ನಿವೇಶನಕ್ಕೆ ಆಗ್ರಹಿಸಿ ಪ್ರತಿಭಟನೆ
ಭೂಮಿ-ವಸತಿ ವಂಚಿತರ ಹೋರಾಟ ಸಮಿತಿ ಆಕ್ರೋಶ
Team Udayavani, Feb 25, 2021, 5:57 PM IST
ಚಿಕ್ಕಮಗಳೂರು: ನಿವೇಶನ ರಹಿತ ಬಡವರಿಗೆ ಭೂಮಿ ಮತ್ತು ನಿವೇಶನ ನೀಡಬೇಕೆಂದು ಒತ್ತಾಯಿಸಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಬುಧವಾರ ನಗರದ ಆಜಾದ್ ಪಾರ್ಕ್ ವೃತ್ತದಲ್ಲಿ ಜಮಾವಣೆಗೊಂಡ ಸಮಿತಿ ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ, ಶೀಘ್ರದಲ್ಲಿ ಬಡಜನರಿಗೆ ಭೂಮಿ ಮತ್ತು ನಿವೇಶನ ನೀಡಬೇಕೆಂದು ಆಗ್ರಹಿಸಿದರು.
ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯ ಸಂಚಾಲಕ ಗೌಸ್ಮೊಹಿದ್ದೀನ್ ಮಾತನಾಡಿ, ಶ್ರೀಮಂತರು ನೂರಾರು ಎಕರೆ ಜಮೀನು ಒತ್ತುವರಿ ಮಾಡಿದ್ದರು ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ಬಡಜನರು ವಾಸವಾಗಿರುವ ಜಾಗವನ್ನು ಖಾಲಿ ಮಾಡಿಸುತ್ತಾರೆ. ಆ ನಿರಾಶ್ರಿತರಿಗೆ ಭೂಮಿ ಮತ್ತು ನಿವೇಶನ ನೀಡದೆ ವಂಚಿಸಲಾಗುತ್ತಿದೆ ಎಂದು ಆರೋಪಿಸಿದರು.
ಮೂಡಿಗೆರೆ ತಾಲೂಕು ಕಂದೂರು ಗ್ರಾಮದ ಸರ್ವೆ ನಂಬರ್ 202 ಮತ್ತು 205ರಲ್ಲಿ ಮನೆ ನಿರ್ಮಿಸಿಕೊಂಡವರನ್ನು ಕಳೆದ 15ವರ್ಷಗಳ ಹಿಂದೇ ಒಕ್ಕಲೆಬ್ಬಿಸಲಾಗಿದೆ. ಆ ನಿರಾಶ್ರಿತರಿಗೆ ಇದುವರೆಗೂ ಭೂಮಿ ಅಥವಾ ನಿವೇಶನ ನೀಡಿಲ್ಲ. ಸತ್ತಿಹಳ್ಳಿ ಗ್ರಾಮದಲ್ಲಿ ಭೂ ಮಾಲಿಕರೊಬ್ಬರು
ಅಕ್ರಮವಾಗಿ ಭೂಮಿ ಅತಿಕ್ರಮಿಸಿದ್ದರು ಅರಣ್ಯ ಇಲಾಖೆ ಅ ಧಿಕಾರಿಗಳು ಹೋಗುವುದಿಲ್ಲ. ಬಡವರು ಗುಡಿಸಲು ಕಟ್ಟಿಕೊಂಡರೆ ಕಿತ್ತು ಹಾಕುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
2019ರಲ್ಲಿ ಇಂದಾವರ ಗ್ರಾಮದಲ್ಲಿ ಟೆಂಟ್ಗಳನ್ನು ತೆರವುಗೊಳಿಸಿ ಜನರು ಬೀದಿಗೆ ಬಂದಿದ್ದು, ಅವರಿಗೆ ಭೂಮಿ ಮತ್ತು ನಿವೇಶನ ನೀಡಿಲ್ಲ.
ಶ್ರೀಮಂತರು ನೂರಾರು ಎಕರೆ ಭೂಮಿ ಒತ್ತುವರಿ ಮಾಡಿ ರೆಸಾಲ್ಟ್ ಹೋಂಸ್ಟೇ ಮಾಡಿಕೊಂಡಿದ್ದಾರೆ. ಬಡವರು ಬದುಕಲು ನಿವೇಶನ
ಭೂಮಿ ಕೇಳಿದರೆ ಸರ್ಕಾರಕ್ಕೆ ನೀಡಲು ಸಾಧ್ಯವಾಗುತ್ತಿಲ್ಲ ಎಂದ ಅವರು ನಿರಾಶ್ರಿತರಿಗೆ ಶೀಘ್ರದಲ್ಲೇ ಭೂಮಿ ಮತ್ತು ನಿವೇಶನ ನೀಡಬೇಕು.
ಇಲ್ಲದಿದ್ದರೆ ಜಿಲ್ಲಾಡಳಿತ ಮತ್ತು ನಗರಸಭೆ ಮುಂದೆ ಟೆಂಟ್ ಹಾಕಿ ವಾಸ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಭೂಮಿ ಮತ್ತು ವಸತಿ ವಂಚಿತರ ಹೋರಾಟ ಸಮಿತಿ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್, ಎನ್.ವೆಂಕಟೇಶ್, ಎಚ್.
ಎನ್.ಪೂರ್ಣೇಶ್, ಟಿ.ಎಲ್.ಗಣೇಶ್, ಕೃಷ್ಣಮೂರ್ತಿ, ನಾಸೀರ್, ಆವುತಿ ಮಂಜು, ರಾಜೇಶ್ವರಿ, ಖೈರುನಿಸ್ತ, ಫರಾಜ್, ನಗೀನಾ, ಪರ್ವಿನ್ ಉಪಸ್ಥಿತರಿದ್ದರು.
ಓದಿ : ಬಹಿರಂಗ ಟೀಕೆ ಸಲ್ಲದು, ಪಕ್ಷದ ವೇದಿಕೆಯಲ್ಲಿ ಚರ್ಚಿಸಲಿ : ಯತ್ನಾಳಗೆ ಈಶ್ವರಪ್ಪ ಕಿವಿಮಾತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
Congress ತುಷ್ಟೀಕರಣ ರಾಜಕೀಯಕ್ಕೆ ಮುಸ್ಲಿಂ ಮೀಸಲಾತಿಗೆ ಬೆಂಬಲಿಸುತ್ತದೆ: ಬೊಮ್ಮಾಯಿ
ಭಾರತದಲ್ಲಿ ರಿಲೀಸ್ಗೂ ಮುನ್ನ ʼಮಂಕಿ ಮ್ಯಾನ್ʼ ಹೆಚ್ ಡಿ ಕಾಪಿ ಲೀಕ್: ವಿಳಂಬ ಯಾಕೆ?
Bagalkote: ಯತ್ನಾಳ ಗೊಡ್ಡ ಎಮ್ಮಿ ಇದ್ದಂಗ: ಕಾಶಪ್ಪನವರ ಟೀಕೆ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Politics: ಮೋದಿ ಸಾರ್ವಜನಿಕರಲ್ಲಿ ಕೋಮು ಭಾವನೆ ಹುಟ್ಟು ಹಾಕುತ್ತಿದ್ದಾರೆ; ಎಚ್.ಕೆ. ಪಾಟೀಲ