ಕೋವಿಡ್ ನಿಯಮ ಪಾಲಿಸಿ: ನ್ಯಾ| ನಂಜೇಗೌಡ
Team Udayavani, Apr 30, 2021, 10:45 PM IST
ತರೀಕೆರೆ: ಪಟ್ಟಣ ಮತ್ತು ಸುತ್ತಮುತ್ತಲ ಪ್ರದೇಶಗಳಿಂದ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದಾರೆ ಎಂಬುದು ಆತಂಕಕಾರಿ ವಿಚಾರ ಮತ್ತು ಅತ್ಯಂತ ಗಂಭೀರವಾದದ್ದು ಕೂಡ. ಜನರ ಹಿತದೃಷ್ಟಿಯಿಂದ ಸರಕಾರ ಅನೇಕ ನಿಯಮಗಳನ್ನು ರೂಪಿಸಿದೆ.
ಅದನ್ನು ಪಾಲಿಸಬೇಕಾಗಿದೆ. ಈ ಮೂಲಕ ನಿಮ್ಮನ್ನು ನೀವು ರಕ್ಷಿಸಿಕೊಳ್ಳಬೇಕಾಗಿದೆ ಮತ್ತು ನಿಮ್ಮ ಕುಟುಂಬವನ್ನು ಕೂಡ ರಕ್ಷಿಸಬೇಕಾದ ಹೊಣೆಗಾರಿಕೆ ನಿಮ್ಮ ಮೇಲಿದೆ ಎಂದು ಹಿರಿಯ ಸಿವಿಲ್ ನ್ಯಾಯಾ ಧೀಶರಾದ ಸಿ. ನಂಜೇಗೌಡ ಹೇಳಿದರು.
ಎಪಿಎಂಸಿ ಆವರಣದಲ್ಲಿ ನಡೆಯುತ್ತಿದ್ದ ಮಾರುಕಟ್ಟೆಗೆ ಭೇಟಿ ನೀಡಿ ರೈತರು, ಸಾರ್ವಜನಿಕರು ಮತ್ತು ವರ್ತಕರನ್ನುದ್ದೇಶಿಸಿ ಅವರು ಮಾತನಾಡಿದರು. ಹಸಿವಿನಿಂದ ಇರುವವರು ಕಂಡು ಬಂದಲ್ಲಿ ಅವರ ಬಗ್ಗೆ ಅಧಿ ಕಾರಿಗಳ ಗಮನಕ್ಕೆ ತನ್ನಿ. ಅದರಿಂದ ಹಸಿವಿನಿಂದ ಬಳಲುತ್ತಿರುವರ ವ್ಯಕ್ತಿಗೆ ಹೊಟ್ಟೆ ತುಂಬಿಸುವ ಕೆಲಸವಾಗುತ್ತದೆ. ಕೊರೊನಾ ಸೋಂಕು ಮಹಾಮಾರಿಯಂತೆ ಹಬ್ಬುತ್ತಿದೆ. ಇದರಿಂದ ನಮ್ಮನ್ನು ನಾವು ರಕ್ಷಿಸಿಕೊಳ್ಳಬೇಕಾಗಿದೆ. ಜೊತೆಗೆ ಕುಟುಂಬವನ್ನು ರಕ್ಷಣೆ ಮಾಡಿಕೊಳ್ಳಬೇಕಾಗಿದೆ ಎಂದರು. ಮುಖ್ಯಾ ಧಿಕಾರಿ ಮಹಂತೇಶ್ ಮಾತನಾಡಿದರು.
ನ್ಯಾಯಾಧಿ àಶ ರಾಮಮೂರ್ತಿ, ಡಿವೈಎಸ್ಪಿ ಏಗನಗೌಡರ್, ತಹಶೀಲ್ದಾರ್ ಜಿ.ಗೀತಾ, ಡಾ| ಪ್ರಸನ್ನಕುಮಾರ್, ವಕೀಲರ ಸಂಘದ ಅದ್ಯಕ್ಷ ಜಿ.ಎನ್. ಚಂದ್ರಶೇಖರ್ ಇನ್ನಿತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi Chikmagalur Lok Sabha Constituency: ಕಾಫಿನಾಡಲ್ಲಿ ಕೈ-ಕಮಲ ತೀವ್ರ ಪೈಪೋಟಿ
ಮಲೆನಾಡು ಸಮಸ್ಯೆ ಪ್ರಸ್ತಾಪಿಸಿದ್ದು ಜಯಪ್ರಕಾಶ್ ಹೆಗ್ಡೆ: ವಿಠಲ ಹೆಗ್ಡೆ
Chikkamagaluru: ವಿದ್ಯುತ್ ಶಾಕ್ ನಿಂದ ಲೈನ್ ಮ್ಯಾನ್ ಸಾವು
Udupi-Chikmagalur Poll: ಬ್ರಹ್ಮಾವರ ಬ್ಲಾಕ್ ಕಾಂಗ್ರೆಸ್ ಸಮಿತಿ- ಇಂದು ಸಾರ್ವಜನಿಕ ಸಭೆ
ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್ ಹೆಗ್ಡೆ