ಮೆಸ್ಕಾಂ ಬಿಲ್ ತನಿಖೆ ನಡೆಸಿ: ರವಿ
Team Udayavani, Jun 8, 2022, 5:04 PM IST
ಚಿಕ್ಕಮಗಳೂರು: ತಾಲೂಕಿನ ಮರ್ಲೆ ಪಂಚಾಯತ್ವ್ಯಾಪ್ತಿಯಲ್ಲಿ 8 ಕೊಳವೆ ಬಾವಿಗಳನ್ನುಕೊರೆಸಲಾಗಿದ್ದು, ವಿದ್ಯುತ್ ಸಂಪರ್ಕ ನೀಡಿಲ್ಲ.ಮೆಸ್ಕಾಂ ಇಲಾಖೆಯಿಂದ ಬಿಲ್ ಬಂದಿದ್ದು ಈಸಂಬಂಧ ತನಿಖೆ ನಡೆಸುವಂತೆ ಶಾಸಕ ಸಿ.ಟಿ. ರವಿಸಂಬಂಧಪಟ್ಟ ಅ ಧಿಕಾರಿಗೆ ಸೂಚಿಸಿದರು.
ಮಂಗಳವಾರ ನಗರದ ತಾಪಂ ಸಭಾಂಗಣದಲ್ಲಿನಡೆದ ತ್ತೈಮಾಸಿಕ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರುಮಾತನಾಡಿದರು. ಮರ್ಲೆ ಪಂಚಾಯತ್ವ್ಯಾಪ್ತಿಯಲ್ಲಿ 8 ಕೊಳವೆ ಬಾವಿ ಕೊರೆಯಲಾಗಿದೆ.ವಿದ್ಯುತ್ ಸಂಪರ್ಕ ನೀಡಲಾಗಿಲ್ಲ, ಮೆಸ್ಕಾಂಇಲಾಖೆಯಿಂದ ಬಿಲ್ ಬಂದಿದೆ ಎಂದು ಕೆಡಿಪಿಸಭೆಯ ನಾಮಕರಣ ಸದಸ್ಯ ರಾಜು ಸಭೆಯಗಮನಕ್ಕೆ ತಂದರು.
ವಿದ್ಯುತ್ ಸಂಪರ್ಕ ನೀಡದೆಬಿಲ್ ಬರಲು ಸಾಧ್ಯವಿಲ್ಲ. ಈ ಸಂಬಂಧ ತನಿಖೆನಡೆಸುವಂತೆ ಶಾಸಕ ಸಿ.ಟಿ. ರವಿ ಜಿಲ್ಲಾ ಧಿಕಾರಿಗಳಿಗೆಸೂಚಿಸಿದರು.ತಾಲೂಕಿನಲ್ಲಿ 181 ಸ್ಮಶಾನ ಭೂಮಿಒತ್ತುವರಿಯಾಗಿದ್ದು, 96 ಒತ್ತುವರಿತೆರವುಗೊಳಿಸಲು ಬಾಕಿ ಇದೆ ಎಂದು ಇಲಾಖೆ ಅಧಿಕಾರಿ ಸಭೆಯ ಗಮನಕ್ಕೆ ತಂದರು. ಸ್ಮಶಾನ ಭೂಮಿಒತ್ತುವರಿಯನ್ನು 3 ತಿಂಗಳಲ್ಲಿ ತೆರವುಗೊಳಿಸಬೇಕುಹಾಗೂ ಸ್ಮಶಾನ ಇಲ್ಲದ ಗ್ರಾಮಗಳನ್ನು ಗುರುತಿಸಿವರದಿ ನೀಡುವಂತೆ ಸಿ.ಟಿ. ರವಿ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ
Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ
Gobi Manchurian ಬ್ಯಾನ್ ಎಫೆಕ್ಟ್: ಚಾಟ್ಸ್ ಮಾರಾಟ ಕುಸಿತ
Book Brahma ಸ್ವಾತಂತ್ರ್ಯೋತ್ಸವ ಕಥಾ ಸ್ಪರ್ಧೆ, ಕಾದಂಬರಿ ಪುರಸ್ಕಾರ- 2024: ವಿವರಗಳು
Toravi Narasimha Temple: ಮನೆದೇವರ ದರ್ಶನ ಪಡೆದ ಸಚಿವ ಪ್ರಹ್ಲಾದ ಜೋಶಿ