ಹಸುಗಳೊಂದಿಗೆ ಬಂದ ಜಿಂಕೆ ಮರಿ!
Team Udayavani, May 30, 2021, 9:18 PM IST
ಚಿಕ್ಕಮಗಳೂರು:ಚಿಕ್ಕಮಗಳೂರು ಪ್ರಕೃತಿ ಸೌಂದರ್ಯ ಹೊದ್ದು ಮಲಗಿದ್ದು, ತನ್ನೊಡಲಿನಲ್ಲಿ ನೂರಾರು ಪ್ರಾಣಿ ಸಂಕುಲವನ್ನು ಹೊಂದಿದೆ. ನಿತ್ಯ ಪ್ರವಾಸಿಗರು ಇಲ್ಲಿಯ ಪ್ರಾಣಿ ಸಂಕುಲವನ್ನು ನೋಡಿ ಕಣ್ತುಂಬಿಕೊಳ್ಳಲು ಬರುತ್ತಾರೆ. ಅವುಗಳ ಮುಗ್ಧತೆ, ಚಿನ್ನಾಟಕ್ಕೆ ಮನ ಸೋಲುತ್ತಾರೆ.
ಅದರಲ್ಲೂ ಮೈತುಂಬ ಬೆಳ್ಳಿಚುಕ್ಕಿಗಳನ್ನು ಇರಿಸಿಕೊಂಡು ಚೆಂಗನೆ ನೆಗೆದು ಕಾನನ ಸೇರುವ ಜಿಂಕೆಯನ್ನು ನೋಡಲು ಎರಡು ಕಣ್ಣುಗಳು ಸಾಲದು. ಅದೇ ಜಿಂಕೆಮರಿ ನಿಮ್ಮ ಮನೆಗೆ ಬಂದು ಬಿಟ್ಟರೇ! ಹೌದು….ಕಾಡಿಗೆ ಮೇಯಲು ಹೋಗಿದ್ದ ಹಸುಗಳ ಜೊತೆ ಜಿಂಕೆಮರಿಯೊಂದು ಮನೆಗೆ ಬಂದುಬಿಟ್ಟಿದೆ. ಅಷ್ಟೇ ಅಲ್ಲದೆ ನೇರವಾಗಿ ಮನೆಯೊಳಗೆ ಬಂದು ಬಿಟ್ಟಿದೆ. ಜಿಲ್ಲೆಯ ಮೂಡಿಗೆರೆ ತಾಲೂಕು ಕಿರುಗುಂದ ಗ್ರಾಮದ ಉದುಸೆ ಗ್ರಾಮದ ರಾಜೇಗೌಡರ ಮನೆಗೆ ಜಿಂಕೆಮರಿ ದಿಢೀರ್ ಬಂದು ಅಚ್ಚರಿ ಮೂಡಿಸಿದೆ.
ಎಂದಿನಂತೆ ಶುಕ್ರವಾರ ಹಸುಗಳನ್ನು ಮೇಯಲು ಕಾಡಿಗೆ ಬಿಟ್ಟಿದ್ದಾರೆ. ಹಸುಗಳು ಸಂಜೆ ಮನೆಗೆ ಬರುವಾಗ ಹಸುಗಳ ಜೊತೆ ಪುಟ್ಟ ಜಿಂಕೆಮರಿಯೂ ಬಂದಿದೆ. ಯಾರ ಭಯವಿಲ್ಲದೆ ಮನೆಯೊಳಗೆ ಬಂದು ಅಚ್ಚರಿ ಮೂಡಿಸಿದೆ. ಜಿಂಕೆಮರಿಯನ್ನು ಕಂಡ ಮನೆಯವರು ಸಂತೋಷಗೊಂಡು ಮುದ್ದಾಡಿದ್ದಾರೆ.
ಅದರೊಟ್ಟಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ. ಶುಕ್ರವಾರ ರಾತ್ರಿ ಮನೆಯಲ್ಲೇ ಇರಿಸಿಕೊಂಡು ಜೋಪಾನ ಮಾಡಿದ್ದಾರೆ. ಶನಿವಾರ ಬೆಳಗ್ಗೆ ಹಸುಗಳೊಟ್ಟಿಗೆ ಜಿಂಕೆಮರಿ ಮನೆಗೆ ಬಂದಿದ್ದನ್ನು ಅರಣ್ಯ ಇಲಾಖೆ ಸಿಬ್ಬಂದಿಗೆ ತಿಳಿಸಿದ್ದಾರೆ. ರಾಜೇಗೌಡರ ಮನೆಗೆ ಬಂದ ಅರಣ್ಯ ಸಿಬ್ಬಂದಿ ಬಂದು ಸುರಕ್ಷಿತವಾಗಿ ಜಿಂಕೆಮರಿಯನ್ನು ಕರೆದೊಯ್ದಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ
ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್ ಕುಮಾರ್ ಉದ್ಯಾವರ
Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ
ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು