ಅವಧಿ ಮುಗಿದ ಗ್ಲೂಕೋಸ್ ಪೊಟ್ಟಣ ವಿತರಣೆಗೆ ಆಕ್ರೋಶ
Team Udayavani, Apr 21, 2021, 6:43 PM IST
ಚಿಕ್ಕಮಗಳೂರು: ನಗರದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜನೌಷಧ ಮೆಡಿಕಲ್ ಅಂಗಡಿಯಲ್ಲಿ ಅವಧಿ ಮುಗಿದ (9 ವರ್ಷ ಹಳೆಯ) ಗ್ಲೂಕೋಸ್ ಪೊಟ್ಟಣ ನೀಡಿದ್ದಾರೆಂದು ಗ್ರಾಹಕರೊಬ್ಬರು ಆರೋಪಿಸಿದ್ದಾರೆ.
ನಗರದ ನಿವಾಸಿ ಗುರು ಎಂಬುವವರ ಚಿಕ್ಕಪ್ಪ ಅನಾರೋಗ್ಯದಿಂದ ಸರ್ಕಾರಿ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆ ನರ್ಸ್ ಒಬ್ಬರು ಗುರು ಚಿಕ್ಕಪ್ಪ ಅವರಿಗೆ ಎಳನೀರು ಮತ್ತು ಗ್ಲೂಕೋಸ್ ನೀಡುವಂತೆ ತಿಳಿಸಿದ್ದು ಅದರಂತೆ ಆಸ್ಪತ್ರೆಯ ಆವರಣದಲ್ಲಿರುವ ಜನೌಷಧ ಕೇಂದ್ರದಲ್ಲಿ ಗುರು ಚಿಕ್ಕಪ್ಪ ಗ್ಲೂಕೋಸ್ ಖರೀದಿಸಿದ್ದು, 26 ರೂ. ಬೆಲೆಯ ಗ್ಲೂಕೋಸ್ ಪೊಟ್ಟಣವನ್ನು 13 ರೂ.ಗೆ ಮೆಡಿಕಲ್ ಸ್ಟೋರ್ ನವರು ನೀಡಿದ್ದಾರೆ.
ಕಡಿಮೆ ಬೆಲೆಗೆ ಗ್ಲೂಕೋಸ್ ನೀಡಿದ್ದರಿಂದ ಅನುಮಾನಗೊಂಡ ಗುರು ಗ್ಲೂಕೋಸ್ ತಯಾರಿಕೆ ದಿನಾಂಕ, ಅವಧಿ, ಬೆಲೆ ನಮೂದಿಸಿದ ಸ್ಥಳ ಪರಿಶೀಲನೆ ಮಾಡಿದಾಗ ಲೇಬಲ್ ಅಂಟಿಸಿರುವುದು ಕಂಡು ಬಂದಿದೆ. ಇದನ್ನು ಖಚಿತ ಪಡೆಸಿಕೊಳ್ಳುವ ಉದ್ದೇಶದಿಂದ ಗುರು ಅವರು ಮತ್ತೋಂದು ಗ್ಲೂಕೋಸ್ ಪೊಟ್ಟಣ ಖರೀದಿಸಿದ್ದು, ಅದರ ಮೇಲೆ ಅಂಟಿಸಿದ್ದ ಲೇಬಲ್ ತಗೆದು ಪರಿಶೀಲಿಸಿದಾಗ ಅವ ಧಿ ಮುಗಿದ ಗ್ಲೂಕೋಸ್ ನೀಡಿರುವುದು ತಿಳಿದು ಬಂದಿದೆ.
2012ರಲ್ಲಿ ತಯಾರಾದ ಗ್ಲೂಕೋಸ್ ಪೊಟ್ಟಣದ ಮೇಲೆ 2021 ಏಪ್ರಿಲ್ ಎಂದು ಬರೆದಿರುವ ಲೇಬಲ್ ಅಂಟಿಸಿ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದ್ದು, 24 ತಿಂಗಳು ಅವ ಧಿಯ ಗ್ಲೂಕೋಸನ್ನು ಲೇಬಲ್ ಅಂಟಿಸಿ 9 ವರ್ಷಗಳ ಬಳಿಕವೂ ಮಾರಾಟ ಮಾಡುತ್ತಿರುವುದನ್ನು ಕಂಡು ಜಿಲ್ಲೆಯ ಜನತೆ ಬೆಚ್ಚಿ ಬೀಳುವಂತೆ ಮಾಡಿದೆ. ಸರ್ಕಾರ ತೆರೆದಿರುವ ಜನೌಷಧ ಕೇಂದ್ರಗಳಲ್ಲಿ ಅವ ಧಿ ಮುಗಿದ ಗ್ಲೂಕೋಸ್ಗೆ ಲೇಬಲ್ ಅಂಟಿಸಿ ಗ್ರಾಹಕರಿಗೆ ಮೋಸ ಮಾಡಿದರೆ, ಗ್ರಾಹಕರು ಯಾರನ್ನು ನಂಬಬೇಕು. ಗ್ರಾಹಕರಿಗೆ ಮೋಸ ಮಾಡುವ ಜನೌಷಧ ಕೇಂದ್ರದ ಮೇಲೆ ಆರೋಗ್ಯ ಇಲಾಖೆ ಮತ್ತು ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ
MUST WATCH
ಹೊಸ ಸೇರ್ಪಡೆ
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ
ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ
ಕೊಡಪಾಡಿ: ಮೃತ ವ್ಯಕ್ತಿಯ ಹೆಸರಲ್ಲಿ ನಕಲಿ ಸಹಿ ಬಳಸಿ ಪವರ್ ಆಫ್ ಅಟಾರ್ನಿ, ದೂರು ದಾಖಲು
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್