ಸಾಂತರಸರ ಕಾಲದ ವೀರಗಲ್ಲು ಪತ್ತೆ

ಹವ್ಯಾಸಿ ಇತಿಹಾಸ ಸಂಶೋಧಕರಾದ ಎಚ್‌.ಆರ್‌.ಪಾಂಡುರಂಗರಿಂದ ಶೋಧ ಕಾರ್ಯ

Team Udayavani, May 10, 2021, 10:50 PM IST

10-18

ಬಾಳೆಹೊನ್ನೂರು: ಸಮೀಪದ ಬನ್ನೂರು ಗ್ರಾಪಂ ವ್ಯಾಪ್ತಿಯ ಹಲಸೂರಿನ ಕೊಳಲೆ ಮರಿಗೌಡರ ಕಾಫಿತೋಟದ ಹಿಂಭಾಗದಲ್ಲಿ ಹೊಯ್ಸಳರ ಮಾಂಡಲಿಕರಾದ ಕಳಸ ರಾಜ್ಯದ ಸಾಂತರ ದೊರೆಗಳ ಆಡಳಿತದ ಹನ್ನೆರಡನೇ ಶತಮಾನದ ಕಾಲದ್ದಾಗಿರಬಹುದಾದ ಮಲ್ಲಯುದ್ಧದ ಚಿತ್ರಣವಿರುವ ಅಪರೂಪದ ಎರಡು ವೀರಗಲ್ಲು ಸ್ಮಾರಕಗಳನ್ನು ಹವ್ಯಾಸಿ ಇತಿಹಾಸ ಸಂಶೋಧಕರಾದ ಎಚ್‌.ಆರ್‌.ಪಾಂಡುರಂಗ ಅವರು ಇತ್ತೀಚೆಗೆ ಸಂಶೋಧನೆ ಮಾಡಿ ಅಧ್ಯಯನ ನಡೆಸಿ ಪ್ರಾಚೀನ ಹಲಸೂರು (ಬಾಳೆಹೊನ್ನೂರು) ಪ್ರದೇಶದ ಇತಿಹಾಸದ ಮೇಲೆ ಹೊಸಬೆಳಕು ಚೆಲ್ಲಿದ್ದಾರೆ.

ಹಲಸೂರಿನ ಜನರು ಗ್ರಾಮದೇವತೆಗಳೆಂದು ಭಯ, ಭಕ್ತಿಯಿಂದ ಆರಾ ಸುವ ಶ್ರೀ ಕನ್ನಮ್ಮ- ಶ್ರೀ ಕಾಳಮ್ಮ ಎಂಬ ಅಕ್ಕ-ತಂಗಿ ದೈವಗಳೇ ಈ ಜೋಡಿ ವೀರಗಲ್ಲುಗಳಾಗಿವೆ. ಲತಾಮಂಟಪದ ವೇದಿಕೆಯ ಮೇಲಿರುವ ಎಡಭಾಗದ ಒಂದನೇ ವೀರಗಲ್ಲು 5.9 ಅಡಿ ಎತ್ತರ,3.00ಅಡಿ ಅಗಲ,0.10 ಅಡಿ ಅಳತೆಯ ಬಳಪದ ಕಲ್ಲಿನ ಈ ವೀರಗಲ್ಲು ನಾಲ್ಕು ಹಂತದ ಚಿತ್ರಣ ಹೊಂದಿದೆ. ಕೆಳಹಂತದಲ್ಲಿ ರಾಜಛತ್ರಿ ಸಹಿತ ವೀರನೊಬ್ಬ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೊರಟ ಬಲಭಾಗದ ಚಿತ್ರಣ ಹಾಗೂ ಎಡಭಾಗದಲ್ಲಿ ಮಲ್ಲಯುದ್ಧದಲ್ಲಿ ತೊಡಗಿದ ಮಲ್ಲರಿಬ್ಬರ ವಿಶಿಷ್ಟ ಹೋರಾಟದ ಭಂಗಿಯ ಚಿತ್ರಣವಿದೆ.

