀದಿಸಿದ ನೂತನ ಜೆಸಿಬಿಯಂತ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸಮರ್ಪಕ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಮಾಡುವ ನಿಟ್ಟಿನಲ್ಲಿ ನಗರಸಭೆಯಿಂದ 33 ಲಕ್ಷ ರೂ.ವೆಚ್ಚದಲ್ಲಿ ನೂತನ ಜೆಸಿಬಿ ಯಂತ್ರ ಖರೀದಿಸಲಾಗಿದೆ.ನಗರಸಭೆಗೆ ಚುನಾಯಿತ ಪ್ರತಿನಿಧಿ ಗಳುಆಯ್ಕೆಯಾದ ಬಳಿಕ ಸಾಕಷ್ಟು ಅಭಿವೃದ್ಧಿ ಕೆಲಸಗಳಿಗೆಚಾಲನೆ ನೀಡಲಾಗುತ್ತಿದೆ ಎಂದರು.
ನಗರದಲ್ಲಿ 13 ಅಂಗನವಾಡಿ ಕೇಂದ್ರಗಳಪ್ರಾರಂಭಕ್ಕೆ ಶಂಕುಸ್ಥಾಪನೆ ನೆರವೇರಿಸಲಾಗಿದೆ.ನಗರವನ್ನು ಸ್ವತ್ಛ ಹಾಗೂ ಸುಂದರಗೊಳಿಸಲುನಗರಸಭೆ ಸದಸ್ಯರು ನಿರ್ಣಯ ಕೈಗೊಂಡಿದ್ದು,ಸಾರ್ವಜನಿಕರು ಕೈಜೋಡಿಸಬೇಕು ಎಂದುತಿಳಿಸಿದರು.ನಗರಸಭೆ ಪೌರಾಯುಕ್ತ ಬಿ.ಸಿ.ಬಸವರಾಜ್ಮಾತನಾಡಿ, ಅಭಿವೃದ್ಧಿ ಕಾರ್ಯವೈಖರಿಗಳನ್ನುಗಮನಿಸಿ ಅಮೃತ ನಿರ್ಮಲ ನಗರಯೋಜನೆಯಡಿ ರಾಜ್ಯ ಸರ್ಕಾರವು ನಗರಸಭೆ1ಕೋಟಿ ಅನುದಾನ ನೀಡಿದೆ.
32 ಲಕ್ಷ ರೂ.ಇಂದಾವರ ಘನತ್ಯಾಜ್ಯ ವಿಲೇವಾರಿ ಸ್ಥಳಕ್ಕೆಅನುಕೂಲವಾಗುವಂತೆ ನೂತನ ಜೆಸಿಬಿ ಯಂತ್ರಖರೀದಿಸಲಾಗಿದೆ ಎಂದರು.ನಗರಸಭೆ ಸದಸ್ಯೆ ಸುಜಾತ ಶಿವಕುಮಾರ್,ಕವಿತಾಶೇಖರ್, ಮಧು ಕುಮಾರ್ ರಾಜ್ ಅರಸ್,ಸಿ.ಎಂ.ಕುಮಾರ್, ರಾಜು, ಅಮೃತೇಶ್ ಚೆನ್ನಕೇಶವ,ಪರಮೇಶ್ರಾಜ್ ಅರಸ್, ಸೈಯದ್ ಜಾವಿದ್,ಲಲಿತಾ, ಕಂದಾಯಾ ಧಿಕಾರಿ ಬಸವರಾಜ್,ಇಂಜಿನಿಯರ್ ಚಂದನ್, ವೆಂಕಟೇಶ್ ಇತರರುಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BJP ಮೋದಿ ಮಾಡೆಲ್ ಹೆಸರಿನಲ್ಲಿ ಚೊಂಬಿನ ಮಾಡೆಲ್ ನೀಡಿದೆ: ಸುರ್ಜೇವಾಲ
Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ
Lok Sabha Election: ಉಡುಪಿ- ಜಯಪ್ರಕಾಶ್ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ
B Y Vijayendra: ಕಾಂಗ್ರೆಸ್ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?
Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