ಋಷಿಕುಮಾರ ಸ್ವಾಮೀಜಿಗೆ ಭದ್ರತೆ ಒದಗಿಸಲು ಆಗ್ರಹ
Team Udayavani, Feb 18, 2022, 3:47 PM IST
ಚಿಕ್ಕಮಗಳೂರು: ಹಿಜಾಬ್ ಸಂಬಂಧನ್ಯಾಯಾಲಯದ ಮಧ್ಯಂತರಆದೇಶ ಪಾಲಿಸದವರ ಮೇಲೆ ಕ್ರಮಕೈಗೊಳ್ಳುವಂತೆ ಮತ್ತು ಶ್ರೀ ಋಷಿಕುಮಾರಸ್ವಾಮೀಜಿ ಅವರಿಗೆ ಭದ್ರತೆ ಒದಗಿಸುವಂತೆಆಗ್ರಹಿಸಿ ಶ್ರೀರಾಮ ಸೇನೆ ಮುಖಂಡರುಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ನಗರದಲ್ಲಿ ಗುರುವಾರ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪಾ ಅವರಿಗೆ ಈಸಂಬಂಧ ಮನವಿ ಸಲ್ಲಿಸಿ ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಮಾತನಾಡಿ, ಮುಸ್ಲಿಂ ಸಮುದಾಯದವಿದ್ಯಾರ್ಥಿನಿಯರು ಹಿಜಾಬ್ ಧರಿಸುವವಿವಾದ ಸಂಬಂಧ ನ್ಯಾಯಾಲಯಮಧ್ಯಂತರ ಆದೇಶವನ್ನು ನೀಡಿದೆ.
ನ್ಯಾಯಾಲಯದ ಆದೇಶವನ್ನು ಹಿಂದೂವಿದ್ಯಾರ್ಥಿಗಳು ಪಾಲಿಸುತ್ತಿದ್ದಾರೆ.ಆದರೆ ಮುಸ್ಲಿಂ ವಿದ್ಯಾರ್ಥಿನಿಯರುನ್ಯಾಯಾಲಯದ ಆದೇಶ ಪಾಲಿಸುತ್ತಿಲ್ಲಎಂದು ದೂರಿದರು.ವಿವಾದವನ್ನು ಮುಂದಿಟ್ಟುಕೊಂಡುಸಮಾಜದಲ್ಲಿ ಅಶಾಂತಿ ಉಂಟುಮಾಡಲಾಗುತ್ತಿದೆ. ನ್ಯಾಯಾಲಯದಆದೇಶವಿದ್ದರೂ ಹಿಜಾಬ್ ಧರಿಸಿ ಶಾಲಾಕಾಲೇಜಿಗೆ ಬರುವುದು ನ್ಯಾಯಾಲಯದಆದೇಶ ಉಲ್ಲಂಘನೆಯಾಗಿದ್ದು, ಇಂತವರಮೇಲೆ ಕಾನೂನು ಕ್ರಮ ಕೈಗೊಳ್ಳಬೇಕುಎಂದು ಆಗ್ರಹಿಸಿದರು.
ಜಿಲ್ಲೆಯ ಸಖರಾಯಪಟ್ಟಣ ಹೋಬಳಿಯ ಕಾಳಿಮಠದ ಶ್ರೀಋಷಿಕುಮಾರ ಸ್ವಾಮೀಜಿ ಹಿಂದೂಗಳಪರ ಅನೇಕ ಹೋರಾಟವನ್ನು ಮಾಡಿಕೊಂಡು ಬಂದಿದ್ದು, ಅನ್ಯಧರ್ಮಿಯರಿಂದ ಬೆದರಿಕೆ ಕರೆಗಳುಬರುತ್ತಿವೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ಅವರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ದುರ್ಗಾಸೇನಾತಾಲೂಕು ಅಧ್ಯಕ್ಷೆ ನವೀನ, ಶ್ರೀರಾಮಸೇನೆಜಿಲ್ಲಾ ಉಪಾಧ್ಯಕ್ಷ ದಿಲೀಪ್ ಶೆಟ್ಟಿ,ಪುನೀತ್, ಯಶ್ವಂತ್, ಜ್ಞಾನೇಂದ್ರ, ಅಭಿ,ಮಂಜು ಇತರರಿದ್ದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್ ಕಾಲೇಜು: ಜಯಪ್ರಕಾಶ್ ಹೆಗ್ಡೆ
Chikkamagaluru; ದೇವೇಗೌಡರು ಆಕಸ್ಮಿಕವಾಗಿ ಪ್ರಧಾನಿಯಾಗಿದ್ದು…: ಸಿಎಂ ಸಿದ್ದರಾಮಯ್ಯ
Chikkamagaluru: ಎಟಿಎಂನಲ್ಲಿ ಅಗ್ನಿ ಅವಘಡ; ಸುಟ್ಟು ಕರಕಲಾದ ಲಕ್ಷ ಲಕ್ಷ ಹಣ
MUST WATCH
ಹೊಸ ಸೇರ್ಪಡೆ
Haveri Lok Sabha constituency: “ಮೇ 7 ರಂದು ತಪ್ಪದೇ ಮತದಾನ ಮಾಡಿ’
Neha ಕೊಲೆ ಆರೋಪಿ ನಿರ್ದೋಷಿಯಾಗಿ ಹೊರಗೆ ಬಂದ್ರೆ ನಾವೇ ಶಿಕ್ಷೆ ಕೊಟ್ಟು ಜೈಲಿಗೆ ಹೋಗಲು ಸಿದ್ಧ
ನೇಹಾ ಪ್ರಕರಣವನ್ನು ರಾಜಕೀಯಕ್ಕೆ ಬಳಸುವಂತಹ ನೀಚತನಕ್ಕೆ ಬಿಜೆಪಿ ಇಳಿದಿದೆ-ಚನ್ನರಾಜ ಹಟ್ಟಿಹೊಳಿ
Belagavi Lok sabha: ಧರ್ಮಯುದ್ಧಕ್ಕಿಂತ ಮೊದಲೇ ದಿಂಗಾಲೇಶ್ವರ ಶ್ರೀ ಶಸ್ತ್ರತ್ಯಾಗ!
Hubballi: ಮೂವರು ನಕಲಿ ಸಿಐಡಿ ಅಧಿಕಾರಿಗಳ ಬಂಧನ… ಮೊಬೈಲ್, ಬೈಕ್ ವಶ