ಎರಡನೇ ಹಂತದಲ್ಲಿ ರಾಜಛತ್ರಿ ಸಹಿತ ಬಿಲ್ಲುಗಾರ ವೀರ ಆನೆಮೇಲೆ ಕುಳಿತು ಯುದ್ಧ ಮಾಡುವ ಚಿತ್ರಣ. ಮೂರನೇ ಹಂತದಲ್ಲಿ ನಾಲ್ಕು ಜನ ದೇವಕನ್ಯೆಯರು ಯುದ್ಧದಲ್ಲಿ ವೀರಮರಣ ಹೊಂದಿದ ಗಜಪಡೆಯ ಬಿಲ್ಗಾರ ಯೋಧನನ್ನು ದೇವಲೋಕ (ಶಿವಸಾನಿಧ್ಯ)ಕ್ಕೆ ಕರೆದೊಯ್ಯುವ ಚಿತ್ರಣ. ವೀರಗಲ್ಲಿನ ಅಗ್ರ ಭಾಗದಲ್ಲಿ ಲಿಂಗಾರ್ಚನೆ ಮಾಡುತ್ತಿರುವ ಜಟಧಾರಿ ಕಾಳಾಮುಖಯತಿ, ಹಸುಕರು, ನಂದಿ ಹಾಗೂ ಮೇಲ್ಭಾಗದಲ್ಲಿ ಸೂರ್ಯಚಂದ್ರರ ಚಿತ್ರಣವಿದೆ.

ಈ ಶಾಸನ ರಹಿತ ವೀರಗಲ್ಲು ಸಾಂತರರ ಕಾಲದಲ್ಲಿ ನಡೆದ ಯಾವುದೋ ಯುದ್ಧದಲ್ಲಿ ಮರಣ ಹೊಂದಿದ ಸೇನಾಪತಿಯೊಬ್ಬನ ವೀರಮರಣದ ವಿಶಿಷ್ಟ ಸ್ಮಾರಕವಾಗಿದೆ ಎಂದು ಸಂಶೋಧಕ ಪಾಂಡುರಂಗ ಹೇಳುತ್ತಾರೆ.

