ಸಂಚಾರಿ ವಿಜಯ್ ಸಮಾಧಿಗೆ ಪೂಜೆ
Team Udayavani, Jun 18, 2021, 10:44 PM IST
ಕಡೂರು: ಬೆಂಗಳೂರಿನಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಟ ಸಂಚಾರಿ ವಿಜಯ್ ಅವರ ಸಮಾಧಿಗೆ ಮೂರನೆ ದಿನವಾದ ಗುರುವಾರ ಪಂಚನಹಳ್ಳಿ ಗ್ರಾಮದಲ್ಲಿ ಕುಟುಂಬಸ್ಥರು ಮತ್ತು ಸ್ನೇಹಿತರು ದೀಪ ಹಚ್ಚಿ ಹಾಲು ತುಪ್ಪ ಎರೆದು ಸಾಂಪ್ರದಾಯಿಕವಾಗಿ ಪೂಜೆ ಸಲ್ಲಿಸಿದರು.
ಸಂಚಾರಿ ವಿಜಯ್ ಅವರ ಅಣ್ಣ ವಿರೂಪಾಕ್ಷ, ಅತ್ತಿಗೆ ಗೀತಾ, ತಮ್ಮ ಸಿದ್ದೇಶ್ ಅವರ ಪತ್ನಿ ರಜನಿ, ಚಿಕ್ಕಮ್ಮ ಕಮಲಮ್ಮ, ಸಾಕು ತಾಯಿ ಇಂದ್ರಮ್ಮ, ನಿರ್ದೇಶಕ ಮನ್ಸೋರೆ, ನಟರಾದ ಕೃಷ್ಣ ಹೆಬ್ಟಾಳ್, ಪತ್ರಕರ್ತ ಶರಣ ಹುಲ್ಲೂರ್, ಸಿನಿಮಾ ರಂಗದ ಗೆಳೆಯರಾದ ಧನುಷ್, ವೀರೇಂದ್ರ, ಮಲ್ಲಣ್ಣ, ವಿಜಯ್ ಕಾರು ಚಾಲಕ ದೇವರಾಜ್, ಪಂಚಹನಳ್ಳಿ ಸ್ನೇಹಿತರಾದ ಪಿ. ಮರುಳಸಿದ್ದಯ್ಯ, ಕೇಶವದಾಸ್, ರಾಘವೇಂದ್ರ, ಆರ್. ಪದ್ಮಾವತಿ, ಶರತ್, ಪ್ರದೀಪ ಪೂಜೆಯಲ್ಲಿ ಭಾಗವಹಿಸಿದ್ದರು. ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಮನ್ಸೋರೆ ವಿಜಯ್ ನಿಧನದಿಂದ ಮನಸ್ಸಿಗೆ ಬಹಳ ನೋವಾಗಿದೆ.
ರಾಷ್ಟ್ರಮಟ್ಟದ ಉತ್ತಮ ನಟ ಪ್ರಶಸ್ತಿ ಘೋಷಣೆಯ ದಿನ ಇಬ್ಬರೂ ಉಸಿರು ಬಿಗಿ ಹಿಡಿದು ಕಾಯುತ್ತಾ ಕುಳಿತಿದ್ದೆವು. ಪ್ರಶಸ್ತಿ ಪ್ರಕಟವಾಗುತ್ತಿದ್ದಂತೆ ನಮ್ಮ ಖುಷಿಗೆ ಪಾರವೇ ಇರಲಿಲ್ಲ. ಕಷ್ಟ ಸುಖಗಳನ್ನೆಲ್ಲ ಜೊತೆಯಾಗಿ ಎದುರಿಸುತ್ತಿದ್ದ ನನಗೆ ಇಂದು ವಿಜಿ ಇಲ್ಲ ಎನ್ನುವುದು ನಂಬಲಾರದ ಕಹಿ ಸತ್ಯವಾಗಿದೆ. ವಿಧಿಯಾಟದ ಮುಂದೆ ನಾವೆಲ್ಲ ಸೋತೆವು ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೋಟ ಅವರನ್ನು 2 ಲಕ್ಷ ಮತಗಳ ಅಂತರದಿಂದ ಗೆಲ್ಲಿಸಿ: ದೇವೇಗೌಡ
9 ವರ್ಷದ ಬಾಲಕಿ ಕಿಡ್ನ್ಯಾಪ್ ಮಾಡಿ ಡಿಕೆಶಿ ಆಸ್ತಿ ಬರೆಯಿಸಿಕೊಂಡ್ರು: ಎಚ್ಡಿಡಿ
ಕ್ರೀಡೆಯೊಂದಿಗೆ ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿನಿ ಡಿ.ಬಿ.ಶಬರಿ
HD Devegowda: ರಾಮೇಶ್ವರ ದೇವರ ದರ್ಶನ ಪಡೆದ ಮಾಜಿ ಪ್ರಧಾನಿ
ಸಜ್ಜನ ವ್ಯಕ್ತಿತ್ವದ ಜಯಪ್ರಕಾಶ್ ಹೆಗ್ಡೆ ಗೆಲ್ಲಿಸಿ: ಶಾಸಕ ಎಚ್.ಡಿ.ತಮ್ಮಯ್ಯ
MUST WATCH
ಹೊಸ ಸೇರ್ಪಡೆ
Bhadravathi: ಲಾರಿ ಡಿಕ್ಕಿ, ರೈಲು ಹಳಿಗಳು ಏರುಪೇರು; ಎರಡೂವರೆ ತಾಸು ಪ್ರಯಾಣಿಕರು ಹೈರಾಣು
Daily Horoscope: ಕೊಟ್ಟ ಮಾತಿಗೆ ತಪ್ಪದಂತೆ ಎಚ್ಚರಿಕೆ ಇರಲಿ,ಅನವಶ್ಯ ವಿವಾದಗಳಿಂದ ದೂರವಿರಿ
Elections; ದೇಶದಲ್ಲಿ ಹಂತ 1: ಬಹಿರಂಗ ಪ್ರಚಾರ ಅಂತ್ಯ, ನಾಳೆ ಮತದಾನ
IPL; ಪಂಜಾಬ್ ಕಿಂಗ್ಸ್-ಮುಂಬೈ ಇಂಡಿಯನ್ಸ್ : ಒಂದೇ ದೋಣಿಯ ಪಯಣಿಗರು
Lok Sabha Polls 2024; ಕರ್ನಾಟಕದ ನಂಟು ಹೊರರಾಜ್ಯದಲ್ಲಿ ಸ್ಪರ್ಧೆ