ಬಲಭಾಗದ ಎರಡನೇ ವೀರಗಲ್ಲು: 5.9 ಅಡಿ ಎತ್ತರ 2.9 ಅಡಿ ಅಗಲ, 0.5 ಇಂಚು ದಪ್ಪ ಅಳತೆಯ ಬಳಪದ ಕಲ್ಲಿನ ಈ ವೀರಗಲ್ಲು ಸಹ ನಾಲ್ಕು ಹಂತದ ಚಿತ್ರಣ ಹೊಂದಿದೆ. ಕೆಳಹಂತದ ಬಲಭಾಗದಲ್ಲಿ ಇಬ್ಬರು ಯೋಧರು ಧನುರ್ಧಾರಿಗಳಾಗಿ ಯುದ್ಧಕ್ಕೆ ಹೋಗುತ್ತಿರುವ ಚಿತ್ರಣ ಹಾಗೂ ಎಡಭಾಗದಲ್ಲಿ ಇಬ್ಬರು ಮಲ್ಲರ ಮಲ್ಲಯುದ್ಧದ ವಿಶಿಷ್ಟ ಭಂಗಿಯ ಹೋರಾಟದ ಚಿತ್ರಣ. ಎರಡನೇ ಹಂತದಲ್ಲಿ ರಾಜಛತ್ರಿ ಸಹಿತ ರಾಜಪ್ರಮುಖ ಅಥವಾ ಸೇನಾಪತಿ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೋಗುತ್ತಿರುವ ಚಿತ್ರಣವಿದೆ. ಮೂರನೇ ಹಂತದಲ್ಲಿ ಪಲ್ಲಕ್ಕಿಯಲ್ಲಿ ಕುಳಿತು ಯುದ್ಧಕ್ಕೆ ಹೋಗಿದ್ದ ಧನುರ್ಧಾರಿ ವೀರ ಕಾಳಗದಲ್ಲಿ ವೀರಮರಣ ಹೊಂದಿದ ನಿಮಿತ್ತ ನಾಲ್ವರು ದೇವ ಕನ್ಯೆಯರು ಅವನನ್ನು (ಶಿವಸಾನಿಧ್ಯ) ಕ್ಕೆ ಕರೆದೊಯ್ಯವ ಚಿತ್ರಣವಿದೆ. ವೀರಗಲ್ಲಿನ ಅಗ್ರಭಾಗದಲ್ಲಿ ಲಿಂಗಾರ್ಚನೆ ಮಾಡುತ್ತಿರುವ ಜಟಾಧಾರಿ ಕಾಳಾಮುಖ ಶೈವಯತಿ, ಹಸುಕರು, ಶಿವಗಣ ನಂದೀಶ್ವರ ಹಾಗೂ ಮೇಲೆ ಸೂರ್ಯಚಂದ್ರರ ಚಿತ್ರಣವಿದೆ. ಈ ಶಾಸನರಹಿತ ವೀರಗಲ್ಲೂ ಸಹಾ ಸಾಂತರಸರ ಕಾಲದಲ್ಲಿ ನಡೆದ ಯಾವುದೋ ಯುದ್ಧದಲ್ಲಿ ವೀರಮರಣ ಹೊಂದಿದ ಸೇನಾಪತಿಯೊಬ್ಬನ ವೀರಮರಣದ ವಿಶಿಷ್ಟ ಸ್ಮಾರಕವಾಗಿದೆಯೆಂದು ಸಂಶೋಧಕ ಪಾಂಡುರಂಗ ತಿಳಿಸಿದರು.

ವೀರಗಲ್ಲು ಗಳ ಕ್ಷೇತ್ರಕಾರ್ಯದಲ್ಲಿ ಆಟೋ ಸತೀಶ್‌ ಹಲಸೂರು, ಆಟೋ ಕಿರಣ್‌ ,ಗೊಡ್ಲುಗದ್ದೆ ಲಕ್ಷ್ಮಣ ಗೌಡ, ಆಯೂರು ರಾಘವೇಂದ್ರ ಭಟ್‌, ಅರ್ಚಕ ಎಚ್‌. ಎಸ್‌. ಸುಬ್ರಹ್ಮಣ್ಯ ಭಟ್‌ ಸಹಕಾರ ನೀಡಿದರು. ಇತಿಹಾಸ ವಿದ್ವಾಂಸರಾದ ಡಾ| ಆರ್‌. ಶೇಷಶಾಸ್ತ್ರಿ , ಡಾ| ಎಂ.ಜಿ. ಮಂಜುನಾಥ್‌, ಡಾ| ಎಚ್‌.ಎಸ್‌. ಗೋಪಾಲ ರಾವ್‌ ಅವರು ಅಧ್ಯಯನಕ್ಕೆ ಮಾರ್ಗದರ್ಶನ ನೀಡಿದ್ದಾರೆ ಎಂದು ಸಂಶೋಧಕ ಎಚ್‌.ಆರ್‌. ಪಾಂಡುರಂಗ ತಿಳಿಸಿದ್ದಾರೆ.

ಟಾಪ್ ನ್ಯೂಸ್

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

 Lok Sabha Election: ಉಡುಪಿ- ಜಯಪ್ರಕಾಶ್‌ ಹೆಗ್ಡೆ ಬಿರುಸಿನ ಪ್ರಚಾರ, ದೇವಾಲಯಕ್ಕೆ ಭೇಟಿ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

Election 2024: ಕೋಟಾ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್‌ಡಿಡಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.